ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ಅಧಿಕಾರಿಗಳು ಮತ್ತು ನೌಕರರ ಅಕ್ಟೋಬರ್-2024ರ ವೇತನವನ್ನು ಅ.30ರಂದೇ ಪಾವತಿಸಬೇಕು ಎಂದು ಸಂಸ್ಥೆಯ ನಿರ್ದೇಶಕರು (ಸಿಬ್ಬಂದಿ & ಜಾಗೃತ) ಲೆಕ್ಕಪತ್ರ ಶಾಖೆಗೆ ಸೂಚನೆ ನೀಡಿದ್ದಾರೆ.
ಇದೇ ಅ.22ರಂದು ಸೂಕ್ತಾಧಿಕಾರಿಗಳು ಹೊರಡಿಸಿರುವ ಆದೇಶ ಸಂಸ್ಥೆಯ ನಿರ್ದೇಶಕರು (ಸಿಬ್ಬಂದಿ & ಜಾಗೃತ) ಈ ಸೂಚನೆ ನೀಡಿದ್ದಾರೆ. ಸಂಸ್ಥೆಯ ಎಲ್ಲ ಅಧಿಕಾರಿ/ ನೌಕರರ ವೇತನವನ್ನು ಪ್ರತಿ ತಿಂಗಳು 1ನೇ ದಿನಾಂಕದಂದು ಪಾವತಿಸಲಾಗುತ್ತಿತ್ತು.
ಆದರೆ, ಈ ಬಾರಿ ದೀಪಾವಳಿ ಹಬ್ಬ ಬಂದಿರುವುದರ ಜತೆಗೆ ಸಾಲುಸಾಲು ರಜೆಗಳು ಇರುವುದರಿಂದ ನವೆಂಬರ್ 1ರ ಬದಲಾಗಿ ಅಕ್ಟೋಬರ್-2024ರ ವೇತನವನ್ನು ಅ.30ರಂದೇ ಪಾವತಿಸಬೇಕು ಎಂದು ಸೂಚಿಸಿದ್ದಾರೆ.
ಹೌದು! 31.10.2024 ರಿಂದ 03.11.2024 ರವರೆಗೆ ದೀಪಾವಳಿ, ಕನ್ನಡ ರಾಜ್ಯೋತ್ಸವ ಹಾಗೂ ಭಾನುವಾರದ ರಜೆ ಸೇರಿ ಒಟ್ಟು 04 ದಿನಗಳವರೆಗೆ ಬ್ಯಾಂಕುಗಳು ರಜೆ ಇರುವುದರಿಂದ ಹಾಗೂ ಹಬ್ಬದ ಪ್ರಯುಕ್ತ ಸೂಕ್ತಾಧಿಕಾರಿಗಳ ಆದೇಶದಂತೆ ನಿಗಮದ ಎಲ್ಲ ಅಧಿಕಾರಿ/ನೌಕರರಿಗೆ ಅಕ್ಟೋಬರ್- 2024 ರ ಮಾಹೆಯ ವೇತನವನ್ನು 30.10.2024 ರಂದು ನೌಕರರ ಬ್ಯಾಂಕ್ ಖಾತೆಗೆ ಜಮೆಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಇನ್ನು ಈಗಾಗಲೇ ಕೆಕೆಆರ್ಟಿಸಿ ಎಂಡಿ ಅವರು ಕೂಡ ಇದೇ ಅ.29ರಂದೇ ನಿಗಮದ ಎಲ್ಲ ನೌಕರರಿಗೂ ವೇತನ ಪಾವತಿಸುವ ಸಿಂಬಂಧ ಆದೇಶಹೊರಿಡಿಸಿದ್ದಾರೆ. ಅರದಂತೆ NWKRTC ನಿಗಮ ಕೂಡ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ. ಆದರೆ ಈವರೆಗೂ ಬಿಎಂಟಿಸಿಯಿಂದ ಯಾವುದೇ ಆದೇಶವಾಗಲಿ ಅಥವಾ ಸೂಚನೆಯಾಗಲಿ ಬಂದಿಲ್ಲ ಎನ್ನಲಾಗುತ್ತಿದೆ.