NEWSದೇಶ-ವಿದೇಶವಿದೇಶ

ಶ್ರೀಲಂಕಾಗೆ ಗಿಫ್ಟ್​ ನೀಡಿದ್ದ ಆನೆಯನ್ನು ವಾಪಸ್‌ ಪಡೆದ ಥೈಲ್ಯಾಂಡ್ ರಾಜಮನೆತನ

ವಿಜಯಪಥ ಸಮಗ್ರ ಸುದ್ದಿ

ಥೈಲ್ಯಾಂಡ್: ಕಳೆದ 20 ವರ್ಷದ ಹಿಂದೆ ಶ್ರೀಲಂಕಾಗೆ ಆನೆಯೊಂದನ್ನು ಗಿಫ್ಟ್​ ಆಗಿ ನೀಡಿದ್ದ ಥೈಲ್ಯಾಂಡ್ ರಾಜಮನೆತನ ಆ ಆನೆಯನ್ನು ವಾಪಸ್‌ ತನ್ನ ದೇಶಕ್ಕೆ ಪಡೆದುಕೊಂಡಿದೆ.

ಎರಡು ದೇಶಗಳ ರಾಜತಾತಂತ್ರಿಕ ವ್ಯವಸ್ಥೆ ಚೆನ್ನಾಗಿರಲೆಂದು ಥಾಯ್‌ಸಾಕ್​ ಸುರಿನ್​ ಹೆಸರಿನ ಆನೆಯನ್ನು ಕೊಲಂಬೊಗೆ ಉಡುಗೊರೆಯಾಗಿ ಥೈಲ್ಯಾಂಡ್ ರಾಜಮನೆತನ ನೀಡಿತ್ತು. ಆದರೀಗ 20 ವರ್ಷಗಳ ಬಳಿ ಸಾಕ್‌ ಸುರಿನ್​ ಆನೆಯನ್ನು ವಾಪಸ್‌ ತನ್ನ ದೇಶಕ್ಕೆ ಪಡೆದುಕೊಂಡಿದೆ.

ಆನೆಯನ್ನು ಏರ್​ಲಿಫ್ಟ್​ ಮಾಡುವ ಮೂಲಕ ಬ್ಯಾಂಕಾಕ್​ಗೆ ವಾಪಸ್‌ ತೆಗೆದುಕೊಂಡು ಹೋಗಿಲಾಗಿದೆ. ಸಾಕ್​ ಸುರಿನ್​ ಆನೆಗೆ 29 ವರ್ಷ ವಯಸ್ಸಾಗಿದ್ದು ಶ್ರೀಲಂಕಾದಲ್ಲಿ ಇದಕ್ಕೆ ಮುತ್ತುರಾಜ್​ ಎಂದು ಹೆಸರಿಟ್ಟಿದ್ದರು.

ಅಂದು ಶ್ರೀಲಂಕಾದ ದಕ್ಷಿಣದಲ್ಲಿರುವ ಬೌದ್ಧ ದೇವಸ್ಥಾನಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಕಳೆದ ವರ್ಷ ಮುತ್ತುರಾಜ್​ನನ್ನು ಸರಿಯಾಗಿ ನೋಡುಕೊಳ್ಳುತ್ತಿಲ್ಲ ಎಂಬ ವರದಿ ಕೇಳಿಬಂದ ನಂತರ ಥಾಯ್​ ಅಧಿಕಾರಿಗಳು ಆನೆಯನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು.

ಅದರಂತೆ ವಾಪಸ್‌ ಕಳಿಸಿಕೊಡಲಾಗಿದೆ. ಇನ್ನು ಮುತ್ತುರಾಜ್​ 4 ಸಾವಿರ ಕೆಜಿಯಿದ್ದು, ಥೈಲ್ಯಾಂಡ್ ವಾಣಿಜ್ಯ ವಿಮಾನ ಇಲ್ಯುಶಿನ್​ ಐಎಲ್​-76ರ ಮೂಲಕ ದುಬಾರಿ ಖರ್ಚು ಮಾಡಿ ತನ್ನ ದೇಶಕ್ಕೆ ಕರೆದೊಯ್ದಿದೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್ ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆ... ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ