NEWSನಮ್ಮಜಿಲ್ಲೆನಮ್ಮರಾಜ್ಯ

ಇಪಿಎಸ್ ನಿವೃತ್ತರ ಪರನಿಂತ 11 ಸಂಸದರು – ನಮ್ಮ ಹೋರಾಟ ಫಲಿಸುತ್ತದೆ ಎಂಬ ಆಶಾ ಭಾವನೆ: 79ನೇ ಮಾಸಿಕ ಸಭೆಯಲ್ಲಿ ಹರ್ಷ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶಾದ್ಯಂತ ಇರುವ ಇಪಿಎಸ್ ನಿವೃತ್ತರು ನಾವೆಲ್ಲರೂ ಒಂದೇ. ಅದರಂತೆ ಕರ್ನಾಟಕ ಒಂದರಲ್ಲಿಯೇ ಸುಮಾರು ಆರೂವರೆ ಲಕ್ಷ ಇಪಿಎಸ್ ನಿವೃತ್ತರಿದ್ದೀವಿ. ಆದರೆ, ಬೇಕಾದವರು ಮಾತ್ರ ಹೋರಾಟದಲ್ಲಿ ಭಾಗವಹಿಸಲಿ, ಅವರಿಗೆ ಆದದ್ದೆ ನಮಗೂ ಅನ್ವಯವಾಗುತ್ತದೆ ಎಂಬ ಧೋರಣೆಯಿಂದ ಕೆಲವರು ಸಭೆಯಲ್ಲಿ ಭಾಗವಹಿಸುತ್ತಿಲ್ಲ ಈ ಧೋರಣೆಯನ್ನು ಬಿಡಬೇಕು ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಧ್ಯಕ್ಷ ನಂಜುಂಡೇಗೌಡ ಹೇಳಿದರು.

ಇನ್ನು ಮೊನ್ನೆ ನಗರದ ಲಾಲ್‌ಬಾಗ್‌ನಲ್ಲಿ ನಡೆದ ಇಪಿಎಸ್ ನಿವೃತ್ತರ 79ನೇ ಮಾಸಿಕ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ನಿವೃತ್ತರು ಆಗಮಿಸಿದ್ದು ಭಾರಿ ಸಂತಸ ತಂದಿತು. ಆದರೆ ಬಹುತೇಕರು ಬಾರದಿರುವುದು ಅಷ್ಟೇ ನೋವನ್ನು ಉಂಟು ಮಾಡಿತು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಈ ಎಲ್ಲದರ ನಡುವೆ ರಾಷ್ಟ್ರೀಯ ಸಂಘರ್ಷ ಸಮಿತಿ CWC ಕಾರ್ಯಕಾರಿ ಸಮಿತಿ ಸಭೆ ಜುಲೈ 29 ಮತ್ತು 30 ರಂದು ದೆಹಲಿಯಲ್ಲಿ ನಡೆಸಿದ್ದು, ಕರ್ನಾಟಕದಿಂದ ಸುಮಾರು 30 ಜನ ಮುಖಂಡರು ಭಾಗವಹಿಸಿದ್ದೆವು. ಮುಂದುವರಿದಂತೆ, ಜುಲೈ 31 ಆಗಸ್ಟ್ 01, ರಂದು ಜಂತರ್ ಮಂತರ್‌ನಲ್ಲಿ ಜರುಗಿದ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ ಎಂದು ಹೇಳಲಿ ಹೆಮ್ಮೆಪಡುತ್ತೇನೆ ಎಂದರು.

ಅಂದರೆ ನಮ್ಮ ಹೋರಾಟಕ್ಕೆ ದೇಶದ ಮೂಲೆ ಮೂಲೆಯಿಂದಲೂ ಇಪಿಎಸ್ ನಿವೃತ್ತರು ಆಗಮಿಸಿ ಹೋರಾಟ ಮಾಡಿದ್ದರು.ಈ ವೇಳೆ ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥರಾದ ಅಶೋಕ್ ರಾವುತ್, ವೀರೇಂದ್ರ ಸಿಂಗ್ ರಾಜಾವತ್, ರಮಾಕಾಂತ್ ನರಗುಂದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಕೂಡಲೇ ಈಡೇರಿಸಿಕೊಡಬೇಕೆಂದು ಆಗ್ರಹಿಸಿದರು.

ಇನ್ನು ಇದಕ್ಕೆ ಧ್ವನಿಗೂಡಿಸಿದ ದೇಶದ 11 ಮಂದಿ ಸಂಸದರು ಸಹ ನಮ್ಮ ಹೋರಾಟಕ್ಕೆ ಬಲ ತುಂಬುತ್ತೇವೆ ಜತೆಗೆ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಹೀಗಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದಲ್ಲಿ ಮಾತ್ರ ಜಯ ಶತಸಿದ್ಧ ಎಂದು ಎನ್ಎಸಿ ರಾಜ್ಯಾಧ್ಯಕ್ಷ ಜೆಎಸ್ಎಂ ಸ್ವಾಮಿ ಕರೆ ನೀಡಿದರು.

ಇದೇ ಆಗಸ್ಟ್ 17 ಹಾಗೂ 18ರಂದು ಕ್ರಮವಾಗಿ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಎನ್ಎಸಿ ವತಿಯಿಂದ ಆಯೋಜಿಸಿರುವ ಇಪಿಎಸ್ ನಿವೃತ್ತರ ಸಮಾವೇಶ ನಡೆಯಲಿದ್ದು, ಈ ಸಭೆಗೆ ರಾಷ್ಟ್ರೀಯ ಮುಖಂಡರಾದ ಅಶೋಕ್ ರಾವತ್, ವೀರೇಂದ್ರ ಸಿಂಗ್ ರಜಾವತ್ ಹಾಗೂ ರಮಕಾಂತ್ ನರಗುಂದ ಅವರು ಭಾಗವಹಿಸಲಿದ್ದಾರೆ.

ಇನ್ನು ಈ ಸಭೆ ಅತ್ಯಂತ ಮಹತ್ವದ ಸಭೆಯಾಗಿದ್ದು, ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕು. ಭಾನುವಾರ ಸಂಘದ ಪದಾಧಿಕಾರಿಗಳಾದ ನಾಗರಾಜ, ರುಕ್ಮೇಶ್, ಮನೋಹರ್ ಅವರು ಸಭೆಯ ನಿರ್ವಹಣೆ ಜವಾಬ್ದಾರಿ ಹೊತ್ತು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿದ್ದು, ಡೋಲಪ್ಪನವರ ವಂದನಾರ್ಪಣೆಯೊಂದಿಗೆ ಸಭೆ ಪೂರ್ಣಗೊಳಿಸಿದರು.

ಪ್ರಾಸ್ತಾವಿಕ ನುಡಿ: ಇನ್ನು ಸಭೆಗೂ ಮುನ್ನಾ ಲಾಲ್ ಬಾಗ್ ಆವರಣದಲ್ಲಿ ಭಾರತದ 78ನೇ ಸ್ವಾತಂತ್ರ್ಯೋತ್ಸವವನ್ನು (78th Independence day) ಆಚರಿಸುವ ಸಲುವಾಗಿ, ಫಲ ಪುಷ್ಪ ಪ್ರದರ್ಶನಕ್ಕೆ ಸಿಬ್ಬಂದಿಗಳಿಂದ ಭರದ ಸಿದ್ಧತೆ ನಡೆಯುತ್ತಿತ್ತು. ಇದರಿಂದ ಗಾಜಿನ ಮನೆ ನವ ವಧುವಿನಂತೆ ಶೃಂಗಾರ ಗೊಳ್ಳುತ್ತಿದೆ.

ಇದೇ ಸಂದರ್ಭದಲ್ಲಿ ಇಪಿಎಸ್ ನಿವೃತ್ತರ 79ನೇ ಮಾಸಿಕ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ನಿವೃತ್ತರು ಆಗಮಿಸಿದ್ದು, ಈ ಸುಮಧುರ ಪರಿಸರದಲ್ಲಿ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ತಮ್ಮ ಹಳೆಯ ಸಹಪಾಠಿಗಳನ್ನು ಕಂಡೊಡನೆ, ಎಲ್ಲಿಲ್ಲದ ನವೊಲ್ಲಾಸದಿಂದ, ಉಭಯ ಕುಶಲೋಪರಿ ವಿಚಾರಿಸುತ್ತಿದ್ದುದು ಸಾಮಾನ್ಯ ದೃಶ್ಯಾವಳಿಯಾಗಿತ್ತು.

ಮೊದಲಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಡೋಲಪ್ಪನವರು ಎಲ್ಲಾ ಇಪಿಎಸ್ ನಿವೃತ್ತರು, ಸಂಘದ ಪದಾಧಿಕಾರಿಗಳು ಹಾಗೂ ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರನ್ನು ಸ್ವಾಗತಿಸಿ, ನಮ್ಮ ಹೋರಾಟದ ಸಂಪೂರ್ಣ ಚಿತ್ರಣವನ್ನು ಸಭೆಗೆ ತಿಳಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್