CrimeNEWSನಮ್ಮಜಿಲ್ಲೆ

BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ – ಸಂಸ್ಥೆ ಬಸ್‌ಗಳ ಕಾರ್ಯಾಚರಣೆ 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿ ಮೇಲೆ ನಿನ್ನೆ ಕಿಡಿಗೇಡಿಗಳು ಹಲ್ಲೆ ಮಾಡಿರುವುದನ್ನು ಖಂಡಿಸಿ ಬಿಎಂಟಿಸಿ 30ನೇ ಘಟಕದಲ್ಲಿ ಚಾಲಕರು ಹಲ್ಲೆಕೋರರ ಬಂಧಿಸುವಂತೆ ಪಟ್ಟುಹಿಡಿದು ಬಸ್‌ಗಳನ್ನು ಮಾರ್ಗಾಚಣೆ ಮಾಡಲು ನಿರಾಕರಿಸಿದ್ದರಿಂದ ಸಂಸ್ಥೆಯ ಡಿಸೇಲ್‌ ಬಸ್‌ಗಳ ಕಾರ್ಯಾಚರಣೆಗೊಳಿಸಲಾಯಿತು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಂದು (ಅ.27) ಮಧ್ಯಾಹ್ನ ಕಾರ್ಯಾಚರಣೆಗೆ ಇಳಿಯಬೇಕಿದ್ದ ರಾತ್ರಿ ಪಾಳಿಯದ ( Night halt) 20 ಹೆಚ್ಚು 290 ರೂಟ್‌ನ ಬಸ್‌ಗಳನ್ನು ತೆಗೆಯದೆ ಚಾಲಕರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಎಲೆಕ್ಟ್ರಿಕ್‌ ಬಸ್‌ಗಳ ಗುತ್ತಿಗೆ ಪಡೆದ ಸಂಸ್ಥೆಯ ಅಧಿಕಾರಿಗಳು ಹಾಗೂ ಬಿಎಂಟಿಸಿಯ ಅಧಿಕಾರಿಗಳು ಪ್ರತಿಭಟನೆ ನಿರತರ ಮನವೊಲಿಸಲು ಪ್ರಯತ್ನಿಸಿದರು.

ಆದರೆ ಈ ವೇಳೆ ಕೆಲ ಚಾಲಕರು ಒಪ್ಪಿಕೊಂಡು ಸಂಜೆ 4ಗಂಟೆ ಬಳಿಕ ಡ್ಯೂಟಿಗೆ ಮರಳಿದರು. ಆದರೆ ಇನ್ನು ಕೆಲ ಚಾಲಕರು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಂಸ್ಥೆಯ ಬೇರೆ ಬೇರೆ ಡಿಪೋಗಳಿಂದ ಡೀಸೆಲ್‌ ಬಸ್‌ಗಳನ್ನು ಅಂದರೆ ಸಂಸ್ಥೆಯ ಬಸ್‌ಗಳು ಮತ್ತು ಚಾಲಕರನ್ನು ಕರೆಸಿಕೊಂಡು 30ನೇ ಡಿಪೋ ನಿರ್ವಾಹಕರನ್ನು ಡ್ಯೂಟಿಗೆ ಹತ್ತಿಸಿದರು.

ಹೀಗಾಗಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಬಸ್‌ಗಳು ಕಾರ್ಯಾಚರಣೆ ಮಾಡದೆ ಡಿಪೋನಲ್ಲೇ ನಿಂತಿವೆ. ಆದರೆ, ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಬಿಎಂಟಿಸಿ ಅಧಿಕಾರಿಗಳು ಬೇರೆ ಡಿಪೋನ ತಮ್ಮ ಬಸ್‌ಗಳು ಮತ್ತು ಚಾಲಕರನ್ನು ಕರೆಸಿಕೊಂಡರು ಈ ವೇಳೆ 30ನೇ ಡಿಪೋ ನಿರ್ವಾಹಕರನ್ನು ಆ ಬಸ್‌ಗಳಲ್ಲಿ ಡ್ಯೂಟಿ ಮಾಡುವುದಕ್ಕೆ ಹತ್ತಿಸಿದರು.

ಇದರಿಂದ ಇಂದು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಂತಾಗಿದೆ. ಆದರೆ ಮತ್ತೆ ನಾಳೆ ಅಂದರೆ ಅ.28ರಂದು ಮತ್ತೆ ಚಾಲಕರು ಡ್ಯೂಟಿ ಮಾಡುವುದಕ್ಕೆ ಹಿಂದೇಟು ಹಾಕಿದರೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಹೆಸರೇಳಲಿಚ್ಛಿಸದ ನೌಕರರೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.

ಪ್ರತಿಭಟನಾ ನಿರತ ಚಾಲಕರು: 290ನೇ ರೂಟ್‌ ನಮಗೆ ಬೇಡ ಬೇರೆ ರೂಟ್‌ಕೊಟ್ಟರೆ ಡ್ಯೂಟಿ ಮಾಡುತ್ತೇವೆ, ಇಲ್ಲದಿದ್ದರೆ ನಾವು ಕೆಲಸ ಬಿಟ್ಟು ಹೋಗುತ್ತೇವೆ. ಅಲ್ಲದೆ ಇದೇ ರೀತಿ ನಮ್ಮ ಮೇಲೆ ಹಲ್ಲೆಯಾಗುತ್ತಿದ್ದರೆ ನಮ್ಮ ಮತ್ತು ನಮ್ಮ ಕುಟುಂಬದವರನ್ನು ನೋಡಿಕೊಳ್ಳುವವರು ಯಾರು?

ನಾವು ಮಾಡುತ್ತಿರುವುದು ಸರ್ವಾಜನಿಕರ ಸೇವೆ. ಆದರೆ, ನಮ್ಮ ಮೇಲೆಯೇ ಏಕಾಏಕಿ ಯಾರೋ ಬಂದು ಹಲ್ಲೆ ಮಾಡಿ ಪರಾರಿಯಾಗುತ್ತಾರೆ ಎಂದರೆ ಅವರಿಗೆ ಕಾನೂನಿನ ಭಯವಿಲ್ಲ ಎಂದಾಗುತ್ತದೆ. ಅಲ್ಲದೆ ನಮ್ಮ ಸಂಸ್ಥೆಯಲ್ಲಿ ಹಲ್ಲೆ ಕೋರರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದಕ್ಕೆ ಕಿಡಿಗೇಡಿಗಳು ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಅಪರಿಚಿತರಿಂದ ಹಲ್ಲೆಗೊಳಗಾಗಿ ನಮ್ಮ ಜೀವ ಹೋದರೆ ನಮ್ಮ ಕುಟುಂಬವನ್ನು ನೋಡಿಕೊಳ್ಳುವವರು ಯಾರು? ಒಂದು ವೇಳೆ ಹಲ್ಲೆಯಿಂದ ದೈಹಿಕವಾಕವಾಗಿ ನಾವು ಊನಗೊಂಡರೆ ನಮ್ಮನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲದಕ್ಕೂ ಸಮಂಜಸವಾದ ಉತ್ತರ ಕೊಟ್ಟರೆ ನಾವು ಬಸ್‌ಗಳನ್ನು ರೂಟ್‌ ಮೇಲೆ ತೆಗೆದುಕೊಂಡು ಹೋಗುತ್ತೇವೆ ಇಲ್ಲದಿದ್ದರೆ ನಾವು ಕೆಲಸ ಬಿಟ್ಟು ಹೋಗುತ್ತೇವೆ. ನಮಗೆ ಭದ್ರತೆ ಇಲ್ಲದ ಈ ಕೆಲಸ ಬೇಡ ಎಂದು ಪಟ್ಟುಹಿಡಿದ್ದರು.

Leave a Reply

error: Content is protected !!
LATEST
BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ  ಬಿಎಂಟಿಸಿಯ ಉತ್ತಮ ಸೇವೆಗೆ ಸಂದ Award of Excellence ರಾಷ್ಟ್ರೀಯ ಪ್ರಶಸ್ತಿ: ನೌಕರರಿಗೆ ಅರ್ಪಿಸಿದ ಎಂಡಿ ರಾಮಚಂದ್ರನ್ BMTC ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಡಿಪೋ 30ರಲ್ಲಿ ಬಸ್‌ ತೆಗೆಯದೇ ಚಾಲಕರ ಪ್ರತಿ... BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ ಇದು KSRTC ನೌಕರರ ಬೇಡಿಕೆಯೋ ಇಲ್ಲ ಜಂಟಿ ಕ್ರಿಯಾ ಸಮಿತಿ ಬೇಡಿಕೆಯೋ? NWKRTC: ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ, ಹಣವಿದ್ದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ನಿರ್ವಾಹಕಿ BMTC: 2020 ಜ.1ರಿಂದ 2023 ಮಾ.31ರ ನಡುವೆ ನಿವೃತ್ತರಾದ ನೌಕರರ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಲೆಕ್ಕಾಚಾರ ಮಾಡ... 4ನಿಗಮಗಳ ಅಧಿಕಾರಿಗಳು-ನೌಕರರಿಗೂ ಸರಿಸಮಾನ ವೇತನ ಕೊಡಿ: ಸಾರಿಗೆ ಸಚಿವರು, ಅಧಿಕಾರಿಗಳಿಗೆ KSRTC ಸಿಬ್ಬಂದಿ, ಲೆಕ್ಕ ಪತ್... ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಣೆಗೆ ಅರ್ಜಿ ಆಹ್ವಾನ ಅ.28ರಂದು ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC ‍& KSRTC ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ