NEWSನಮ್ಮಜಿಲ್ಲೆನಮ್ಮರಾಜ್ಯ

ಶೀಘ್ರದಲ್ಲೇ 4 ಸಾವಿರ ಬಸ್‌ ಖರೀದಿ, 2ಸಾವಿರ ಬಿಎಂಟಿಸಿಗೇ ಮೀಸಲು : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಶಕ್ತಿ ಯೋಜನೆ ಜಾರಿಯಾದ ಒಂದು ತಿಂಗಳಲ್ಲಿ ಆದಾಯ ಹೆಚ್ಚಾಗಿದ್ದು, ಮಹಿಳಾ ಪ್ರಯಾಣಿಕರ ಓಡಾಟವು ಜಾಸ್ತಿಯಾಗಿರುವುದಕ್ಕೆ ಇದಕ್ಕೆ ಕಾರಣ.

ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡುತ್ತಾ ಶಕ್ತಿ ಯೋಜನೆಯಿಂದ ನಿಗಮಗಳಿಗೆ ಪವರ್​​​ ತುಂಬುತ್ತಿದ್ದಾರೆ. ಮಹಿಳೆಯರ ಜತೆ ಪುರುಷರ ಓಡಾಟ ಕೂಡಾ ಹೆಚ್ಚಾಗಿದ್ದು ನಷ್ಟದಲ್ಲಿದ್ದ ನಿಗಮಗಳು ಚೇತರಿಕೆಯತ್ತ ಮುಖಮಾಡಿವೆ. ಆದರೆ ಪ್ರಯಾಣಿಕರು ಹೆಚ್ಚಾಗುತ್ತಿದ್ದರೂ ಬಸ್‌ಗಳ ಸಂಖ್ಯೆ ಮಾತ್ರ ಅಷ್ಟೇ ಇದೆ. ಇದರಿಂದ ನಿತ್ಯ ಒಂದಿಲ್ಲೊಂದು ಸಮಸ್ಯೆ ಆಗುತ್ತಲೇ ಇದೆ.

ಶಕ್ತಿಯಿಂದ ರಶ್‌ ಆಗುತ್ತಿರುವ ಪ್ರಯಾಣಿಕರ ಸಂಕ್ಯೆಯನ್ನು ಕಡಿಮೆ ಮಾಡಬೇಕು ಎಂದರೆ ಇನ್ನಷ್ಟು ಹೊಸ ಬಸ್‌ಗಳು ರಸ್ತೆಗಿಳಿಯಬೇಕು. ಹೀಗಾಗಿ ಸಾರಿಗೆ ಇಲಾಖೆ ಮತ್ತೆ ಒಟ್ಟು 10 ಸಾವಿರ ಬಸ್‌ಗಳ ಖರೀದಿಗೆ ಮುಂದಾಗಿದೆ. ಅಲ್ಲದೆ ಅತೀ ಶೀಘ್ರದಲ್ಲೇ 4 ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಮುಂದಿನ 3 ತಿಂಗಳಲ್ಲಿ ತುರ್ತಾಗಿ 4 ಸಾವಿರ ಬಸ್​ ಖರೀದಿ ಮಾಡಲಿದ್ದು, ಬಿಎಂಟಿಸಿಗೆನೇ 2 ಸಾವಿರ ಹೊಸ ಬಸ್​ಗಳನ್ನು ನೀಡುವ ಪ್ಲಾನ್ ಮಾಡಿದೆ. ಸದ್ಯ ಬಿಎಂಟಿಸಿ ಬಳಿ 6,500 ಬಸ್​ಗಳು ಕಾರ್ಯ ನಿರ್ವಹಿಸುತ್ತಿವೆ. ಹಲವು ಬಸ್​ಗಳು 10 ಲಕ್ಷ ಕಿ.ಮೀಗೂ ಹೆಚ್ಚು ಓಡಾಟ ನಡೆಸಿವೆ.

ಹೀಗಾಗಿ ಈ ಬಸ್​ಗಳನ್ನು ಸ್ಕ್ರ್ಯಾಪ್ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಬಸ್ ಕೊರತೆಯಿಂದ ಕೆಲ ರೂಟ್​ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಹೊಸ ಬಸ್ ಖರೀದಿ ಬಳಿಕ ಕ್ಯಾನ್ಸಲ್ ಆದ ರೂಟ್ ಪುನಾರಂಭ ಮಾಡಲು ಹೊಸ ಬಸ್​​ಗಳು ಸಹಾಯಕಾರಿಯಾಗಲಿವೆ ಎಂದು ಸಚಿವರ ಹೇಳಿದ್ದಾರೆ.

ಶಕ್ತಿ ಯೋಜನೆ ಬಳಿಕ ಶಾಲಾ, ಕಾಲೇಜು ಮಕ್ಕಳಿಗೂ ತೊಂದರೆಯುಂಟಾಗಿದ್ದು, ಅದನ್ನು ಸರಿ ಮಾಡೋಕೆ ಬಸ್​ಗಳ ಅಗತ್ಯವಿದೆ. ಹೀಗಾಗಿ ಹೊಸ ಬಸ್​ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ