
ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳದ ಕುಕನೂರು ಡಿಪೋದಲ್ಲಿ ಸಂಸ್ಥೆಯ (ಕೆಎಸ್ಟಿ) ಕಾನ್ಸ್ಟೆಬಲ್ ಚಂದ್ರಶೇಖರ್ ಎಂಬುವರು ಕೆಲಸದ ವೇಳೆ ನಿದ್ರೆ ಮಾಡುತ್ತಿದ್ದರೆಂಬ ಕಾರಣ ನೀಡಿ ಸೇವೆಯಿಂದ ಅಮಾನತುಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ನೌಕರರಿಗೆ 8ಗಂಟೆ ಬದಲಿಗೆ 16 ಗಂಟೆ ಕೆಲಸ ಮಾಡಿಸುವುದು ತರವಲ್ಲ ಎಂದು ಹೇಳಿದೆ.
ಮುಂದುವರಿದು ಹೇಳಿರುವ ಹೈಕೋರ್ಟ್ ಏಕಸದಸ್ಯ ಪೀಠವು ಅಲ್ಲದೆ, “ನಿದ್ರೆ ಮನುಷ್ಯನಿಗೆ ಅತ್ಯಗತ್ಯ. ನಿದ್ರೆ ಮತ್ತು ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಆದರೆ, ಬಿಡುವಿಲ್ಲದೆ 60 ದಿನ ದಿನವೂ 16 ಗಂಟೆ ಕೆಲಸ ಮಾಡಿಸಿದ್ದರಿಂದ ಆತ ಸಹಜವಾಗಿಯೇ ನಿದ್ರೆ ಮಾಡಿರಬಹುದು. ಅಷ್ಟಕ್ಕೇ ಅಮಾನತು ಕ್ರಮ ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಇನ್ನುಯ ಅಮಾನತು ಆದೇಶ ರದ್ದು ಕೋರಿ ಕುಕನೂರು ಡಿಪೋ ಕಾನ್ಸ್ಟೆಬಲ್ ಚಂದ್ರಶೇಖರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ”ಜೀವನ ಸಮತೋಲನ ಮಾಡಲು ಉದ್ಯೋಗಿಗಳಿಗೆ ಸರಿಯಾದ ನಿದ್ರೆ ಮತ್ತು ಕೆಲಸದ ಅವಶ್ಯಕತೆಯಿದೆ.
ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕೆಲಸ ಮಾಡಲು ಉದ್ಯೋಗಿಯನ್ನು ಕೇಳಿದರೆ, ದೇಹವು ಆ ಉದ್ಯೋಗಿಯನ್ನು ನಿದ್ರೆಗೆ ಜಾರಿ ಮಾಡಿ ಎಂದು ಕೇಳುತ್ತದೆ. ಹೀಗಾಗಿ ಸಹಜವಾಗಿಯೇ ಆತ ನಿದ್ರೆಗೆ ಜಾರಿರಬಹುದು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, “ಇಂದು ಪೊಲೀಸ್ ಕಾನ್ಸ್ಟೆಬಲ್ ಆಗಿರಬಹುದು ಇಲ್ಲವೇ ನಾಳೆ ಮತ್ತೊಬ್ಬರಾಗಿರಬಹುದು ನಿದ್ರೆ ಕೊರತೆಯಾದಲ್ಲಿ ಯಾವುದೇ ಮನುಷ್ಯ, ಎಲ್ಲಿ ಬೇಕಾದರೂ ನಿದ್ರೆಗೆ ಜಾರುತ್ತಾನೆ. ಹಾಗಾಗಿ, ಕೆಲಸ ಮತ್ತು ಜೀವನದ ನಡುವಿನ ಸಮತೋಲನದ ಪ್ರಮುಖ ಅಂಶವೆಂದರೆ ನಿದ್ರೆ ಮತ್ತು ವಿರಾಮ ಎಂದು ಪರಿಗಣಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
“ಇನ್ನು ಚಂದ್ರಶೇಖರ್ ವೈದ್ಯರ ಸಲಹೆಯಂತೆ ಔಷಧ ಸೇವಿಸಿದ್ದ ನಿರಂತರವಾಗಿ ಎರಡು ಮತ್ತು ಮೂರನೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ನಿದ್ರೆ ಕೊರತೆ ಎದುರಾಗಿ, ಕರ್ತವ್ಯದ ಸಮಯದಲ್ಲಿ ನಿಮಿಷಗಳ ಕಾಲ ನಿದ್ರೆ ಮಾಡಿದ್ದ ಎಂದು ವಿವರಣೆ ನೀಡಿದ್ದರು. ಆದರೆ, ಕರ್ತವ್ಯದ ಸಮಯದಲ್ಲಿ ನಿದ್ರೆ ಮಾಡುತ್ತಿರುವಾಗ ಸಿಕ್ಕಿಹಾಕಿಕೊಂಡಿರುವುದರಿಂದ ನಿಗಮದ ಗೌರವಕ್ಕೆ ಧಕ್ಕೆ ತಂದಿದೆ ಎಂದು ತಿಳಿಸಿ ಸೇವೆಯಿಂದ ಅಮಾನತುಪಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ನ್ಯಾಯಪೀಠ ಹೇಳಿದೆ.
ನಿಗಮದ ಪೇದೆಗಳು ದಿನಕ್ಕೆ 8 ಗಂಟೆಯಷ್ಟೇ ಕರ್ತವ್ಯ ನಿರ್ವಹಿಸಬೇಕಿದೆ. ಮೂರು ಪೇದೆಗಳು ತಲಾ 8 ಗಂಟೆಯಂತೆ 24 ಗಂಟೆ ಕೆಲಸ ಮಾಡುತ್ತಾರೆ. ಹೆಚ್ಚಿನ ಕಾರ್ಯಭಾರ ಇರುವುದರಿಂದ ಚಂದ್ರಶೇಖರ್ ಅವರನ್ನು ಎರಡು ಶಿಫ್ಟ್ಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ನಿರಂತರವಾಗಿ ನಿತ್ಯವೂ 16 ಗಂಟೆ ಎರಡು ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಲಾಗಿತ್ತು.
ಇದು 60 ದಿನಗಳವರೆಗೆ ಮುಂದುವರೆದಿತ್ತು. ಸಂವಿಧಾನದ ಪರಿಚ್ಛೇದ 24ರಡಿ ಘೋಷಣೆಯಾಗಿರುವ ಮಾನವ ಹಕ್ಕುಗಳ ಪ್ರಕಾರ ಪ್ರತಿಯೊಬ್ಬರೂ ವಿಶ್ರಾಂತಿ, ವಿರಾಮದ ಹಕ್ಕು ಹೊಂದಿದ್ದಾರೆ. ಕೆಲಸದ ಸಮಯವು ಸಮಂಜಸವಾದ ಮಿತಿ ಮತ್ತು ವೇತನದೊದಿಗೆ ಆವರ್ತಕ ರಜಾ ದಿನ ಒಳಗೊಂಡಂತೆ ವಿಶ್ರಾಂತಿ ಮತ್ತು ವಿರಾಮದ ಹಕ್ಕನ್ನು ಪ್ರತಿಯೊಬ್ಬರೂ ಹೊಂದಿದ್ದಾರೆ ಎಂದು ತಿಳಿಸಿದೆ.
ಅಲ್ಲದೆ ಈ ಮೂಲಕ ಸಾರಿಗೆ ನಿಗಮಗಳಲ್ಲಿ ನೌಕರರ ವಿರುದ್ಧ ತಮಗೆ ಇಷ್ಟ ಬಂದ ರೀತಿಯಲ್ಲಿ ನಿಗಮದ ನಿಯಮಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ಸಂದೇಶವನ್ನು ನೀಡಿದೆ.
🙏🙏🙏