CRIMENEWSನಮ್ಮಜಿಲ್ಲೆ

ಯಾದಗಿರಿ: ಖಾಸಗಿ ಶಾಲಾ ಬಸ್‌ ಹರಿದು ವಿದ್ಯಾರ್ಥಿ ಬಾಲಕ ಸಾವು

ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಖಾಸಗಿ ಶಾಲಾ ಬಸ್‌ನಲ್ಲಿ ಬಂದ ವಿದ್ಯಾರ್ಥಿಯ ಮೇಲೆ ಅದೇ ಬಸ್‌ ರಿವರ್ಸ್ ತೆಗೆಯುವ ವೇಳೆ ಹರಿದ ಪರಿಣಾಮ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ಇಂದು (ಫೆ.17) ಮಂಗಳವಾರ ನಡೆದಿದೆ.

ಶಾಲೆ ಮುಗಿಸಿಕೊಂಡು ಸಂಜೆ ಗಾಜರಕೋಟ್ ಗ್ರಾಮದ ನಿವಾಸಿ ಬಾಲಕ ಪುನೀತ್ ಖಾಸಗಿ ಶಾಲಾ ಬಸ್‌ನಿಂದ ಇಳಿದು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಆತ ಇಳಿದು ಹೋಗಿದ್ದಾನೆ ಎಂದು ಭಾವಿಸಿ ಚಾಲಕ ಬಸ್‌ ರಿವರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾನೆ ಈ ವೇಳೆ ಬಸ್‌ ಚಕ್ರಕ್ಕೆ ಸಿಲುಕಿ ಬಾಲು ಕೊನೆಯುಸಿರೆಳೆದಿದ್ದಾನೆ.

ವಿದ್ಯಾರ್ಥಿಗಳನ್ನು ನಿತ್ಯ ಬಸ್‌ನಲ್ಲಿ ಶಾಲೆಗೆ ಕರೆದೊಯ್ದು ಮತ್ತು ವಾಪಸ್‌ ಕರೆದುಕೊಂಡು ಬಂದು ಬಿಡಲಾಗುತ್ತಿತ್ತು. ಮಂಗಳವಾರವೂ ಸಹ ಹಾಗೆಯೇ ವಿದ್ಯಾರ್ಥಿಗಳನ್ನು ಶಾಲೆಯಿಂದ ಮರಳಿ ಮನೆಗೆ ಬಿಡಲು ಬಂದಿದ್ದ ಈ ದುರ್ಘಟನೆ ಸಂಭವಿಸಿದೆ.

ವಿದ್ಯಾರ್ಥಿಗಳನ್ನು ಕೆಳಗಿಳಿಸಿದ ಚಾಲಕ ಹಿಂಬದಿ ನೋಡದೆ ರಿವರ್ಸ್ ತೆಗೆದುಕೊಂಡಿದ್ದರ ಪರಿಣಾಮ ಹಿಂಬದಿಯ ಚಕ್ರಕ್ಕೆ ಸಿಲುಕಿ ಬಾಲಕ ಅಸುನೀಗಿದ್ದಾನೆ.

ಬಸ್‌ಗೆ ಸಿಲುಕಿ ಬಾಲಕ ಮೃತಪಟ್ಟ ಎಂಬ ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಗುರುಮಠಕಲ್ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡು ಮುಂದಿನಬ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!