NEWSನಮ್ಮಜಿಲ್ಲೆ

ಮೈಸೂರಿನಲ್ಲಿ ಹಸಿದವರ ಪಾಲಿನ ಪಪ್ಪನಾದ ಅನ್ವೇಷಣಾ ಸೇವಾ ಟ್ರಸ್ಟ್

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೋವಿಡ್-19 ತಟೆಗಟ್ಟುವ ಹಿನ್ನೆಲೆ ಜಿಲ್ಲಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವ ಸಂಬಂಧ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ನಗರ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಯಾರು ಸಹ ಹಸುವಿನಿಂದ ಬಳಲಬಾರದು ಎಂದು ಪ್ರತಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಬಡವರಿಗೆ, ನಿರ್ಗತಿಕರಿಗೆ, ವಲಸೆ ಬಂದವರಿಗೆ ಹಾಗೂ ಅಗತ್ಯ ಸೇವೆಯ ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಆಹಾರವನ್ನು ವಿತರಿಸಲಾಗುತ್ತದೆ.

ಮೈಸೂರಿನಲ್ಲಿ ಕಂಡುಬರುವ ಇತರೆ ಸಂಘ-ಸಂಸ್ಥೆಗಳು ಗುರುತಿಸದ ಅಥವಾ ಆಹಾರ ಪೂರೈಕೆ ಆಗದೆ ಇರುವ ಸ್ಥಳಗಳಿಗೆ ತೆರಳಿ ಊಟವನ್ನು ವಿತರಿಸಲಾಗುತ್ತದೆ. ಅನ್ವೇಷಣಾ ಸೇವಾ ಟ್ರಸ್ ಪ್ರತಿನಿತ್ಯ ಒಂದು ಸಾವಿರಕ್ಕೂ ಹೆಚ್ಚು ಜನರ ಹಸಿವನ್ನು ನಿಗಿಸುತ್ತಿರುವುದು ವಿಶೇಷವಾಗಿದೆ. ಈ ಸಂಬಂಧ ಹಲವಾರು ಸ್ವಯಂಪ್ರೇರಿತರಾಗಿ ಟ್ರಸ್ಟ್‍ಗೆ ಧನಸಹಾಯ, ತರಕಾರಿ, ಫುಡ್‍ಬಾಕ್ಸ್ ಮತ್ತು ಅಕ್ಕಿ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದಾರೆ.

ಅನ್ವೇಷಣಾ ಸೇವಾ ಟ್ರಸ್ಟ್ ಊಟದ ಜೂತೆ ಹೋಂ ಕ್ವಾರಂಟೈನ್‍ನಲ್ಲಿರುವವರಿಗೆ ದಿನಸಿ ಪದಾರ್ಥಗಳ ಕಿಟ್‍ನ್ನು ಒದಗಿಸಲಾಗುತ್ತದೆ. ಮೈಸೂರಿನ ಬಿ.ಎಂ.ಆಸ್ಪತ್ರೆ, ಪೊಲೀಸ್ ಆಯುಕ್ತರ ಕಚೇರಿ, ಎ.ಸಿ.ಪಿ. ಕಚೇರಿ ಸೇರಿದಂತೆ ಆರು ಸ್ಥಳಗಳಲ್ಲಿ ಡಿಸ್‍ಇನ್‍ಫೆಕ್ಷನ್ ನಿರ್ಮಾಣ ಮಾಡಲಾಗಿದೆ.

ಅಮರ್‍ನಾಥ್ ರಾಜೇ ಅರಸ್‍ರವರ ಟ್ರಸ್ಟ್‍ನ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದು, ಟ್ರಸ್ಟ್‍ನ ಅಧ್ಯಕ್ಷರಾಗಿ ಡಾ.ಎಂ.ಜಿ.ಆರ್.ಆರಸ್, ಉಪಾಧ್ಯಕ್ಷರಾಗಿ ಲಿಂಗರಾಜೇಅರಸ್, ಅಶ್ವಿನ್‍ಕುಮಾರ್, ಖಜಾಂಚಿಯಾಗಿ ಕೆ.ಕೆ.ಭಾಸ್ಕರ್, ಸಹಕಾರ್ಯದರ್ಶಿಯಾಗಿ ಪ್ರಸನ್ನಕುಮಾರ್‌  ಕಾರ್ಯನಿರ್ವಹಿಸುತ್ತಿದ್ದಾರೆ.

ಟ್ರಸ್ಟ್‌ನ ಸಂಚಾಲಕರಾಗಿ ದಿನೇಶ್ ಅರಸ್, ಕೊರೊನಾ ಕಾಲದ ಸ್ವಯಂ ಸೇವಕರಾಗಿ ಹರೀಶ್ ಅರಸ್, ಅಭಿನಂದನ್ ಅರಸ್, ಸಂತೋಷ್, ಅನಿತ್, ಶರತ್ ಅರಸ್, ರಾಮಕೃಷ್ಣ ಹೆಗಡೆ, ಸತೀಶ್, ದೇವಪ್ಪ, ಸೋಮು ಚಂದ್ರಶೇಖರ್, ಫಣೀಂದ್ರ, ಬಾನುಕುಮಾರ್‍ರವರು ಕಾರ್ಯನಿರ್ವಹಿಸುತ್ತಿದ್ದಾರೆ. ಧರ್ಮದರ್ಶಿಗಳು ಮತ್ತು ಇತರೆ ದಾನಿಗಳ ಸಹಕಾರದೊಂದಿಗೆ, ಅನ್ವೇಷಣಾ ಸೇವಾ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ