KSRTC ಎಂಡಿ ನಡೆಗೆ ಬೇಸರ: ತುಟ್ಟಿಭತ್ಯೆ ವಿಲೀನಗೊಂಡು 7ತಿಂಗಳು ಗತಿಸಿದರೂ ನೌಕರರಿಗೆ ಬಿಡಿಎ ಆದೇಶ ಹೊರಬಿದ್ದಿಲ್ಲ, ಜು.2024ರ ಡಿಎ ಸಹ ಕೊಟ್ಟಿಲ್ಲ

ಬೆಂಗಳೂರು: ಈವರೆಗೂ ಸಾಮಾನ್ಯ ಪ್ರಕ್ರೀಯೆವಾಗಿದ್ದ DA ಹಾಗೂ BDA ಗಳನ್ನೂ ಸಹ ಇನ್ನು ಮುಂದೆ ಹೋರಾಟ ಮಾಡಿ ಪಡೆಯಬೇಕಾಗುತ್ತೋ ಏನೋ ಎಂಬ ಆತಂಕದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಇದ್ದಾರೆ.
ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಪ್ರಮುಖವಾಗಿ ಅವರು ಪಡೆಯಬೇಕಿರುವ ವೇತನ ಸೌಲಭ್ಯವನ್ನು ಸಕಾಲಕ್ಕೆ ಸರ್ಕಾರ ಅಥವಾ ಸಾರಿಗೆ ನಿಗಮಗಳ ಆಡಳಿತ ಮಂಡಳಿ ಕೊಡದೆ ಭಾರಿ ಸಮಸ್ಯೆಗೆ ಸಿಲುಕಿಸುತ್ತಿದೆ. ಅಂದರೆ ಈ ವ್ಯವಸ್ಥೆ DA ಹಾಗೂ BDA ಗಳನ್ನೂ ಸಹ 7 ತಿಂಗಳು ಕಳೆಯುತ್ತಾ ಬಂದರೂ ಈ ವರೆಗೂ ನೀಡಿಲ್ಲ ಎಂದರೆ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂಬುದರ ಬಗ್ಗೆ ಯೋಚಿಸಬೇಕಿದೆ.
ಹೌದು! ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ಅವರಿಗೆ ನೌಕರರ ಮೂಲಭೂತ ಹಕ್ಕುಗಳ ವಿಚಾರವೇದಿಕೆ ಮನವಿ ಸಲ್ಲಿಸಿದ್ದು ಕೂಡಲೇ ಬಿಡಿಎ ಹಾಗೂ ಡಿಎ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದೆ.
ಪೂರ್ಣ ಮಾಹಿತಿ: ತುಟ್ಟಿಭತ್ಯೆ ವಿಲಿನಗೊಳಿಸಿದ (ಮರ್ಜ್) ಒಂದು ತಿಂಗಳಲ್ಲಿ ಸಾರಿಗೆ ನೌಕರರಿಗೆ ಬಿಡಿಎ ಅಳವಡಿಸಿರುವುದನ್ನು ನಾವು ಕಾಣುತ್ತ ಬಂದಿದ್ದೇವೆ. ಆದರೆ ಈ ಬಾರಿ ತುಟ್ಟಿಭತ್ಯೆ ವಿಲೀನಗೊಂಡು ಏಳು ತಿಂಗಳು ಗತಿಸುತ್ತ ಬಂದರೂ ಸಾರಿಗೆ ನೌಕರರಿಗೆ ಬಿ.ಡಿ.ಎ. ಆದೇಶ ಈವರೆಗೂ ಹೊರಬಿದ್ದಿಲ್ಲ. ಅಲ್ಲದೇ ಜುಲೈ-2024 ರ ಶೇ.2.25 ಡಿಎ ಯನ್ನು ಸಹ ನೀಡಿಲ್ಲ. ಬಹುಶಃ ಈ ರೀತಿ ವಿಳಂಬ ಇತಿಹಾಸದಲ್ಲಿ ಇದೇ ಪ್ರಥಮವಾಗಿದೆ.
ಬಿಡಿಎ ಮತ್ತು ಡಿಎ ವಿಚಾರದಲ್ಲಿ ಯಾವುದೇ ಹೊಸ ನೀತಿ ನಿಯಮಗಳನ್ನೇನು ರಚಿಸಬೇಕಿಲ್ಲ. ಇದೊಂದು ಸಾಮಾನ್ಯ ಮತ್ತು ಬಹು ಕಾಲದಿಂದ ನಡೆದುಕೊಂಡು ಬಂದ ಪದ್ಧತಿ ಯಾಗಿದ್ದು ಸರಕಾರ ಡಿ.ಎ. ಮರ್ಜ್ಮಾಡಿದ ತಕ್ಷಣವೇ ಸಾರಿಗೆ ನೌಕರರಿಗೆ ಬಿ.ಡಿ.ಎ. ಅಳವಡಿಸಲಾಗುತ್ತದೆ. ಸರಕಾರ ಡಿಎ ಘೋಷಿಸಿದ ಕೂಡಲೇ ಸಾರಿಗೆ ನೌಕರರಿಗೆ ಡಿಎ ಅಳವಡಿಸಲಾಗುತ್ತದೆ. ಆದರೆ ನಾಲ್ಕೂ ನಿಗಮಗಳ ನೌಕರರಿಗೆ ಬಿಡಿಎ ಹಾಗೂ ಡಿಎ ಅಳವಡಿಸಲು ಕೆಎಸ್ಆರ್ಟಿಸಿ ಎಂಡಿ ಆದೇಶ ಹೊರಡಿಸಬೇಕಾಗುತ್ತದೆ. ಆ ಕೆಲಸ ಈವರೆಗೂ ನಡೆದಿಲ್ಲ.
ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ನಿಗಮದ ಹಲವು ಇಲಾಖಾ ಮುಖ್ಯಸ್ಥರನ್ನು ನಮ್ಮ ಸಂಘದಿಂದ ಸಂಪರ್ಕಿಸಿಸಾಗ ಯಾರಿಂದಲೂ ಧನಾತ್ಮಕ ಪ್ರತಿಕ್ರೀಯೆ ಸಿಕ್ಕಿಲ್ಲ. ಎಲ್ಲರೂ ಮೇಲಿನನವರ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಬಿ.ಡಿ.ಎ. ಹಾಗೂ ಡಿ.ಎ. ಆದೇಶ ಹೊರಡಿಸುವಲ್ಲಿ ಯಾರಿಂದ, ಯಾವ ಹಂತದಲ್ಲಿ ಅಡತಡೆ ಉಂಟಾಗಿದೆ ಎನ್ನುವುದೇ ನಮಗೆ ಸ್ಪಷ್ಟವಾಗಿ ತಿಳಿಯುತ್ತಿಲ್ಲ.
ಆದ್ದರಿಂದ ತಾವು ಅತ್ಯಂತ ಮುತುವರ್ಜಿವಹಿಸಿ ಆದಷ್ಟು ಬೇಗನೇ ಸಾರಿಗೆ ನೌಕರರಿಗೆ ಬಿ.ಡಿ.ಎ ಹಾಗೂ ಡಿ.ಎ. ಸಾಧ್ಯವಾಗಿಸಿಕೊಡಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿರೆಂದು ಈ ಮೂಲಕ ವಿನಂತಿಸಿಕೊಂಡಿರುತ್ತೇವೆ, ಜತೆಗೆ ಎಂದೂ ವಿಳಂಬವಾಗದ ಬಿಡಿಎ, ಡಿಎ ಗಳಿಗೆ ತಮ್ಮ ಕಾಲಾವಧಿಯಲ್ಲಿ ಅಡತಡೆ ಅಥವಾ ವಿಳಂಬವಾಗಬಾರದು ಎನ್ನುವುದು ನಮ್ಮ ಅಭಿಪ್ರಾಯ ಹಾಗೂ ನಮ್ಮ ನಮ್ರ ವಿನಂತಿ ಎಂದು ವಿಚಾರವೇದಿಕೆ ಮನವಿ ಮಾಡಿದೆ.
ವಿಚಾರವೇದಿಕೆ ರಾಜ್ಯಾಧ್ಯಕ್ಷ ವೈ.ಎಂ.ಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ, ಉಪಾಧ್ಯಕ್ಷ ರಫೀಕ್ಹಮದ್ ನಾಗನೂರ ಮತ್ತಿತರರು ಕೆಎಸ್ಆರ್ಟಿಸಿ ಎಂಡಿ ಜತೆಗೆ ಮುಖ್ಯ ಮಂತ್ರಿಗಳು, ಸಾರಿಗೆ ಹಾಗೂ ಮುಜುರಾಯಿ ಸಚಿವರು, ಕಾರ್ಮಿಕ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಮನವಿ ಪ್ರತಿಗಳನ್ನು ಸಲ್ಲಿಸಿದ್ದಾರೆ.
Related

You Might Also Like
KSRTC ನೌಕರರ ವೇತನ ಹೆಚ್ಚಳಕ್ಕೆ ಜೆಡಿಎಸ್ ಮುಖಂಡ, ವಕೀಲ ಶಂಕರೇಗೌಡ ಆಗ್ರಹ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ....
ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ
ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ರೂಪಾ ನಗರದಲ್ಲಿ ಸ್ಥಳೀಯ...
ಜಮೀರ್ ರಾಜೀನಾಮೆಗೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯ
ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ...
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ
ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ...
KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ಪಾಷ ಅವರನ್ನು ಕರ್ನಾಟಕ...
ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ್ರು
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ...
KSRTC ಬಸ್- ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ: 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಸಕಲೇಶಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯವಾಗಿರುವ ಘಟನೆ ತಾಲೂಕಿನ...
KSRTC ಅಧಿಕಾರಿಗಳು-ನೌಕರರಿಗೆ 7ನೇ ವೇತನ ಆಯೋಗ ಘೋಷಿಸಿ: ಸಂಸ್ಥೆಯ ನೂತನ ಎಂಡಿಗೆ ಅಧಿಕಾರಿಗಳ ಸಂಘ ಮನವಿ
ಬೆಂಗಳೂರು: ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ನೌಕರರಿಗೆ 7ನೇ ವೇತನ ಅಯೋಗವನ್ನು ಘೋಷಿಸುವಂತೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನು ಕೆಎಸ್ಆರ್ಟಿಸಿ ಆಫೀರ್ಸ್ ವೆಲ್ಫೇರ್...
ಜಗತ್ತಿನ ಒತ್ತಡ ಪರಿಸ್ಥಿತಿ ನಿವಾರಣೆಗೆ ಯೋಗ ಒಂದೇ ಮಾರ್ಗ: ಪ್ರಧಾನಿ ನರೇಂದ್ರ ಮೋದಿ
ನ್ಯೂಡೆಲ್ಲಿ: ಜಗತ್ತಿನ ಅನೇಕ ಕ್ಷೇತ್ರಗಳಲ್ಲಿ ಒತ್ತಡದ ಪರಿಸ್ಥಿತಿ ಎದುರಾಗಿ ಅಶಾಂತಿ ಮತ್ತು ಅಸ್ಥಿರತೆ, ಜಾಗತಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಇಂತಹ ಪ್ರಕ್ಷುಬ್ದ ಪರಿಸ್ಥಿತಿ ನಿವಾರಣೆ ಆಗಬೇಕು. ಯೋಗ ಒಂದೆ...