NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು….!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಇರುವ ಕಾನೂನು ತೊಡಕುಗಳಾದರೂ ಏನು? ಅವುಗಳನ್ನು ಬಗೆಹರಿಸುವುದಕ್ಕೆ ಏಕೆ ಆಡಳಿತ ಮಂಡಳಿ ಮುಂದಾಗುತ್ತಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ನಾಲ್ಕೂ ನಿಗಮದ ಆಡಳಿತ ಮಂಡಳಿಗಳನ್ನು ನೌಕರರು ಕೇಳುತ್ತಿದ್ದಾರೆ.

ಸಾರಿಗೆ ನಿಗಮಗಳ ಚಾಲನಾ ಸಿಬ್ಬಂದಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಪ್ರಯಾಣಿಕರು ಮಾಡುವ ತಪ್ಪಿಗೆ ಇವರಿಗೇಕೆ ಮೆಮೋ ಕೊಡುವ ಪದ್ಧತಿ ಇದೆ. ತಪ್ಪು ಮಾಡಿದವರಿಗೆ ಮೆಮೋ ಕೊಟ್ಟು ಅವರಿಂದ ದಂಡ ವಸೂಲಿ ಮಾಡಬೇಕಲ್ಲವೇ?

ಜನರೇ ತಪ್ಪು ಮಾಡಿದ್ದಾರೆ ಎಂಬುವುದು ತನಿಖಾ ಸಿಬ್ಬಂದಿಗೂ ಗೊತ್ತಿದ್ದರೂ ಅವರ ಬದಲಿಗೆ ನಿರ್ವಾಹಕರಿಗೆ ಮೆಮೋ ಕೊಟ್ಟು ಬಳಿಕ ವಿಚಾರಣೆ ನೆಪದಲ್ಲಿ ನಿರ್ವಾಹಕರನ್ನು ಅಮಾನತಿನಲ್ಲಿ ಇಡುವುದರಿಂದ ಸಂಸ್ಥೆಗೆ ಲಾಭವಾಗುತ್ತದೋ ಇಲ್ಲ ನಷ್ಟವಾಗುತ್ತದೋ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು.

ಇನ್ನು ಈ ಶಕ್ತಿ ಯೋಜನೆ ಜಾರಿಗೆ ಬಂದಮೇಲೆ ಮಹಿಳೆಯರು ಟಿಕೆಟ್‌ ತೆಗೆದುಕೊಳ್ಳದೆ ಉದಾಸೀನತೆಯಿಂದ ಕುಳಿತುಕೊಳ್ಳುತ್ತಿರುವುದು ಕಂಡು ಬಬರುತ್ತಿದೆ. ಆದರೂ ಅವರಿಗೆ ದಂಡ ಹಾಕುವುದಿಲ್ಲ ಏಕೆ? ಬದಲಿಗೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದೀರಾ ಇದಕ್ಕೆ ಸರಿಯಾದ ಕಾರಣವನ್ನು ಈವರೆಗೂ ಯಾವೊಬ್ಬ ಅಧಿಕಾರಿಯೂ ನೀಡಿಲ್ಲ.

ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಹುತೇಕ ಎಲ್ಲ ಬಸ್‌ಗಳು ಒಂದು ಇರುವೆ ಕೂಡ ನುಸುಳಿ ಹೋಗುವುದಕ್ಕೂ ಜಾಗವಿಲ್ಲದಷ್ಟು ತುಂಬಿಹೋಗುತ್ತಿವೆ. ಈ ನಡುವೆ ನಿರ್ವಾಹಕರು ಅವರಿಗಿರುವ ಸಮಯದಲ್ಲಿ ಒಬ್ಬೊಬ್ಬರನ್ನು ಕೇಳಿ ಕೇಳಿ ಟಿಕೆಟ್‌ ಕೊಡುವುದಕ್ಕೆ ಸಾಧ್ಯವಾ? ಹೀಗಿರುವಾಗ ನಿರ್ವಾಹಕರನ್ನು ಕೇಳಿ ಟಿಕೆಟ್‌ ಪಡೆದುಕೊಳ್ಳುವುದು ಮಹಿಳೆಯರ ಕರ್ತವ್ಯವಲ್ಲವಾ?

ಈ ಬಗ್ಗೆ ಏಕೆ ನೀವು ಯಾವುದೇ ತಿಳಿವಳಿಯನ್ನು ಮೂಡಿಸುವ ಕೆಲಸವನ್ನು ನಿಗಮಗಳಿಂದ ಮಾಡಿಲ್ಲ. ಇದರಿಂದ ನಿರ್ವಾಹಕರಿಗೆ ಒತ್ತಾಡ ಹೆಚ್ಚಾಗಿ 30ರಿಂದ 45 ವರ್ಷದೊಳಗಿನ ಎಷ್ಟೋ ಮಂದಿ ಚಾಲನಾ ಸಿಬ್ಬಂದಿ ತಮ್ಮ ಉಸಿರು ಚೆಲ್ಲುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ?

ಪ್ರಮುಖವಾಗಿ ಸಾರ್ವಜನಿಕ ಉದ್ದಿಮೆ ಎಂದು ಕರೆಯಲ್ಪಡುವ ಸಾರಿಗೆ ನಿಗಮ ಉತ್ಪಾದನೆ ಮಾಡುತ್ತಿರುವ ವಸ್ತು ಯಾವುದು?‌ ಸಾರ್ವಜನಿಕ ಉದ್ದಿಮೆ ಎಂದು ಕರೆಯಲ್ಪಡುವ ಸಾರಿಗೆ ನಿಗಮವನ್ನು ಎಸ್ಮಾ ಕಾಯ್ದೆ ಅಡಿಯಲ್ಲಿ ತರಲು ಕಾರಣ ಆಗಿರುವ ಅಂಶಗಳಾದರೂ ಯಾವುವು?

ಸಾರ್ವಜನಿಕ ಸೇವಾ ಸಂಸ್ಥೆಯನ್ನು ವ್ಯಾವಹಾರಿಕವಾಗಿ/ ಆರ್ಥಿಕವಾಗಿ ಲಾಭ/ ನಷ್ಟ ಎಂದು ಪರಿಗಣಿಸಲು ಇರುವ ಅಂಶಗಳು ಯಾವುವು? ಮೊದಲಿನ ಹಾಗೆ ಸಾರಿಗೆ ನಿಗಮವನ್ನು ಸಾರಿಗೆ ಇಲಾಖೆಯ ಅಧೀನದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಇರುವ ಕಾನೂನಾತ್ಮಕ ತೊಡಕುಗಳಾದರೂ ಏನು?

ಬೇರೆಬೇರೆ ನಿಗಮ/ ಮಂಡಳಿ ನೌಕರರಿಗೆ ಅನ್ವಯಿಸುವಂತೆ ಸಾರಿಗೆ ನಿಗಮದ ನೌಕರರಿಗೂ ಸಹ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಇರುವ ಕಾನೂನಾತ್ಮಕ ತೊಡಕುಗಳು ಏನು? ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕೈಗಾರಿಕಾ ಒಪ್ಪಂದ ಎಂದು ಹೇಳಿಕೊಂಡು ಸಮಸ್ಯೆ ಬಗೆಹರಿಯದೆ ಇದ್ದಾಗ ಸಾರ್ವಜನಿಕರಿಗೆ/ ವಿದ್ಯಾರ್ಥಿಗಳಿಗೆ ಪ್ರತಿಭಟನೆ/ ಮುಷ್ಕರ ಎಂದು ತೊಂದರೆ ಕೊಡುವ ಸಾರಿಗೆ ನೌಕರರನ್ನು ಸಹ ವೇತನ ಆಯೋಗದ ಅಡಿಯಲ್ಲಿ ತಂದು ಅವರೇ ಕೇಳುತ್ತಿರುವ ಹಾಗೆ ಶಾಶ್ವತ ಪರಿಹಾರ ಸೂಚಿಸಲು ಇರುವ ಕಾನೂನಾತ್ಮಕ ತೊಡಕುಗಳು ಏನು ಎಂದು ಪ್ರಶ್ನಿಸಿದ್ದಾರೆ.

Leave a Reply

error: Content is protected !!
LATEST
20 ದಿನದೊಳಗೆ ರೈತರಿಗೆ ಬರ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ KSRTC: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್‌ -6ಮಂದಿಗೆ ಗಾಯ KSRTC ಗುಂಡ್ಲುಪೇಟೆ ಘಟಕ: ನೌಕರರಿಗೆ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿರುವ ಡಿಎಂ, ಎಟಿಎಸ್‌ - DC ಮೌನ NWKRTC: ಬಸ್‌ನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಮಹಿಳೆ ಧಾರುಣಸಾವು ಬಸ್‌ - ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ : ನಾಲ್ವರು ಮೃತ, ಹಲವರಿಗೆ ಗಾಯ KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?