NEWSವಿಡಿಯೋ

600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ನ್ಯಾಯವೇ?

ವಿಜಯಪಥ ಸಮಗ್ರ ಸುದ್ದಿ

ರ್ಕಾರಿ ನೌಕರರ 6ನೇ ವೇತನ ವ್ಯವಸ್ಥೆಗೆ ಹೋಲಿಸಿದಾಗ ದರ್ಜೆ 1 ಮತ್ತು 2ರ ಸಾರಿಗೆ ನಿಗಮಗಳ ಅಧಿಕಾರಿ ವರ್ಗ ಸರ್ಕಾರಿ ನೌಕರರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚು ವೇತನ ಪಡೆಯುತ್ತಿದ್ದರು. ನಂತರದ ದರ್ಜೆ 3ರ ಮೇಲ್ವಿಚಾರಕ ವರ್ಗ ಸರ್ಕಾರಿ ನೌಕರರೊಡನೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಕಡಿಮೆ ವೇತನ ಪಡೆಯುತ್ತಿದ್ದರು.

ಅದೇ ರೀತಿ ದರ್ಜೆ 3ರ ಕಾರ್ಮಿಕ ವರ್ಗ ಸರ್ಕಾರಿ ನೌಕರರಿಗಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಇನ್ನು 4ನೇ ದರ್ಜೆ ನೌಕರರ ಸ್ಥಿತಿ ಅಯೋಮಯ. ಸಮಾನ ವೇತನದ ಪ್ರಶ್ನೆ ಬಂದಾಗ ಅದಕ್ಕೆ ಏಕೈಕ ಮಾನದಂಡ ನೌಕರಿಗೆ ನಿಗದಿತ ವಿದ್ಯಾರ್ಹತೆ.

ತಾಂತ್ರಿಕ ಸಿಬ್ಬಂದಿಗಳಾದ ತಾಂತ್ರಿಕ ಸಹಾಯಕ ‘ಎ’ ಮತ್ತು ತಾಂತ್ರಿಕ ಸಹಾಯಕ ‘ಬಿ’ ಇವರಿಗೆ 10+2 ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಆದರೆ, ಅವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕಿಂತ ಕಡಿಮೆ. ಇನ್ನು ಸಹಾಯಕ ಕುಶಲಕರ್ಮಿಗಳ ವಿದ್ಯಾರ್ಹತೆ 10+3ಕ್ಕೆ ನಿಗದಿ ಮಾಡಲಾಗಿದೆ. ಇವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕೆ ಸರಿಸಮಾನ.

ಆದರೆ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವಿದ್ಯಾರ್ಹತೆ 10ನೇ ತರಗತಿ. ಆಗೆಯೇ ಅಟೆಂಡರ್ ಮತ್ತು ಭದ್ರತಾ ಸಿಬ್ಬಂದಿಗಳ ವಿದ್ಯಾರ್ಹತೆ 10ನೇ ತರಗತಿ. ಆದರೆ ಅವರ ವೇತನ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ವೇತನಕ್ಕಿಂತ ಕಡಿಮೆ. ಆಗಿದ್ದರೆ ನಿಜವಾಗಿಯೂ ಅನ್ಯಾಯ ವಾಗಿರುವುದು ಯಾರಿಗೆ ಎಂಬುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್