KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು

- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ಪಾಷ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸನ್ಮಾನಿಸಿ, ನೌಕರರ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು ಎಂದು ಮನವಿ ಮಾಡಿದರು.
KSRTC ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿಗೆ ಮೊದಲ ಬಾರಿಗೆ ಆಗಮಿಸಿದ ಅಕ್ರಮ್ ಪಾಷ ಅವರನ್ನು ಶನಿವಾರ ಮೈಸೂರಿನಲ್ಲಿರುವ ಸಂಸ್ಥೆಯ ಅತಿಥಿ ಗೃಹದಲ್ಲಿ ಕೂಟದ ರಾಜ್ಯ ಗೌರವಾಧ್ಯಕ್ಷ ಬಿ.ಎಸ್. ಸುರೇಶ್, ಸಿ.ಡಿ.ವಿಶ್ವನಾಥ್ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಸಂಸ್ಥೆಯಲ್ಲಿ ಇಂದು ನೌಕರರು ಪಡುತ್ತಿರುವ ಪರಿಶ್ರಮ ಹಾಗೂ ಪರಿಸ್ಥಿತಿಯ ಬಗ್ಗೆ ಎಂಡಿ ಅವರ ಗಮನಕ್ಕೆ ತಂದರು. ಅಲ್ಲದೆ ಶೀಘ್ರದಲ್ಲೇ ನೌಕರರಿಗೆ ಸಿಗಬೇಕಿರುವ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಜತೆ ಮಾತನಾಡಬೇಕು ಎಂದು ಒತ್ತಾಯಿಸಿದರು.
ಈ ಸಮಯದಲ್ಲಿ ಮುಖ್ಯ ಯಾಂತ್ರಿಕ ಅಭಿಯಂತರ ಕೆ.ಎಚ್.ಶ್ರೀನಿವಾಸ್ ಹಾಗೂ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಗೌರವಾಂಬಾ, ಮೈಸೂರು ನಗರ ಸಾರಿಗೆ ವಿಭಾಗದ ವಿಭಾಗಿಯ ನಿಯಂತ್ರಣ ಅಧಿಕಾರಿ ಎಚ್.ಟಿ.ವೀರೇಶ್, ಗ್ರಾಮಾಂತರ ವಿಭಾಗದ ವಿಭಾಗಿಯ ನಿಯಂತ್ರಣ ಅಧಿಕಾರಿ ಬಿ.ಶ್ರೀನಿವಾಸ್ ಹಾಗೂ ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ವಿಭಾಗಿಯ ಭದ್ರತಾ ಹಾಗೂ ಜಾಗೃತ ಅಧಿಕಾರಿಗಳಾದ ಎನ್.ಎಸ್.ಶಿವರಾಜೇಗೌಡ, ಎಂ.ಪಿ.ರಘು ಹಾಗೂ ಎರಡು ವಿಭಾಗದ ಅಧಿಕಾರಿಗಳು ಇದೇ ಒತ್ತಾಯವನ್ನು ಮಾಡಿದರು.
ಅದರಲ್ಲಿ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಪ್ರಮುಖವಾಗಿ ನಮ್ಮ ಸಾರಿಗೆ ಸಂಸ್ಥೆಯ ನೌಕರರು ಹಗಲಿರುಳು ಎನ್ನದೆ ಶ್ರಮಪಟ್ಟು ಯಶಸ್ವಿಗೊಳಿಸಿದ್ದಾರೆ. ಜತೆಗೆ ನಮ್ಮ ನೌಕರರ ಶ್ರಮಕ್ಕೆ ಯಾವುದೇ ಸರ್ಕಾರಿ ಅರೆ ಸರ್ಕಾರಿ ನೌಕರರ ಶ್ರಮಕ್ಕೆ ಹೋಲಿಸುವ ವಿಚಾರ ಹೊಂದಿಲ್ಲ. ಅತಿ ಹೆಚ್ಚು ಶ್ರಮವಹಿಸುವ ನೌಕರರು ನಮ್ಮ ಸಾರಿಗೆ ಸಂಸ್ಥೆಯ ನೌಕರರು ಅವರಿಗೆ ಒಂದು ಶಾಶ್ವತ ಪರಿಹಾರ ಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮನವಿ ಮಾಡಿದರು.
ಇನ್ನು ಸರ್ಕಾರಿ ನೌಕರರಿಗಿಂತ ಅತಿ ಕಡಿಮೆ ಅಂದರೆ ಶೇ.40 ರಿಂದ ಶೇ.55ವರೆಗೆ ಕಡಿಮೆ ವೇತನ ತೆಗೆದುಕೊಳ್ಳುತ್ತಿದ್ದೇವೆ. ಹೀಗಾಗಿ ಮತ್ತೆ ನಾವು ನಾಲ್ಕು ವರ್ಷಕ್ಕೊಮ್ಮೆ ಬೀದಿಯಲ್ಲಿ ಕುಳಿತು ಹೋರಾಟ ಮಾಡಿ ಅತಿ ಕಡಿಮೆ ವೇತನವನ್ನು ಪಡೆಯುವ ಪದ್ಧತಿಯನ್ನು ಒಪ್ಪುವುದಿಲ್ಲ. ಇದನ್ನು ಕೊನೆಗಾಣಿಸಿ ಸಂಸ್ಥೆಯ ಅಧಿಕಾರಿಗಳು/ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಬೇಕು ಎಂದರು.
ಒಂದು ಶಾಶ್ವತ ಪರಿಹಾರ ನೀಡಿ ಹಾಗೂ ನೌಕರರ ವೇತನ ವಿಚಾರ ಡಿಎ ಮತ್ತು ಬಿಡಿಎ ಹಾಗೂ ಕಳೆದ 2020ರ ಜನವರಿ 1ರಿಂದ ಅನ್ವಯಾಗುವಂತೆ ಹೆಚ್ಚಳವಾಗಿರುವ ವೇತನದ 38 ತಿಂಗಳು ಹಿಂಬಾಕಿ ಹಾಗೂ 2024 ಆರ್ಥಿಕ ವರ್ಷದ 18 ತಿಂಗಳು ಹಿಂಬಾಕಿ ಕೊಡಬೇಕು ಹಾಗೂ ಖಾಸಗಿಕರಣ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಇನ್ನು 2021ರ ಏಪ್ರಿಲ್ 7ರಿಂದ 21ರವರೆಗೆ 14 ದಿನಗಳ ಕಾಲ ನಡೆದ ಮುಷ್ಕರದ ವೇಳೆ ಆಗಿರುವ ಶಿಸ್ತು ಪ್ರಕರಣಗಳನ್ನು ಕೈ ಬಿಟ್ಟು ಎಲ್ಲ ನೌಕರರಿಗೂ ಡ್ಯೂಟಿ ಕೊಡುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಕೊಡಬೇಕು ಎಂದು ಮನವಿ ಮಾಡಿದರು.
ನೀವು ಕಾರ್ಮಿಕ ಆಯುಕ್ತರಾಗಿ ಕಾರ್ಯನಿರ್ವಹಿಸಿ ಬಂದಿದ್ದೀರಿ ಹೀಗಾಗಿ ನಮ್ಮ ಸಾರಿಗೆ ನೌಕರರ ಬಗ್ಗೆ ಹೆಚ್ಚಿಗೆ ವಿವರಿಸಿ ಹೇಳುವ ಅಗತ್ಯವಿಲ್ಲ ಕಾರಣ ಎಲ್ಲ ನಿಮಗೆ ಗೊತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಲ್ಲಿ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿದರು. ಜತೆಗೆ ಕಾಂಗ್ರೆಸ್ ಚುನಾವಣೆ ವೇಳೆ ಕೊಟ್ಟಿರುವ ಭರವಸೆಯಂತೆ ಸರಿಸಮಾನ ವೇತನ ಕೊಡುವುದಕ್ಕೆ ತಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ವಿನಂತಿಸಿದರು.
ಇನ್ನು ವಿಶೇಷ ಎಂದರೆ ಮೈಸೂರಿನಲ್ಲೂ ಅಧಿಕಾರಿಗಳು ಸರಿ ಸಮಾನ ವೇತನ ಮಾಡುವ ಬಗ್ಗೆ ಎಂಡಿ ಅವರಲ್ಲಿ ಮನವಿ ಮಾಡಿರುವುದು ಒಂದು ಧನಾತ್ಮಕ ಬೆಳವಣಿಗೆಯಾಗಿದೆ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು – ನೌಕರರು ಬೇರೆ ಎಂಬ ಮಹಾಗೋಡೆ ಕುಸಿದುಬಿದ್ದು ನಾವೆಲ್ಲರೂ ಒಂದೆ ಸಾರಿಗೆ ಸಂಸ್ಥೆಗಳ ನೌಕರರು ಎಂಬ ಭಾವನೆ ಹೆಮ್ಮರವಾಗಿ ಬೆಳೆಯಲಿದೆ ಎಂಬ ಭರವಸೆ ಮೂಡಿರುವುದು ಸಮಸ್ತ ನಾಲ್ಕೂ ನಿಗಮಗಳ ಅಧಿಕಾರಿಗಳು- ನೌಕರರಲ್ಲಿ ಸಂತಸ ತಂದಿದೆ.
Related

You Might Also Like
KSRTC ನೌಕರರ ವೇತನ ಹೆಚ್ಚಳಕ್ಕೆ ಜೆಡಿಎಸ್ ಮುಖಂಡ, ವಕೀಲ ಶಂಕರೇಗೌಡ ಆಗ್ರಹ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ....
ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ
ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ರೂಪಾ ನಗರದಲ್ಲಿ ಸ್ಥಳೀಯ...
ಜಮೀರ್ ರಾಜೀನಾಮೆಗೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯ
ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ...
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ
ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ...
ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ್ರು
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ...
KSRTC ಬಸ್- ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ: 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಸಕಲೇಶಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯವಾಗಿರುವ ಘಟನೆ ತಾಲೂಕಿನ...
KSRTC ಅಧಿಕಾರಿಗಳು-ನೌಕರರಿಗೆ 7ನೇ ವೇತನ ಆಯೋಗ ಘೋಷಿಸಿ: ಸಂಸ್ಥೆಯ ನೂತನ ಎಂಡಿಗೆ ಅಧಿಕಾರಿಗಳ ಸಂಘ ಮನವಿ
ಬೆಂಗಳೂರು: ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ನೌಕರರಿಗೆ 7ನೇ ವೇತನ ಅಯೋಗವನ್ನು ಘೋಷಿಸುವಂತೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನು ಕೆಎಸ್ಆರ್ಟಿಸಿ ಆಫೀರ್ಸ್ ವೆಲ್ಫೇರ್...
ಜಗತ್ತಿನ ಒತ್ತಡ ಪರಿಸ್ಥಿತಿ ನಿವಾರಣೆಗೆ ಯೋಗ ಒಂದೇ ಮಾರ್ಗ: ಪ್ರಧಾನಿ ನರೇಂದ್ರ ಮೋದಿ
ನ್ಯೂಡೆಲ್ಲಿ: ಜಗತ್ತಿನ ಅನೇಕ ಕ್ಷೇತ್ರಗಳಲ್ಲಿ ಒತ್ತಡದ ಪರಿಸ್ಥಿತಿ ಎದುರಾಗಿ ಅಶಾಂತಿ ಮತ್ತು ಅಸ್ಥಿರತೆ, ಜಾಗತಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಇಂತಹ ಪ್ರಕ್ಷುಬ್ದ ಪರಿಸ್ಥಿತಿ ನಿವಾರಣೆ ಆಗಬೇಕು. ಯೋಗ ಒಂದೆ...
ಕೆ.ಆರ್.ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ: ಅಧಿಕಾರಿಗಳಿಗೆ ಸುರಳ್ಕರ್ ಸೂಚನೆ
ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದು ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ....