- ಐದು ಆರು ಟ್ರಿಪ್ ಸಾಗಿಸಿರುವುದು ಅದು ಸಾರಿಗೆ ನೌಕರರನ್ನೂ ಅವರ ವೈಯುಕ್ತಿಕ ಕೆಲಸಕ್ಕೆ ಬಳಸಿಕೊಂಡ ಅಧಿಕಾರಿ
- ವಿಡಿಯೋದಲ್ಲಿ ಕಾಣುವ ಕೆಂಪು ಟೀ ಶರ್ಟ್ ಹಾಕಿಕೊಂಡಿರುವ ವ್ಯಕ್ತಿಯೆ ಡಿಟಿಒ
- ಕೆಎಸ್ಆರ್ಟಿಸಿ, ಸಿಬ್ಬಂದಿ, ಕಚೇರಿ ವಾಹನ ದುರುಪಯೋಗ
- ತನ್ನ ತೋಟಕ್ಕೆ ಬೇಕಾದ ಸಸಿಗಳನ್ನು ತರಲು ಇಲಾಖೆ ಸಿಬ್ಬಂದಿ, ವಾಹನ ದುರ್ಬಳಕೆ ವಿಡಿಯೋ ಸಹಿತ ಬಹಿರಂಗ
ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ (ಡಿಟಿಒ) ಸಾರಿಗೆ ವಾಹನವನ್ನು ದುರುಪಯೋಗ ಪಡಿಸಿಕೊಂಡು ತನ್ನ ತೋಟಕ್ಕೆ ಬೇಕಾದ ಅಡಕೆ ಸಸ್ಯಗಳನ್ನು ತರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಸಾರಿಗೆ ನೌಕರರು ಮುಷ್ಕರ ಮಾಡಿದರು ಎಂಬ ಕಾರಣಕ್ಕೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಇನ್ನಿಲ್ಲದ ಹಿಂಸೆ ನೀಡುತ್ತಿರುವ ಸಾರಿಗೆ ಆಡಳಿತ ವರ್ಗ ಈ ರೀತಿ ಸಾರಿಗೆ ವಾಹನ ಮತ್ತು ಸಾರಿಗೆ ನೌಕರರನ್ನು ತನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಈ ಅಧಿಕಾರಿಯ ವಿರುದ್ಧ ಇನ್ನೂ ಏಕೆ ಕಾನೂನು ಕ್ರಮ ಜರುಗಿಸಿಲ್ಲ ಎಂಬುದುವುದು ಪ್ರಶ್ನೆಯಾಗಿಯೇ ಉಳಿದಿದೆ.
ಹೌದು! ಇಲ್ಲಿ ಅಧಿಕಾರಿಗಳಿಗೆ ಒಂದು ನ್ಯಾಯ ನೌಕರರಿಗೆ ಒಂದು ನ್ಯಾಯ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಂಸ್ಥೆಯ ವಾಹನ ಮತ್ತು ನೌಕರರನ್ನು ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳನ್ನು ಶಿಕ್ಷಿಸುವ ಬದಲಿಗೆ ಮತ್ತೆ ನೌಕರರನ್ನು ಶಿಕ್ಷಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಸಂಸ್ಥೆ ಲಾಭದಲ್ಲಿದ್ದರು ಇಂಥ ಅಧಿಕಾರಿಗಳಿಂದ ನಷ್ಟವನ್ನು ಅನುಭವಿಸುವಂತಾಗಿದೆ.
ಇನ್ನು ಈ ವಿಷಯ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿರಿ ಸಿದ್ದೇಶ್ ಅವರ ಗಮನಕ್ಕೂ ಬಂದಿದೆ. ಆದರೆ ಅವರು ಈ ಬಗ್ಗೆ ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರುವ ಬದಲಿಗೆ ಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಅಂದರೆ ಈ ರೀತಿ ವಾಹನ ದುರುಪಯೋಗ ಪಡಿಸಿಕೊಳ್ಳಲಿ ಡಿಸಿ ಸಿದ್ದೇಶ್ ಅವರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಇಲ್ಲಿ ನೋಡಿ ದಾವಣಗೆರೆ ಡಿಟಿಒ ಮಂಜುನಾಥ ಸಂಸ್ಥೆಯ ವಾಹನದಲ್ಲಿ ಚನ್ನಗಿರಿ ಹತ್ತಿರದ ದೋಣಿಹಳ್ಳಿಯಿಂದ ಸಂತೇಬೆನ್ನೂರಿನಲ್ಲಿರುವ ಅವರ ತೋಟಕ್ಕೆ ಅಡಕೆ ಗಿಡಗಳನ್ನು ಇಲಾಖೆ ವಾಹನದಲ್ಲಿ ಸಾಗಿಸಿದ್ದಾರೆ. ಅದೂ ಒಂದು ಬಾರಿ ಅಲ್ಲ ಆರೇಳು ಟ್ರಿಪ್ ಸಾಗಿಸಿರುವುದು ಖಚಿತವಾಗಿದೆ.
ತನ್ನ ತೋಟಕ್ಕೆ ಅಡಕೆ ಗಿಡಗಳನ್ನು ಸಾಗಿಸಲು ಬೇರೆ ಕೂಲಿಗಾರರನ್ನೂ ಬಳಿಸಿಕೊಂಡಿಲ್ಲ ಬದಲಿಗೆ ಇವರು ಸಾರಿಗೆ ನೌಕರರನ್ನೇ ಬಳಸಿಕೊಂಡು ತನ್ನ ವೈಯುಕ್ತಿಕ ಕೆಲಸ ಮಾಡಿಸಿಕೊಂಡಿದ್ದಾರೆ. ಇವರ ಈ ನಡೆಯಿಂದ ಸಂಸ್ಥೆಗೆ ಅಂದಾಜು 15 ಸಾವಿರ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಜತೆಗೆ ಇವರು ಅಂದು ಕರ್ತವ್ಯಕ್ಕೆ ಹಾಜರಾಗಿಲ್ಲ ಅಂದರೆ ಅವರ ವೇತನ ಸೇರಿಸಿದರೆ ಕನಿಷ್ಠ 20 ಸಾವಿರ ರೂ.ವರೆಗೆ ಸಂಸ್ಥೆಗೆ ನಷ್ಟವಾಗಿದೆ.
ಅಂದರೆ, ಅಧಿಕಾರಿಯ ವೈಯಕ್ತಿಕ ಕೆಲಸಕ್ಕೆ ಸಾರಿಗೆ ವಾಹನ ಮತ್ತು ನೌಕರರನ್ನು ಬಳಸಿಕೊಂಡಿರುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೂ ಈ ಕೃತ್ಯವನ್ನು ಅಧಿಕಾರಿ ಮಂಜುನಾಥ್ ಎಸಗಿ ಒಂದು ತಿಂಗಳು ಕಳೆಯುತ್ತಿದ್ದರೂ ಈವರೆಗೂ ಈತನ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಇರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ.
ಇನ್ನು ಅವರು ಸಾರಿಗೆ ವಾಹನವನ್ನು ಮತ್ತು ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿರುವ ವಿಡಿಯೋ ವಿಜಯಪಥಕ್ಕೆ ಲಭ್ಯವಾಗಿದ್ದು ಅವರ ದುರ್ನಡತೆಯನ್ನು ಬಿಚ್ಚಿಡುತ್ತಿದೆ. ಇನ್ನು ಈ ಅಧಿಕಾರಿಯ ವಿರುದ್ಧ ಸಂಸ್ಥೆಯ ಎಂಡಿ ಮತ್ತು ಸಾರಿಗೆ ಸಚಿವರು ಸೇರಿದಂತೆ ಸರ್ಕಾರ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಏನು ತಪ್ಪನ್ನು ಮಾಡದ ಅಮಾಯಕ ನೌಕರರನ್ನು ವಜಾ ಮಾಡಿರುವ ಸಂಸ್ಥೆಯ ಆಡಳಿತ ವರ್ಗ ಇಂಥ ಅಧಿಕಾರಿಗಳ ಬಗ್ಗೆ ಸೂಕ್ತ ದಾಖಲೆಗಳಿದ್ದರೂ ಏನೂ ಕಾಣದಂತೆ ವರ್ತಿಸುತ್ತಿರುವುದು ಏಕೆ? ಈ ಆಡಳಿತ ವರ್ಗಕ್ಕೆ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ದಮ್ಮು ತಾಕತ್ತು ಇಲ್ಲದಷ್ಟು ನಿಸ್ಪ್ರಯೋಜಕವಾಗಿದೆಯೆ?.
ಅದೇ ಒಬ್ಬ ನೌಕರ ಏನೊಂದು ತಪ್ಪು ಮಾಡದಿದ್ದರೂ ಕೂಡಲೇ ಅಮಾನತು, ವಜಾ ಮಾಡುತ್ತೀರಿ ಅದಕ್ಕೆ ನೌಕರರ ಹೇಳಿಕೆಯನ್ನು ಪಡೆಯುವುದಿಲ್ಲ. ಈಗ ಮಾತ್ರ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿಮಗೆ ಬೇಕಾದ ಸಾಕ್ಷಿ ಸಹಿತ ದಾಖಲೆಗಳು ಕಣ್ಣಮುಂದೆ ಇದ್ದರೂ ಅವುಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಅಲ್ಲ. ಏಕೆ ಈ ರೀತಿಯ ಮಲತಾಯಿ ಧೋರಣೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು. ಅದನ್ನು ಮೊದಲು ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಚಿವರು ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
Related

You Might Also Like
ಪ್ರಯಾಣಿಕರಿಗೆ ವಿತರಿಸದ ಟಿಕೆಟ್ ಮೌಲ್ಯ ಶೂನ್ಯ: ಆದರೂ ನಿರ್ವಾಹಕರು ದಂಡಕಟ್ಟಬೇಕೆಂಬ ಅಸಂಬದ್ಧ ಸುತ್ತೋಲೆ!!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು...
KSRTC: ಪ್ರಯಾಣಿಕ ಟಿಕೆಟ್ ಕಳೆದು ಕೊಂಡರೆ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ-ಎಂಡಿ ಆದೇಶ
2020 ಫೆಬ್ರವರಿ 20ರಂದು ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಸುತ್ತೋಲೆ ಹೊರಡಿಸಿದ್ದಾರೆ ಬೆಂಗಳೂರು: ಪ್ರಯಾಣಿಕರು ಟಿಕೆಟ್ ಕಳೆದುಕೊಂಡ ಪಕ್ಷದಲ್ಲಿ ತನಿಖಾದಿಕಾರಿಗಳು ವಾಹನವೂ ತಪಾಸಣಾ ಗೋಳಪಡಿಸಿದಾಗ...
ವಿಧಾನಸೌಧ ಈಗ ಪ್ರವಾಸಿ ತಾಣ: ಸಾರ್ವಜನಿಕ ವೀಕ್ಷಣೆಗೆ ಮುಕ್ತ- ಯಾರಿಗೆ ಟಿಕೆಟ್ ಮತ್ತ್ಯಾರಿಗೆ ಉಚಿತ!
ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಒಮ್ಮೆಯಾದರೂ ನೋಡಬೇಕು ಎಂದು ರಾಜ್ಯದ ಅದೆಷ್ಟು ಮಂದಿ ಆಸೆಪಡುತ್ತಿದ್ದರು. ಅಲ್ಲಿಗೆ ನಾವು ಹೋಗುವುದು ಹೇಗೆ ಎಂದು ಹಲವರು ಹಳ್ಳಿಗಳ್ಳಲಿ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ...
KSRTC: ಸಾರಿಗೆ ನೌಕರರಿಗೆ ಈ ಕೂಡಲೇ ವೇತನ ಹೆಚ್ಚಳ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ಕುಕನೂರು ಪಪಂ ಸದಸ್ಯೆ ಫಿರ್ದೋಶ್ ಬೇಗಂ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಕುಕನೂರು ಪಟ್ಟಣಪಂಚಾಯಿತಿ ಸದಸ್ಯರಾದ...
KKRTC ಬೀದರ್: ಕಿರಿಯ ಸಹಾಯಕ 10ಹುದ್ದೆ ಖಾಲಿ ಇದ್ದರು ಬೇರೆ ಹುದ್ದೆ ಆಯ್ಕೆಗೆ ಮೃತ ನೌಕರರ ಮಕ್ಕಳಿಗೆ ಅಧಿಕಾರಿಗಳಿಂದ ಒತ್ತಡ !
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬೀದರ್ವಿಭಾಗದಲ್ಲಿ ಅನುಕಂಪ ಆಧಾರದ ಮೇಲಿನ ಕಿರಿಯ ಸಹಾಯಕ ಹುದ್ದೆ ನೇಮಕಾತಿ ನಡೆಯದೆ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಿವೆ. ಇನ್ನು...
ನಾಳೆ ಲಾಲ್ಬಾಗ್ ಆಭರಣದಲ್ಲಿ EPS ಪಿಂಚಣಿದಾರರ 89ನೇ ಮಾಸಿಕ ಸಭೆ
ಬೆಂಗಳೂರು: ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ, ನಡಿಗೆದಾರರ ಸ್ವರ್ಗ ಎಂದು ಕರೆಯುವ, ವಿಶ್ವ ವಿಖ್ಯಾತ ಲಾಲ್ಬಾಗ್ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ, ಈ ಸುಂದರ ಪರಿಸರ ತಾಣದಲ್ಲಿ...
ನಟ ದರ್ಶನ್ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ
ಬೆಂಗಳೂರು: ನಟ ದರ್ಶನ್ ಅವರಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು 57ನೇ ಸಿಸಿಎಚ್ ನ್ಯಾಯಾಲಯ ಅನುಮತಿ ನೀಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್...
NWKRTC: 2024-25ನೇ ಸಾಲಿನ ಐಚ್ಛಿಕ ಭ.ನಿ. ಚೀಟಿಗಳ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ: ನೌಕರರಿಗೆ CAO ಆದೇಶ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ಎಲ್ಲ ಅಧಿಕಾರಿಗಳ- ನೌಕರರ 2024-25ನೇ ಸಾಲಿನ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯನಿಧಿ ಚೀಟಿಗಳನ್ನು ಆನ್ಲೈನ್ ಮೂಲಕ...
ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡಹುತ್ತಿರುವವರ ಸರ್ಕಾರ ಮಟ್ಟಹಾಕದೆ ಬಿಡೆದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ವಾಗ್ದಾನವನ್ನು ನಾಡಿನ ಜನತೆಗೆ ನಾವು ಚುನಾವಣಾ ಪೂರ್ವದಲ್ಲೇ ನೀಡಿದ್ದೆವು, ಅದರಂತೆ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬಹುಮತದ ಸರ್ಕಾರ ರಚನೆಗೆ...