KSRTC: 26 ವರ್ಷ ಸೇವೆಯ ನೌಕರರ ಮೂಲ ವೇತನ 31 ಸಾವಿರ- ಕೇವಲ 8ವರ್ಷ ಸೇವೆಯ ಸರ್ಕಾರಿ ನೌಕರರ ಮೂಲ ವೇತನ 48 ಸಾವಿರ!

- ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಇದು ಅರ್ಥವಾಗುತ್ತಿಲ್ಲವೇಕೆ- ಒಕ್ಕೂಟದ ಪದಾಧಿಕಾರಿಗಳ ಪ್ರಶ್ನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳ-ನೌಕರರ ವೇತನ ಸರ್ಕಾರಿ ಅಧಿಕಾರಿಗಳು-ನೌಕರರಿಗೆ ಹೋಲಿಸಿದರೆ ಭಾರಿ ವ್ಯತ್ಯಾಸವಿದೆ ಎಂಬುವುದು ಏಕೆ ಈ ಜಂಟಿ ಸಮಿತಿ ಪದಾಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ.
26 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಲ ಸಿಬ್ಬಂದಿಗಳ ವೇತನ ಯಾವುದೇ ಇಂಕ್ರಿಮೆಂಟ್ ಕೂಡ ಕಟ್ಟಾಗದೆ ಕಾಲಕಾಲಕ್ಕೆ ಹೆಚ್ಚಳವಾಗುತ್ತ ಬಂದಿದ್ದರೂ ಕೂಡ ಅವರ ಮೂಲ ವೇತನ ಕೇವಲ 31,570 ರೂ.ಗಳಿದೆ.
ಅದೇ ಸರ್ಕಾರಿ ನೌಕರರ ಅದೇ ಸಿ ಗ್ರೂಪ್ನಡಿ ಅದೇ ವಿದ್ಯಾರ್ಹತೆಯಡಿ ಅಂದರೆ ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿ ಒಬ್ಬ ಸರ್ಕಾರಿ ಅಧಿಕಾರಿಯ ಕಾರು ಚಾಲಕನಾಗಿ, ಸಹಾಯಕ ಅಥವಾ ಎಸ್ಡಿಎಯಾಗಿ 8 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ, ಈಗ ಬಡ್ತಿಯೊಂದಿಗೆ ಆ ನೌಕರರ ಮೂಲ ವೇತನ ಪ್ರಸ್ತುತ 48 ಸಾವಿರವಿದೆ.
ನೋಡಿ 26 ವರ್ಷಗಳ ಹಿಂದೆ ಅದೇ ಚಾಲಕ ಅದರಲ್ಲೂ ಭಾರಿ ವಾಹನ ಚಾಲನಾ ಸಿಬ್ಬಂದಿಯಾಗಿ ಕೆಎಸ್ಆರ್ಟಸಿಗೆ ಸೇರಿ ಕೊಂಡಿರುವವರ ಮೂಲ ವೇತನ ಕೇವಲ 31,570 ರೂಪಾಯಿ ಇದೆ. ಅಂದರೆ ಯೋಚನೆ ಮಾಡಿ 26 ವರ್ಗಳಿಂದಲೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಮೂಲ ವೇತನ ಕೇವಲ 8 ವರ್ಷಗಳಲ್ಲಿ ಸರ್ಕಾರಿ ನೌಕರರಾಗಿ ಸೇರಿದ ನೌಕರರಿಗಿಂತ ಸುಮಾರು 17 ಸಾವಿರ ವ್ಯತ್ಯಾಸವಿದೆ.
ಇನ್ನು 26 ವರ್ಷಗಳ ಹಿಂದೆ ಸರ್ಕಾರಿ ಕೆಲಸಕ್ಕೆ ಸೇರಿರುವ ನೌಕರರ ಮೂಲ ವೇತನ ಬಡ್ತಿಯೊಂದಿಗೆ ಎಷ್ಟಿರಬೇಕು ಎಂಬುದನ್ನು ನೀವೆ ಯೋಚಿಸಿ. ಹೀಗಾಗಿ ಸರ್ಕಾರಿ ನೌಕರರಿಗೆ ಕೊಡುವ ವೇತನವನ್ನು ಅದೇ ಸಿ ಗ್ರೂಪ್ ಹುದ್ದೆಯಲ್ಲಿರುವ ನಮಗೂ ಕೊಡಿ ಎಂದು ಸಾರಿಗೆ ನೌಕರರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸುತ್ತಿದೆ.
ಆದರೆ, ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಇಲ್ಲ ಇಲ್ಲ ನಾವು ಶೇ.25 ರಷ್ಟು ವೇತನ ಹೆಚ್ಚಳ ಮಾಡಿದರೆ ಸಾಕು ಅದು ಕೂಡ ಅಗ್ರಿಮೆಂಟ್ ಆಗಬೇಕು. ಈ ಬಗ್ಗೆ ಚರ್ಚಿಸಲು ಸಭೆ ಕರೆಯಿರಿ ಎಂದು ಸಿಎಂ, ಸಾರಿಗೆ ಸಚಿವರು ಹಾಗೂ ನಿಗಮಗಳ ಎಂಡಿಗಳಿಗೆ ಮನವಿ ಪತ್ರ ಕೊಡುತ್ತಿದೆ.
ಅಂದರೆ ನಮಗೆ ಇವರ ಉದ್ದೇಶವೆ ಅರ್ಥವಾಗುತ್ತಿಲ್ಲ. ಪ್ರಸ್ತುತ ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರುವ ನೌಕರರ ಮೂಲ ವೇತನ 27 ಸಾವಿರ ಆಗಿದೆ. ಆದರೆ, ನಮ್ಮ ಸಂಸ್ಥೆಯಲ್ಲಿ 12 ವರ್ಷಳಿಂದಲೂ ಸೇವೆ ಸಲ್ಲಿಸುತ್ತಿರುವವರ ಮೂಲ ವೇತನ ಈಗಲೂ 24,980 ರೂ.ಗಳಿದೆ ಎಂದರೆ ನಂಬುತ್ತೀರ ನಂಬಲೇ ಬೇಕು.
ಕಾರಣ ಸಾರಿಗೆ ನೌಕರರಿಗೆ ಸರಿಯಾಗಿ ವೇತನ ಹೆಚ್ಚಳ ಮಾಡಿಸುವಲ್ಲಿ ಈ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿರುವ ಕೆಲವರ ತಾತ್ಸಾರದಿಂದ ಈ ವ್ಯತ್ಯಾಸ ಕಾಣುವಂತಾಗಿದೆ. ಹೀಗಾಗಿ ಇದನ್ನು ಸರಿ ಪಡಿಸುವ ಉದ್ದೇಶದಿಂದ ಸಾರಿಗೆ ನೌಕರರ ಒಕ್ಕೂಟ ನಮ್ಮ ನೌಕರರಿಗೂ ವಿದ್ಯಾರ್ಹತೆ, ಹುದ್ದೆಗೆ ತಕ್ಕ ವೇತನ ಕೊಡಿ ಎಂದು ಒತ್ತಾಯ ಮಾಡುತ್ತಿದೆ.
ಇಲ್ಲಿ ಹೇಳಬಹುದು ಈ ಹಿಂದೆ ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರು ಕೇವಲ 3-4 ಕ್ಲಾಸ್ ಓದಿದವರನ್ನು ಕೆಲಸಕ್ಕೆ ತೆಗೆದುಕೊಂಡಿರುವವರಿಗೆ ಯಾವ ಲೆಕ್ಕಚಾರದಲ್ಲಿ ವೇತನ ಕೊಡಿಸುತ್ತೀರಿ ಎಂದು. ಇಲ್ಲಿ ಅವರ ಹುದ್ದೆಯ ಮಾನದಂಡದ ಆಧಾರದ ಮೇಲೆ ಅವರಿಗೆ ಮೂಲ ವೇತನವನ್ನು ಹುದ್ದೆಗೆ ಸರಿ ಸಮಾನವಾಗಿ ಕೊಡಬೇಕು ಎಂಬುವುದು ಒಕ್ಕೂಟದ ವಾದವಾಗಿದೆ.
ಇನ್ನು ಇದು ಕೇವಲ ಸಾರಿಗೆ ನೌಕರರಿಗೆ ಮಾತ್ರ ಈ ಮೂಲ ವೇತನದಲ್ಲಿ ವ್ಯತ್ಯಾಸವಾಗಿಲ್ಲ ಅಧಿಕಾರಿ ವರ್ಗದವರಿಗೂ ಇಲ್ಲಿ ತಾರತಮ್ಯವಾಗಿದೆ. ಆದರೆ ಇದನ್ನು ಸರಿ ಪಡಿಸಿ ಎಂದು ಏಕೋ ಅಧಿಕಾರಿಗಳು ಕೇಳುತ್ತಿಲ್ಲ. ಕೇಳಿದ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಸದ್ಯ ಮೌನಕ್ಕೆ ಜಾರಿದ್ದಾರೆ. ಕಾರಣ ಗೊತ್ತಿಲ್ಲ.
ಅದೇನೆ ಇರಲಿ ಸರ್ಕಾರ ಈಗಾಗಲೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಮಾಡುವುದಕ್ಕೆ ಬಹುತೇಕೆ ನಿರ್ಧಾರ ಮಾಡಿದೆ. ಹೀಗಾಗಿ ನೌಕರರ ಪರವಾಗಿದ್ದೇವೆ ಎನ್ನುವ ಎಲ್ಲ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ಈ 4 ವರ್ಷಕ್ಕೊಮ್ಮೆ ಆಗುತ್ತಿರುವ ಅನಾಹುತವನ್ನು ತಪ್ಪಿಸಬೇಕು ಎಂಬುವುದು ಒಕ್ಕೂಟದ ಎಲ್ಲ ಪದಾಧಿಕಾರಿಗಳು ಮನವಿ ಮಾಡುತ್ತಿದ್ದೇವೆ.
Related

You Might Also Like
ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು: ಸಿಎಂ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ ಎಂದು ಮುಖ್ಯಮಂತ್ರಿ...
ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ
ಮೈಸೂರು: ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಇಂದು ಭೇಟಿ ನೀಡಿ ಆಹಾರ ಧಾನ್ಯಗಳ...
ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು: ಆಯುಕ್ತ ಸತೀಶ್
ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ...
ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದರೆ ನಿವೇಶನ ಮಾಲೀಕರಿಗೆ ದಂಡ ವಿಧಿಸಿ: ಸ್ನೇಹಲ್
ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವ...
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ
2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...