NEWSನಮ್ಮಜಿಲ್ಲೆನಮ್ಮರಾಜ್ಯ

ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು!

ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ನಿಗಮಗಳು, ಮಂಡಳಿಗಳು, ಸಂಸ್ಥೆಗಳು ಹಾಗೂ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಮಾನ ವೇತನ, ಸಮಾನ ಸೌಲಭ್ಯ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಹಾಗೂ ಏಕೀಕೃತ ಸೇವಾ ನಿಯಮ ಜಾರಿಗೊಳಿಸುವ ಕುರಿತು ನ್ಯಾಯ ಕೋರಿ ಮನವಿ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ನಿಗಮಗಳು, ಮಂಡಳಿಗಳು, ಸಂಸ್ಥೆಗಳು ಹಾಗೂ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಮಾನ ವೇತನ, ಸಮಾನ ಸೌಲಭ್ಯ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಹಾಗೂ ಏಕೀಕೃತ ಸೇವಾ ನಿಯಮ ಜಾರಿಗೊಳಿಸುವ ಕುರಿತು ನ್ಯಾಯ ಕೋರಿ ಕರ್ನಾಕಟದ ಹೈ ಕೋರ್ಟ್‌ನ ನ್ಯಾಯಮೂರ್ತಿಗಳಲ್ಲಿ ಸಾರಿಗೆ ನೌಕರರು ಮನವಿ ಮಾಡಿದ್ದಾರೆ.

ನಮಗೆ ಈ ನಾಲ್ಕು ವರ್ಷಕ್ಕೆ ಒಮ್ಮೆ ಬೀದಿಗಿಳಿದು ವೇತನ ಪಡೆಯುವ ಈ ಜಂಜಾಟಕ್ಕೆ ವಿರಾಮ ನೀಡಿ ನಮಗೆ ಶಾಶ್ವತ ಪರಿಹಾರ ಕೊಡುವುದಕ್ಕೆ ಉಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿರುವ ಪತ್ರವನ್ನು ನ್ಯಾಯಮೂರ್ತಿಗಳಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?:
ರವರಿಗೆ:
ಮಾನ್ಯ ನ್ಯಾಯಮೂರ್ತಿಗಳವರಿಗೆ,
High Court of Karnataka
ಬೆಂಗಳೂರು – 560001.

ವಿಷಯ: ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ನಿಗಮಗಳು, ಮಂಡಳಿಗಳು, ಸಂಸ್ಥೆಗಳು ಹಾಗೂ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಮಾನ ವೇತನ, ಸಮಾನ ಸೌಲಭ್ಯ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಹಾಗೂ ಏಕೀಕೃತ ಸೇವಾ ನಿಯಮ ಜಾರಿಗೊಳಿಸುವ ಕುರಿತು ನ್ಯಾಯ ಕೋರಿ ಮನವಿ.

ಮಾನ್ಯರೇ,
ನಾವು ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ನಿಗಮಗಳು, ಮಂಡಳಿಗಳು ಹಾಗೂ ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಾಗಿದ್ದು, ಒಂದೇ ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ವಿವಿಧ ಸಂಸ್ಥೆಗಳಲ್ಲಿ ವೇತನ, ಭathyೆ, ಸೌಲಭ್ಯ ಹಾಗೂ ಸೇವಾ ನಿಯಮಗಳಲ್ಲಿ ಭಾರೀ ಅಸಮಾನತೆ ಇರುವುದರಿಂದ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದೇವೆ.

ವಿಶೇಷವಾಗಿ KMF, KPTCL, BESCOM, BWSSB, KEA, KUWSDB ಹಾಗೂ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಸಮಾನ ವಿದ್ಯಾರ್ಹತೆ, ಸಮಾನ ಕೆಲಸ ಹಾಗೂ ಸಮಾನ ಹೊಣೆಗಾರಿಕೆ ಇದ್ದರೂ ಸಾರಿಗೆ ನಿಗಮಗಳ ನೌಕರರಿಗೆ ಮಾತ್ರ ಅನ್ಯಾಯವಾಗುತ್ತಿದೆ.

ಸಾರಿಗೆ ನಿಗಮ ನೌಕರರ ಪ್ರಮುಖ ಸಮಸ್ಯೆಗಳು:

🔴 38 ತಿಂಗಳ ಹಿಂಬಾಕಿ ವೇತನ (Arrears) ಸಂಪೂರ್ಣವಾಗಿ ನೀಡಲಾಗಿಲ್ಲ.

🔴 OT, DA, HRA, TA ಹಾಗೂ ಇತರೆ ಭathyೆಗಳನ್ನು ಕಾಲಕಾಲಕ್ಕೆ ನೀಡುತ್ತಿಲ್ಲ.

🔴 2024ರಿಂದ ವೇತನ ಪರಿಷ್ಕರಣೆ (Pay Revision) ಜಾರಿಗೊಳಿಸಲಾಗಿಲ್ಲ.

🔴 ಒಂದೇ ಸರ್ಕಾರದ ಅಧೀನದಲ್ಲಿದ್ದರೂ ಇತರ ನಿಗಮಗಳಿಗೆ ಹೋಲಿಸಿದರೆ ಕಡಿಮೆ ಸೌಲಭ್ಯ ನೀಡಲಾಗುತ್ತಿದೆ.

🔴 ಬೆಲೆ ಏರಿಕೆ ಹಿನ್ನೆಲೆ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ.

🔴 ಸಾವಿರಾರು ನೌಕರರು ಸಾಲ ಹಾಗೂ ಆರ್ಥಿಕ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ.

ಭಾರತ ಸಂವಿಧಾನದ Article 14, 16 ಹಾಗೂ 39(d) ಪ್ರಕಾರ “Equal Pay for Equal Work” ನಮ್ಮ ಹಕ್ಕಾಗಿದೆ. ಆದ್ದರಿಂದ ಮಾನ್ಯ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಕೆಳಕಂಡಂತೆ ನಿರ್ದೇಶನ ನೀಡುವಂತೆ ವಿನಮ್ರವಾಗಿ ಪ್ರಾರ್ಥಿಸುತ್ತೇವೆ:

✅ ಎಲ್ಲಾ ಸರ್ಕಾರಿ ನಿಗಮಗಳು ಹಾಗೂ ಸಂಸ್ಥೆಗಳಿಗೆ ಏಕೀಕೃತ ವೇತನ ನೀತಿ ಜಾರಿಗೊಳಿಸಬೇಕು.

✅ ಸರ್ಕಾರಿ ನೌಕರರಿಗೆ ನೀಡುವ ವೇತನ ಹಾಗೂ ಸೌಲಭ್ಯಗಳಿಗೆ ಸಮಾನವಾಗಿ ಸಾರಿಗೆ ನಿಗಮ ನೌಕರರಿಗೂ ವೇತನ ಮತ್ತು ಸೌಲಭ್ಯ ಜಾರಿಗೊಳಿಸಬೇಕು.

✅ ಎಲ್ಲಾ ನಿಗಮಗಳಿಗೆ ಒಂದೇ ರೀತಿಯ ಸೇವಾ ನಿಯಮ ಜಾರಿಗೊಳಿಸಬೇಕು.

✅ 38 ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.

✅ OT, DA, HRA, TA ಹಾಗೂ ಇತರೆ ಭತ್ಯಗಳನ್ನು ಕಾಲಕಾಲಕ್ಕೆ ನೀಡಬೇಕು.

✅ 2024ರಿಂದ ಬಾಕಿಯಿರುವ ವೇತನ ಪರಿಷ್ಕರಣೆಯನ್ನು ತಕ್ಷಣ ಜಾರಿಗೊಳಿಸಬೇಕು.

✅ ಸಾರ್ವಜನಿಕ ವಲಯ ಸಂಸ್ಥೆಗಳ ನೌಕರರಿಗೆ ಶಾಶ್ವತ ವೇತನ ಆಯೋಗ ರಚಿಸಬೇಕು.

✅ ಸರ್ಕಾರಿ ನಿಗಮಗಳ ನಡುವಿನ ವೇತನ ಅಸಮಾನತೆ ನಿವಾರಣೆ ಮಾಡಬೇಕು.

✅ ನೌಕರರ ಹಕ್ಕು ಹಾಗೂ ಮಾನವೀಯ ಗೌರವವನ್ನು ರಕ್ಷಿಸಬೇಕು.

ಸಾವಿರಾರು ನೌಕರರು ಹಾಗೂ ಅವರ ಕುಟುಂಬಗಳ ಹಿತದೃಷ್ಟಿಯಿಂದ ನ್ಯಾಯ ಒದಗಿಸುವಂತೆ ವಿನಮ್ರವಾಗಿ ಕೋರುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ ಸಿಬಿಎಸ್‌ಇ ತ್ರಿಭಾಷಾ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಾಲಕರು: ಮುಂದಿನ ವಾರ ವಿಚಾರಣೆ