CrimeNEWSನಮ್ಮಜಿಲ್ಲೆ

KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌

ಸೂರ್ಯಕಾಂತ್ ಹಾಗೂ  ಎಂ.ಆರ್. ಸೋಮೇಗೌಡ.
ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲ ಅಧಿಕಾರಿಗಳು ನೌಕರರ ಸುಲಿಗೆ ಮಾಡುವುದಲ್ಲದೇ ಸಂಸ್ಥೆಯಲ್ಲಿರುವ ಕೆಲ ವಸ್ತುಗಳನ್ನು ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ.

ಅದಕ್ಕೆ ತಾಜಾ ನಿದರ್ಶನ ಎಂಬಂತೆ ಚಾಮರಾಜನಗರ ವಿಭಾಗದ ಚಾಮರಾಜನಗರ ವರ್ಕ್‌ಶಾಪ್‌ನಲ್ಲಿನ ಇಂಜಿನ್‌ ಟ್ರಾಲಿ ಜತೆಗೆ ಸ್ಟ್ಯಾಂಡ್‌ಅನ್ನು ಟಾಟಾ ಲೈಲ್ಯಾಂಡ್‌ನವರಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಕಳೆದ ಜೂನ್‌ 4ರಂದು ಘಟಕದಿಂದ ಇಂಜಿನ್‌ ಟ್ರಾಲಿ ಜತೆಗೆ ಸ್ಟ್ಯಾಂಡ್‌ ಹೊರಗೆ ಕೊಟ್ಟಿರುವ ಬಗ್ಗೆ ಹೊರನೋಂದಣಿ ಆಗಿದೆ.

ಇನ್ನು ಜೂನ್‌ 4ರಂದು ಕೊಟ್ಟಿರುವ ಬಗ್ಗೆ ವರ್ಕ್‌ಶಾಪ್‌ನಲ್ಲೇ  ಹೊರ ನೋಂದಣಿ ಮಾಡಿದ್ದಾರೆ ಎಂದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಏಕೆ ತನಿಖೆ ಮಾಡಿಲ್ಲ ಎಂಬುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಇನ್ನು ಅಂದು ವಿಭಾಗೀಯ ತಾಂತ್ರಿಕ ಶಿಲ್ಪಿ, ಪ್ರಸ್ತುತ ಬೆಂಗಳೂರು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿರುವ ಸೂರ್ಯಕಾಂತ್ ಹಾಗೂ ಚಾಮರಾಜನಗರ ವಿಭಾಗೀಯ ಕಾರ್ಯಾಗಾರದ ಎಂಡಬ್ಲ್ಯೂಎಸ್ ಎಂ.ಆರ್. ಸೋಮೇಗೌಡ ಅವರು ಈ ಸಾಮಾಗ್ರಿ ಸಾಗಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದಿಷ್ಟೇ ಅಲ್ಲದೆ ಈ ರೀತಿ ಸಾಕಷ್ಟು ಅವ್ಯವಹಾರ ಇವರ ಕಾಲದಲ್ಲಿ ನಡೆದಿದ್ದು ಸಂಬಂಧಪಟ್ಟ ಮೇಲಧಿಕಾರಿಗಳು ತನಿಖೆ ಕೈಗೊಂಡಲ್ಲಿ ಎಲ್ಲ ಅವ್ಯವಹಾರ ಬಯಲಿಗೆ ಬರಲಿದೆ ಎಂದು ವಿಭಾಗದಲ್ಲಿರುವ ಸಿಬ್ಬಂದಿಗಳೇ ಹೇಳುತ್ತಿದ್ದಾರೆ.

ಇನ್ನು ಈ ರೀತಿ ಅಧಿಕಾರಿಗಳು ಕಾರ್ಯಾಗಾರಕ್ಕೆ ಬರುವ ಬಸ್‌ಗಳ ಬಿಡಿ ಭಾಗಗಳನ್ನು ಬೇರೆಡೆ ಸಾಗಿಸುವುದರಿಂದ ಬಿಡಿಭಾಗಗಳ ಅವಶ್ಯವಿರುವ ಬಸ್‌ಗಳಿಗೆ ಅಳವಡಿಸದೆ ಬಸ್‌ಗಳು ಅಪಘಾತಕ್ಕೀಡಾಗುತ್ತವೆ. ಈ ವೇಳೆ ಚಾಲಕರನ್ನು ಹೊಣೆ ಮಾಡಿ ಅವರ ವಿರುದ್ಧ ಪೊಲೀಸ್‌ ಪ್ರಕರಣಗಳನ್ನು ದಾಖಲಿಸುತ್ತಾರೆ.

ಚಾಲಕರಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳೆ ಈ ರೀತಿ ಹಿಂಸೆ ನೀಡಿದರೆ ಚಾಲಕರು ಯಾರ ಬಳಿ ಹೋಗಬೇಕು. ಸಂಸ್ಥೆಯ ಅಧಿಕಾರಿಗಳೇ ನೌಕರರ ವಿರುದ್ಧ ಪ್ರಕರಣದಾಖಲಿಸುತ್ತಿರುವುದರಿಂದ ಚಾಲಕರು ಖಾಸಗಿ ವಕೀಲರ ಮೊರೆ ಹೋಗಿ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಇನ್ನು ಈ ಅಧಿಕಾರಿಗಳು ಮಾಡುವ ಈ ರೀತಿಯ ತಪ್ಪುಗಳಿಗೆ ನಿಗಮಕ್ಕೆ 10-20 ಸಾವಿರ ರೂಪಾಯಿ ದಂಡವನ್ನು ಚಾಲಕರು ಕಟ್ಟಬೇಕು. ಇಲ್ಲ ಒಂದೆರೆಡು ವರ್ಷ ಇಂಕ್ರಿಮೆಂಟ್‌ಅನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕು. ಜತೆಗೆ ಅಮಾನತು ಶಿಕ್ಷೆಯನ್ನು ಅನುಭವಿಸಬೇಕು. ಇದಾದ ಬಳಿಕ ಕೋರ್ಟ್‌ ಕಚೇರಿ ಎಂದು ಅಲೆಯಬೇಕು. ಈ ರೀತಿ ಚಾಲಕರನ್ನು ಕಳೆದ 4 ದಶಕಗಳಿಂದಲೂ ಕೆಲ ಅಧಿಕಾರಿಗಳು ತಾವು ಮಾಡುವ ಹೀನಕೃತ್ಯವನ್ನು ಮುಚ್ಚಿಕೊಳ್ಳಲು ಚಾಲಕರನ್ನು ಪಾಪದ ಕೂಸುಗಳಾಗಿ ಬಿಂಬಿಸುತ್ತಿದ್ದಾರೆ.

ಇನ್ನಾದರೂ ಈ ರೀತಿ ಬಿಡಿಭಾಗಗಳನ್ನು ಹೊರಗಡೆ ಕಳುಹಿಸುವ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಜತೆಗೆ ವಿಭಾಗೀಯ ಕಾರ್ಯಾಗಾರದ ಗೇಟ್‌ನಲ್ಲಿ ಹೊರ ಹೋಗಿರುವುದಕ್ಕೆ ನೋಂದಣಿ ಆಗಿರುವ ಬಗ್ಗೆ ತನಿಖೆ ನಡೆಸಿ ತಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತ KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌ ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!!