NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡಕ್ಟರ್

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಸ್ ಟಿಕೆಟ್ ಕಳೆದುಕೊಂಡಿದ್ದರಿಂದ ಭಯಗೊಂಡ ನಿರ್ವಾಹಕರು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಆಕೆಯನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ.

ನಿರ್ವಾಹಕರು ತನಿಖಾಧಿಕಾರಿಗಳ ಭಯಕ್ಕೆ ಆಕೆಯನ್ನು ಕೆಳಗಿಳಿಸಿ ಹೋಗಿದ್ದಾರೆ. ಆದರೆ ಇದು ಅಮಾನವೀಯ ಘಟನೆ, ಹಣ ಪಡೆದೆ ಆಕೆಗೆ ಮತ್ತೊಂದು ಟಿಕೆಟ್‌ ಕೊಡಬಹುದಿತ್ತು ಎಂದು ಪ್ರಯಾಣಿಕರು ನಿರ್ವಾಹಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ, ಈ ರೀತಿ ಟಿಕೆಟ್‌ ಕಳೆದುಕೊಂಡ ಮಹಿಳೆಯರಿಗೆ ಬದಲಿ ಟಿಕೆಟ್‌ ಕೊಟ್ಟು, ಇದೇ ವೇಳೆಗೆ ತನಿಖಾ ಸಿಬ್ಬಂದಿ ಬಂದು ಟಿಕೆಟ್‌ ಚೆಕ್‌ ಮಾಡಿದ್ದರೆ ನಿರ್ವಾಹಕರ ವಿರುದ್ಧ ಕಾನೂನಿ ರೀತಿ  ಕ್ರಮ ತೆಗೆದುಕೊಂಡು ಅವರನ್ನು ಅಮಾನತು ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಇಲ್ಲಿ ನಿರ್ವಾಹಕರು ಇನ್ನೊಂದು ಟಿಕೆಟ್‌ ಕೊಡಲು ನಿರಾಕರಿಸಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟ.

ಘಟನೆ ವಿವರ: ಹೊಸದುರ್ಗ ತಾಲೂಕಿನ ಸಾಲಕಟ್ಟೆ ಸಮುದಾಯ ಆರೋಗ್ಯ ಅಧಿಕಾರಿ ಚೈತ್ರಾ ಎಂಬುವರು ಬುಧವಾರ ಸಾಲಕಟ್ಟೆ ಗೇಟ್ ನಿಂದ ಹೊಸದುರ್ಗ ತಾಲೂಕು ಶ್ರೀರಾಂಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಮಹಿಳೆಯರಿಗೆ ವಿತರಿಸುವ ಉಚಿತ ಟಿಕೆಟ್‌ಅನ್ನು ನಿರ್ವಾಹಕರು ಕೊಟ್ಟಿದ್ದಾರೆ.

ಆದರೆ, ಚೈತ್ರಾ ಆ ಟಿಕೆಟ್‌ ಕಳೆದುಕೊಂಡಿದ್ದಾರೆ. ಈ ವೇಳೆ ಅವರಿಗೆ ಬದಲಿ ಟಿಕೆಟ್‌ ಕೊಡಲು ಬರುವುದಿಲ್ಲ ಒಂದು ವೇಳೆ ತನಿಖಾಧಿಕಾರಿಗಳು ತಪಾಸಣೆಗೆ ಬಂದರೆ ನನ್ನನ್ನು ಅಮಾನತು ಮಾಡಬಹುದು ಎಂದು ಹೆದರಿ ಆಕೆಯನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ.

ಇನ್ನು ಈ ಸಂಬಂಧ ನೊಂದ ಚೈತ್ರಾ ಹೊಸದುರ್ಗ ಕೆಎಸ್‌ಆರ್ಟಿಸಿ ಘಟಕಕ್ಕೆ ದೂರು ನೀಡಿದ್ದಾರೆ. ಆಕಸ್ಮಿಕವಾಗಿ ಟಿಕೆಟ್ ಕಳೆದುಕೊಂಡ ಕಾರಣಕ್ಕೆ ಮತ್ತೆ ಟಿಕೆಟ್ ಕೊಡದೆ ಬಸ್‌ನಿಂದ ನನ್ನುನ್ನು ರಸ್ತೆ ಮಧ್ಯೆಯೇ ಇಳಿಸಲಾಗಿದೆ ಎಂದು ದೂರಿದ್ದಾರೆ.

ಸಾಲಕಟ್ಟೆ ಗೇಟ್‌ನಿಂದ ಹೊಸದುರ್ಗ ತಾಲೂಕು ಶ್ರೀರಾಂಪುರಕ್ಕೆ ಬಸ್‌ನಲ್ಲಿ ಬುಧವಾರ ಸಂಜೆ 4.30ರಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಹುಳಿಯಾರು ಬಸ್ ನಿಲ್ದಾಣದ ಬಳಿ ನನ್ನ ಕೈಯಲ್ಲಿದ್ದ ಟಿಕೆಟ್ ಕೈತಪ್ಪಿ ಬಸ್‌ನಿಂದ ಹೊರಗೆ ಬಿದ್ದಿದೆ. ಈ ಬಗ್ಗೆ ಕಂಡಕ್ಟರ್‌ಗೆ ತಿಳಿಸಿದೆ.

ಅಷ್ಟರಲ್ಲಾಗಲೇ ಹುಳಿಯಾರು ಪಟ್ಟಣ ಬಿಟ್ಟು ಬಸ್ ಮುಂದೆ ಬರುತ್ತಿತ್ತು. ಆ ವೇಳೆ ನಾನು ಇನ್ನೊಂದು ಟಿಕೆಟ್ ಕೊಡಿ ಎಂದು ಕೇಳಿದ್ದು, ಹಾಗೆಲ್ಲ ಕೊಡಲು ಬರುವುದಿಲ್ಲ ಎಂದು ಕಂಡಕ್ಟರ್ ತಿಳಿಸಿದರು. ಶಕ್ತಿ ಯೋಜನೆಯ ಉಚಿತ ಟಿಕೆಟ್ ಬೇಡ ಹಣ ಪಾವತಿಸುತ್ತೇನೆ, ಟಿಕೆಟ್ ಕೊಡಿ ಎಂದು ಕೇಳಿದಾಗ ಕೋಪಗೊಂಡ ಕಂಡಕ್ಟರ್ ಏರು ಧ್ವನಿಯಲ್ಲಿ ಬೈದು ಹುಳಿಯಾರು ಪಟ್ಟಣದ ಹೊರ ವಲಯದಲ್ಲಿ ನನ್ನನ್ನು ಕೆಳಗಿಳಿಸಿದ್ದಾರೆ ಎಂದು ಚೈತ್ರಾ ದೂರು ನೀಡಿದ್ದಾರೆ.

ಬಸ್‌ನಿಂದ ಕೆಳಗಿಳಿದ ಸ್ಥಳದಿಂದ ನಾನು ಖಾಸಗಿ ಬಸ್‌ನಲ್ಲಿ ಹೊಸದುರ್ಗಕ್ಕೆ ಪ್ರಯಾಣ ಮಾಡಿದೆ ಎಂದು ಕೆಎಸ್‌ಆರ್ಟಿಸಿ ಘಟಕ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿದ್ದಾರೆ ಚೈತ್ರಾ.

ಇನ್ನು ಇದು ಮೊದಲಿಗೆ ಚೈತ್ರಾ ಅವರ ಕಡೆಯಿಂದ ತಪ್ಪಾಗಿದೆ. ಇನ್ನು ಆಕೆಯನ್ನು ತನಿಖಾಧಿಕಾರಿಗಳ ಭಯಕ್ಕೆ ಮಾರ್ಗಮಧ್ಯೆ ಇಳಿಸಿದ್ದು ನಿರ್ವಾಹಕರ ತಪ್ಪುಕೂಡ. ಹೀಗಾಗಿ ಅಧಿಕಾರಿಗಳು ಇಂಥ ಪ್ರಕರಣದ ಬಗ್ಗೆ ನಿಯಮ ರೂಪಿಸುವುದು ಒಳ್ಳೆಯದು ಎಂದು ನೌಕರರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು