NEWSನಮ್ಮಜಿಲ್ಲೆನಮ್ಮರಾಜ್ಯ

APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ ವೇತನ ಆಯೋಗದಂತೆ ಸಂಬಳ ಕೊಟ್ಟರೆ ಕೆಲವು ಸೌಲಭ್ಯಗಳನ್ನು ಸರ್ಕಾರ ಕಸಿದುಕೊಳ್ಳುತ್ತದೆ. ಅದಕ್ಕೆ ಆಂಧ್ರಪ್ರದೇಶದ ಸಾರಿಗೆ ನೌಕರರು ಈಗ ಅನುಭವಿಸುತ್ತಿರುವುದೆ ನಿದರ್ಶನ ಎಂದು ಕೆಲ ಸಂಘಟನೆಗಳ ಮುಖಂಡರು ಕೆಎಸ್‌ಆರ್‌ಟಿಸಿ ನೌಕರರಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕೆಲ ಸಂಘಟನೆಗಳ ಮುಖಂಡರ ಈ ನಡೆಯಿಂದ ರಾಜ್ಯದ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರು ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ ವಾಸ್ತವವಾಗಿ ನೋಡಿದರೆ, ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (APSRTC)ದ ಅಧಿಕಾರಿಗಳು ಮತ್ತು ನೌಕರರು ಈಗ ಅಂದರೆ ರಾಜ್ಯ ಸರ್ಕಾರದ ಖಜಾನೆಯಿಂದ ವೇತನ ಪಡೆಯುತ್ತ ಒತ್ತಡ ರಹಿತವಾಗಿ ಕರ್ತವ್ಯ ನಿರ್ವಾಹಿಸುತ್ತಿದ್ದಾರೆ.

ಈ ಬಗ್ಗೆ ಬೆಂಗಳೂರು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ (ಮೆಜೆಸ್ಟಿಕ್‌) ಸ್ವತಃ APSRTC ಚಾಲಕರೊಬ್ಬರು ತಮಗೆ ಸಿಕ್ಕಿರುವ ಸೌಲಭ್ಯಗಳನ್ನು ಹಂಚಿಕೊಂಡಿದ್ದು, ಸರ್ಕಾರಿ ನೌಕರರೆಂದು ನಮ್ಮನ್ನು ಪರಿಗಣಿಸಿದ ಬಳಿಕ ನಮಗೆ ಈ ಹಿಂದೆ ಕೊಡುತ್ತಿದ್ದ ಸೌಲಭ್ಯಗಳ ಜತೆಗೆ ಇನ್ನಷ್ಟು ಸೇರಿಕೊಂಡಿವೆ. ಹೀಗಾಗಿ ನಾವು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದೇವೆ. ಈಗ ಉಸಿರುಗಟ್ಟಿದ ವಾತಾವರವಿಲ್ಲ ಎಂದು ಮುಕ್ತವಾಗಿ ಹೇಳಿದ್ದಾರೆ.

8ಗಂಟೆ ಕೆಲಸದ ಸಮಯವಿದ್ದು, ಈ ಸಮಯ ಮೀರಿದರೆ ನಮಗೆ ಒಟಿ ಕೊಡುತ್ತಾರೆ. ಜತೆಗೆ ನಮಗೆ ಒಬ್ಬ ಕ್ಲೀನರನ್ನು ಕೂಡ ಕೊಟ್ಟಿದ್ದಾರೆ. ಬಸ್‌ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದು ಇಲ್ಲಿ ಹಾಲ್ಟಾಗಿ ಮತ್ತೆ ಹೊರಡಬೇಕಾದಾಗ ಪ್ರಯಾಣಿಕರು ಹತ್ತಿ ಇಳಿಯುವಾಗ ಬರುವ ಧೂಳು ಕಸವನ್ನು ಸ್ವಚ್ಚಗೊಳಿಸಲು ಮತ್ತಿತರ ಕೆಲಸ ಮಾಡುವುದಕ್ಕೆ ಒಬ್ಬರನ್ನು ಕೊಟ್ಟಿದ್ದಾರೆ.

ಇನ್ನು ನಾವು ಕುಟುಂಬ ಸಮೇತ ಪ್ರವಾಸ ಮಾಡುವುದಕ್ಕೆ ವರ್ಷದಲ್ಲಿ ಮೂರು ಬಾರಿ ಅಂದರೆ ಒಟ್ಟು 5 ತಿಂಗಳವರೆಗೆ ಫ್ಯಾಮಿಲಿ ಪಾಸ್‌ ಕೊಡುತ್ತಿದ್ದಾರೆ. ಜತೆಗೆ ಸರ್ಕಾರದ ಖಂಜಾನೆಯಿಂದ ವೇತನ ಬರುತ್ತಿದೆ. ಎಲ್ಲವನ್ನು ಸರ್ಕಾರವೇ ನೋಡಿಕೊಳ್ಳುತ್ತಿದೆ. ಹೀಗಾಗಿ ನಾವು ನಿಕಟಪೂರ್ವ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ಅಭಾರಿಯಾಗಿದ್ದೇವೆ. ಅವರೇ ನಮ್ಮ ಪಾಲಿನ ದೇವರು ಎಂದು ಸಂತಸದಿಂದ ಹೇಳಿದ್ದಾರೆ.

ನಮಗೆ ಈ ಹಿಂದೆ ವೇತನ ತುಂಬ ಕಡಿಮೆ ಇತ್ತು. ನಾವು ಸರ್ಕಾರಿ ನೌಕರರೆಂದು ಘೋಷಣೆ ಆದ ಬಳಿಕ 7ಸಾವಿರ ರೂ.ಗಳಿಂ 25 ಸಾವಿರ ರೂ.ಗಳವರೆಗೂ ವೇತನ ಹೆಚ್ಚಳವಾಗಿದೆ. ಈಗ ಯಾವುದೇ ತೊಂದರೆ ಇಲ್ಲ. ರಜೆ ಪಡೆಯುವುದಕ್ಕೂ ಸಮಸ್ಯೆ ಆಗುತ್ತಿಲ್ಲ. ಜತೆಗೆ ನೌಕರರಲ್ಲಿ ಒಗ್ಗಟ್ಟು ಮೂಡಿದೆ ಎಂದು ಹೇಳಿದ್ದಾರೆ.

ಇನ್ನು ನಾವು ಸರ್ಕಾರಿ ನೌಕರರು ಎಂದು ಪರಿಣಿಸಿದ ಬಳಿಕ ನಮಗೆ ಸಮಸ್ಯೆಗಳೆ ಹೆಚ್ಚಾಗಿವೆ ಎಂಬುವುದೆಲ್ಲ ಬರಿ ಸುಳ್ಳು. ಜತೆಗೆ ಸೌಲಭ್ಯಗಳನ್ನು ಮೊಟಕುಗೊಳಿಸಿದ್ದಾರೆ ಎಂಬುವುದು ಸತ್ಯಕ್ಕೆ ದೂರವಾದದ್ದು ಎಂದು ಕೂಡ ಹೇಳಿದ್ದಾರೆ.

ಕರ್ನಾಟಕದಲ್ಲಿ ಸಾರಿಗೆ ನೌಕರರ ಪರ ಇರುವ ಕೆಲ ಕಾರ್ಮಿಕ ಸಂಘಟನೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಈ ರೀತಿ ನೌಕರರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿವೆ. ಅದಕ್ಕೆ ಯಾರು ಒಳಗಾಗಬಾರದು ಎಂದು ರಾಜ್ಯದ ಚಾಲನಾ ಸಿಬ್ಬಂದಿಗಳು ಮನವಿ ಮಾಡಿದ್ದಾರೆ. ಅಲ್ಲದೆ ಈ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಹೋರಾಟದಿಂದ ವಜಾ, ಅಮಾನತು, ವರ್ಗಾವಣೆ ಜತೆಗೆ ಪೊಲೀಸ್‌ ಕೇಸ್‌ ದಾಖಲಿಸಿಕೊಂಡು ನರಳುವುದು ಬೇಡ. ಅದಕ್ಕೆ ಪೂರ್ಣವಿರಾಮ ಬೀಳಬೇಕು. ಆ ನಿಟ್ಟಿನಲ್ಲಿ ನೌಕರರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ