NEWSಕೃಷಿನಮ್ಮಜಿಲ್ಲೆ

ಬನ್ನೂರು ದೊಡ್ಡ ಕೆರೆ ಎಡದಂಡೆ, ಬಲದಂಡೆ ನಾಲೆಗಳ ಹೂಳು ತೆಗೆಯಲು ರೈತ ಮುಖಂಡರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಬನ್ನೂರು ದೊಡ್ಡ ಕೆರೆಯ ಎಡದಂಡೆ ನಾಲೆ, ಬಲದಂಡೆ ನಾಲೆ ಹಾಗೂ ಚಿಕ್ಕ ದೇವರಾಯ ಬಡಾವಣೆ ನಾಲೆ ಮತ್ತು ಕೆರೆಯ ಅಚ್ಚುಕಟ್ಟು ಭಾಗದ ಹಳ್ಳ ಕೊಳ್ಳಗಳಲ್ಲಿ ಸರಾಗವಾಗಿ ನೀರು ಹರಿಯಲು ಗಿಡ ಗಂಟಿಗಳು ಹಾಗೂ ಹೂಳು ತೆಗೆಯುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕ ಒತ್ತಾಯಿಸಿದೆ.

ಈ ಸಂಬಂಧ ಇಂದು ಬನ್ನೂರು ಗ್ರಾಮಾಂತರ ಘಟಕ ಪದಾಧಿಕಾರಿಗಳು ಮಾದೇಗೌಡನ ಹುಂಡಿಯಲ್ಲಿರುವ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಒತ್ತಾಯ ಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಮ್ಮ ವ್ಯಾಪ್ತಿಗೆ ಬರುವ ಬನ್ನೂರು ದೊಡ್ಡ ಕೆರೆಯ ಎಡದಂಡೆ ನಾಲೆ, ಬಲದಂಡೆ ನಾಲೆ ಹಾಗೂ ಚಿಕ್ಕ ದೇವರಾಯ ಬಡಾವಣೆ ನಾಲೆಗಳಲ್ಲಿ ವಿಪರೀತ ಗಿಡ ಗಂಟಿಗಳು ಬೆಳೆದು ಹೂಳು ತುಂಬಿರುವುದರಿಂದ ಕೃಷಿ ಚಟುವಟಿಕೆಗೆ ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯದೆ ರೈತರಿಗೆ ತುಂಬಾ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.

ಇನ್ನು ಬನ್ನೂರು ದೊಡ್ಡಕೆರೆ ಆಚ್ಚುಕಟ್ಟು ತಳಭಾಗದಲ್ಲಿ ಹಳ್ಳಕೊಳ್ಳಗಳು ಹೂತು ಹೋಗಿದ್ದು ಮಳೆಗಾಲದಲ್ಲಿ ನೀರು ಹಳ್ಳದಲ್ಲೀ ಸರಾಗವಾಗಿ ಹರಿಯದೆ ರೈತರ ಜಮೀನು ಹಾಗೂ ಬೆಳೆಗಳ ಮೇಲೆ ಹರಿದು ತುಂಬಾ ನಷ್ಟವಾಗುತ್ತಿದೆ. ಇದರಿಂದ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಇನ್ನೊಂದೆಡೆ ಕಳೆದ ವರ್ಷ ತಮಿಳುನಾಡಿಗೆ ನೀರು ಹರಿಸಿದ ಕಾರಣ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಬಾರಿಯಾದರು ಕೃಷಿ ಚಟುವಟಿಕೆ ಕೈಗೊಳ್ಳಲು ತುರ್ತಾಗಿ ಹೂಳು ಹಾಗೂ ಗಿಡ ಗಂಟಿಗನ್ನೂ ತೆಗೆಸಿ ನಾಲೆಗಳಿಗೆ ನೀರು ಹರಿಸಿ ಬೆಳೆಗಳ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

ಬನ್ನೂರು ಪೂರ್ಣಿಮಾ ಬಾರ್ ಪಕ್ಕದ ಹಳ್ಳ, ಗಾಣಿಗನ ಕೊಪ್ಪಲು ಹತ್ತಿರ ಹಾಗೂ ಅತ್ತಹಳ್ಳಿ ನಂಜಯ್ಯನ ಪುಟ್ಟರಾಜು ಜಮೀನು ಬಳಿ ಇರುವ ಹಳ್ಳಕ್ಕೆ ಜಮೀನಿಗೆ ನೀರು ಪೂರೈಸಲು ಒಡ್ಡು ನಿರ್ಮಾಣ ಮಾಡಿದ್ದು ಒಡ್ಡುಗಳು ಸಂಪೂರ್ಣ ಒಡೆದು ಹೋಗಿರುವ ಕಾರಣ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ ಬಿ.ಬೆಟ್ಟಹಳ್ಳಿ – ಕುಂತನಹಳ್ಳಿ ನಡುವೆ ಇರುವ ಎಸ್ಕೇಪ್ ಹಳ್ಳದ ಒತ್ತುವರಿಯಿಂದ ಹಳ್ಳ ಮುಚ್ಚಿ ಹೋಗಿದ್ದು ಮಳೆಯ ನೀರು ಹಾಗೂ ಕೆರೆಯ ನೀರು ಹೆಚ್ಚಾದಾಗ ರೈತರ ಜಮೀನುಗಳ ಬೆಳೆಗಳ ಮೇಲೆ ನೀರು ಹರಿದು ಬೆಳೆ ಸಂಪೂರ್ಣ ನಾಶವಾಗಿ ನಷ್ಟ ಅನುಭವಿಸುತ್ತಿದ್ದಾರೆ, ಆದ್ದರಿಂದ ಮಳೆಗಾಲದಲ್ಲಿ ಆಗುವ ಆನಾವುತ ತಪ್ಪಿಸಲು ಸೂಕ್ತ ಕ್ರಮ ಕೈಗೊಂಡು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಇನ್ನು ಒತ್ತಾಯ ಪತ್ರ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ 15 ದಿವಸದೊಳಗೆ ಕ್ರಮ ಕೈಗೊಳ್ಳದಿದ್ದರೆ ತಮ್ಮ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಗಮನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರುವುದಾಗಿ ವಿವರಿಸಿದರು.

ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕದ ಮುಖಂಡರಾದ ಅತ್ತಹಳ್ಳಿ ಸಿ.ಲಿಂಗಣ್ಣ, ಪಿ.ಚೇತನ್, ಬನ್ನೂರು ಸೂರಿ, ಕುಂತನಹಳ್ಳಿ ಸ್ವಾಮಿ, ರಾಮಕೃಷ್ಣ, ಹೊನ್ನಯ್ಯ, ಕಗ್ಗಲೀಪುರ ಮಲ್ಲಿಕಾರ್ಜುನ ಹನುಮನಾಳು ಚಿಕ್ಕಸ್ವಾಮಿ, ವೆಂಕಟೇಶ್ ಮುಂತಾದವರು ಇದ್ದರು.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ