CrimeNEWSನಮ್ಮರಾಜ್ಯ

KSRTC ಮೆಜೆಸ್ಟಿಕ್‌: ರೂಟ್‌ಮೇಲೆ ಬಸ್‌ ಬಿಡಲು ಕಂಡಕ್ಟರ್‌ಗಳಿಂದ ಲಂಚ ಪಡೆಯುತ್ತಿರುವ ಟಿಸಿ – ಮೊಬೈಲ್‌ನಲ್ಲಿ ಸೆರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಂದರೆ ಅದು ನಾಡಿನ ಜನತೆಗೂ ಹೆಮ್ಮೆಯ ಪ್ರತೀಕ. ಸಂಸ್ಥೆಗೆ ದೇಶದ ಸಾರಿಗೆ ವ್ಯವಸ್ಥೆಯಲ್ಲೇ ಒಂದು ವಿಶಿಷ್ಟ ಸ್ಥಾನ-ಮಾನ ಕೂಡ ಇದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಗೂ ಪಾತ್ರವಾಗಿದೆ.

ಆದರೆ ಇಂಥ ಕೆಎಸ್‌ಆರ್‌ಟಿಸಿ ಗೌರವಕ್ಕೆ ಮಸಿ ಬಳಿಯಲೆಂದೇ ಕೆಲವಷ್ಟು ಸಿಬ್ಬಂದಿ ಲಂಚ, ಭ್ರಷ್ಟಾಚಾರ ಹಾಗೂ ದುಷ್ಟ ಮಾರ್ಗ ಅನುಸರಿಸುತ್ತಿರುವುದು ಸಂಸ್ಥೆಗೆ ಹಾಗೂ ನಾಡಿನ ಜನತೆಗೆ ಬಹುಳ ಮುಜುಗರ ತರಿಸುವ ವಿಷಯಯಾಗಿದೆ.

ಹೌದು! ಮೆಜೆಸ್ಟಿಕ್‌ನಲ್ಲಿ ಟಿಸಿಯಾಗಿರುವ ನಿಗಮದ ಸಿಬ್ಬಂದಿಯೊಬ್ಬ ಬಸ್‌ಗಳನ್ನು ಮಾರ್ಗಗಳ ಮೇಲೆ ಬಿಡಲು ನಿರ್ವಾಹಕರಿಂದ  ಲಂಚ ಪಡೆಯುತ್ತಿರುವ ವಿಡಿಯೋ ನೌಕರರ ವಾಟ್ಸ್‌ ಆಪ್‌ನಲ್ಲಿ ಹರಿದಾಡುತ್ತಿದೆ.

ಲೈನ್‌ ಚೆಕಿಂಗ್‌ ವೇಳೆ ತನಿಖಾ ಸಿಬ್ಬಂದಿ ನಿರ್ವಾಹಕರ ಬ್ಯಾಗ್‌ ಪಡೆದು ಹಣ ಲೆಕ್ಕಹಾಕಿದರೆ. ಆ ಬ್ಯಾಗ್‌ನಲ್ಲಿ ಟಿಕೆಟ್‌ ವಿತರಿಸಿರುವ ಮೌಲ್ಯಕ್ಕಿಂತ ಹೆಚ್ಚು ಹಣವಿದ್ದರೆ ಪ್ರಯಾಣಿಕರಿಗೆ ಮೋಸ ಮಾಡಿದ್ದೀಯ ಎಂದು ಕಾರಣ ಕೇಳಿ ದೋಷಾರೋಪಣ ಪತ್ರ ನೀಡುತ್ತಾರೆ.

ಅದರಂತೆ ಒಂದುವೇಳೆ ಬ್ಯಾಗ್‌ನಲ್ಲಿ ವಿತರಿಸಿರುವ ಟಿಕೆಟ್‌ ಮೌಲ್ಯಕ್ಕಿಂತ ಕಡಿಮೆ ಹಣವಿದ್ದರೂ ಸಹ ಸಂಸ್ಥೆಗೆ ಲಾಸ್‌ ಮಾಡಿದ್ದೀಯ ಎಂದು ಕಾರಣ ಕೇಳಿ ನಿರ್ವಾಹಕರಿಗೆ ದೋಷಾರೋಪಣ ಪತ್ರ ನೀಡುತ್ತಾರೆ. ಜತೆಗೆ ಈ ವಿಚಾರಣೆ ಆ ವಿಚಾರಣೆ ಎಂದು ಕೇಂದ್ರ ಕಚೇರಿಗೆ ಅಲೆಸುತ್ತಾರೆ. ಬಳಿಕ 3ರಿಂದ 6  ತಿಂಗಳ ವರೆಗೆ ಅಮಾನತು ಮಾಡುತ್ತಾರೆ.

ಆದರೆ, ಬಸ್‌ ನಿಲ್ದಾಣಗಳಲ್ಲಿ ಕೆಲ ಟಿಸಿಗಳಿಗೆ 5-10 ರೂ. ಕೊಡದೆ ಹೋದರೆ ಅವರು ಲಾಗ್‌ ಶೀಟ್‌ ಮೇಲೆ ಸಹಿ ಮಾಡುವುದೇ ಇಲ್ಲ. ಇದರಿಂದ ನಿರ್ವಾಹಕರು ವಿಧಿ ಇಲ್ಲದೆ 5-10 ರೂಪಾಯಿಯನ್ನು ಕೊಡಬೇಕು. ಅಂದರೆ ನಿರ್ವಾಹಕರಿಗೆ ಆ ಹಣ ಎಲ್ಲಿಂದ ಬರಬೇಕು. ಅವರು ಆಗ ವಾಮ ಮಾರ್ವದಿಂದ ಗಳಿಸಬೇಕಲ್ಲವೇ?

ಇದೇ 18/08/2024ರಂದು ಸುಮಾರು ರಾತ್ರಿ 11.50ರಲ್ಲಿ ಕೆಎಸ್‌ಆರ್‌ಟಿಸಿ ಬೆಂಗಳೂರು ಕೆಂಪೇಗೌಡ ನಿಲ್ದಾಣದ ಟರ್ಮಿನಲ್-01, ಅಂಕಣ:14ರಲ್ಲಿ ಸಂಚಾರ ನಿಯಂತ್ರಕರ ಡ್ಯೂಟಿ ಮಾಡುತ್ತಿದ್ದ ಟಿಸಿ ಒಬ್ಬರು ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಗಡೆ ಹೋಗುವ ವಾಹನಗಳ ನಿರ್ವಾಹಕರಿಗೆ ಅವರ ಡ್ಯೂಟಿ ಚಾರ್ಟಿಗೆ ಎಂಟ್ರಿ ಹಾಕಿ ಬಳಿಕ ಆ ನಿರ್ವಾಹಕರಿಂದ ಲಂಚದ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಾಮಾಜಿಕ ಕಾರ್ಯಕರ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ ಎಂದು ವಾಟ್ಸ್‌ ಅಪ್‌ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ ನೌಕರರು.

ಸಂಕಷ್ಟದ ನಡುವೆಯೂ ಸಾರ್ವಜನಿಕರ ಸಾರಿಗೆಗೆ ಕಟಿಬದ್ಧವಾಗಿರುವ ಸಂಸ್ಥೆ ತನ್ನ ನೌಕರರಿಗೆ ಸಂಬಳ ಕೊಡಲ್ವಾ? ಪ್ರತಿ ನಿತ್ಯ ತನ್ನ ಸಹ ನೌಕರರಿಂದಲೇ ಲಂಚ ಪೀಕುವ ಇಂಥವರಿಂದ ಸಂಸ್ಥೆಗೆ ಕಳಂಕ ಅಂಟಿಕೊಳ್ಳುತ್ತದೆ ಹಾಗೂ ನಿಗಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಇತರೆ ಸಿಬ್ಬಂದಿಗಳಿಗೂ ಈ ಕಳಂಕ ಅಂಟಿಕೊಳ್ಳುತ್ತದೆ. ಆದ್ದರಿಂದ ಈ ಟಿಸಿ ವಿರುದ್ಧ ಸಂಸ್ಥೆಯ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ