ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಮುಖಂಡರಿಗಷ್ಟೇ ವಿಶೇಷ ರಜೆ- ಅವರ ಮಾತು ನಂಬಿ ಮುಷ್ಕರಕ್ಕೆ ಬೆಂಬಲ ಕೊಟ್ಟವರಿಗೆ..!?

ಬೆಂಗಳೂರು: ಶೇ.15ರಷ್ಡು ಹೆಚ್ಚಳವಾಗಿರುವ ವೇತನದ 38ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಇದೇ ಆ.5ರಂದು ಸಾರಿಗೆ ಸಂಘಟನೆಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ 30 ಸಾವಿರ ನೌಕರರಿಗೆ ನೋಟಿಸ್ ಜಾರಿಮಾಡಲಾಗಿದೆ.
ಈ ನಡುವೆ ಕೋರ್ಟ್ ಕೂಡ ನೌಕರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನಿರ್ದೇಶನ ನೀಡಿದೆ. ಈ ನಡುವೆಯೂ ಮೆಮೋ ನೀಡಿ ಕಾರಣ ಕೇಳಿದ್ದು, ಅದರಲ್ಲಿ ಎಐಟಿಯುಸಿಯಲ್ಲಿ ಗುರುತಿಸಿಕೊಂಡಿರುವ ನೌಕರರು ಆ.5ರಂದು ಮುಷ್ಕರಕ್ಕೆ ಬೆಂಬ ನೀಡಿದ್ದರು.
ಆ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನೌಕರರಿಗೆ ಮಾತ್ರ ವಿಶೇಷ ರಜೆ ಮಂಜೂರು ಮಾಡಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿಪ್ಪಾಣಿ ಘಟಕ ವ್ಯವಸ್ಥಾಪಕರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ 16 ಮಂದಿ ನೌಕರರ ಹೆಸರನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜತೆಗೆ ಘಟಕದಲ್ಲಿ ಅಂದು ಹಾಜರಾಗದ ಉಳಿದ ನೌಕರರ ಹೆಸರನ್ನು ಕಳಿಸದೆ ತಾರತಮ್ಯತೆ ಎಸಗಿದ್ದಾರೆ. ಇದನ್ನು ಗಮನಿಸಿದರೆ ಇಲ್ಲಿ ಎಐಟಿಯುಸಿಯ ಮುಖಂಡರೆ ಈ ರೀತಿ ಮಾಡಿದ್ದು, ವಿಶೇಷ ರಜೆ ಕೊಡದೆ ಗೈರು ಹಾಜರಿ ತೋರಿಸಿರುವುದಕ್ಕೆ ಈ ಮುಖಂಡರೆ ಕಾರಣ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನಾವು ಕೂಡ ಅಂದು ನಮ್ಮ ವೈಯಕ್ತಿಕ ಸಮಸ್ಯೆಯಿಂದ ಡ್ಯೂಟಿಗೆ ಬರಲಿಕ್ಕೆ ಆಗಿಲ್ಲ ಹೀಗಾಗಿ ಅವರಂತೆ ನಮಗೂ ವಿಶೇಷ ರಜೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ ಬಿಎಂಟಿಸಿ ಹೊರತು ಪಡಿಸಿ ಉಳಿದ KSRTC, KKRTC ಹಾಗೂ NWKRTC ನಿಗಮಗಳಲ್ಲಿ 30 ಸಾವಿರ ನೌಕರರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅದರಲ್ಲಿ ಈ ಅಧಿಕಾರಿಗಳು ತಮಗೆ ಬೇಕಾದ ನೌಕರರಿಗೆ ವಿಶೇಷ ರಜೆ ಮಂಜೂರು ಮಾಡುತ್ತಿದ್ದು, ಉಳಿದ ನೌಕರರಿಗೆ ಗೈರುಹಾಜರಿ ತೋರಿಸಿ ಅವರ ವೇತನ ಕಡಿತ ಮಾಡುವ ಜತೆಗೆ ಕಿರುಕುಳ ನೀಡಲು ಮುಂದಾಗುತ್ತಿದ್ದಾರೆ.
ಹೀಗಾಗಿ ಇದನ್ನು ಖಂಡಿಸಿರುವ ನೌಕರರು ಅಧಿಕಾರಿಗಳಲ್ಲಿ ಈ ತಾರತಮ್ಯ ಧೋರಣೆ ಇರಬಾರದು ನಾವು ಕೂಡ ನಿಮ್ಮ ಪರವಾಗಿ ವೇತನ ಹೆಚ್ಚಳ ಸಂಬಂಧ ಹೋರಾಟಕ್ಕೆ ಕರೆ ನೀಡಿದ್ದನ್ನು ಸ್ವಾಗತಿಸಿದ್ದೆವು ಅದನ್ನು ಬಿಟ್ಟರೆ ನಮಗೆ ಯಾವುದೇ ದುರುದೇಶವಿಲ್ಲ. ಆದ್ದರಿಂದ ತಾವು ಒಂದೊಂದು ಘಟಕ ಹಾಗೂ ವಿಭಾಗಗಳಲ್ಲಿ ಒಂದು ರೀತಿ ಕ್ರಮ ತೆಗೆದುಕೊಳ್ಳದೆ ಒದೇರೀತಿಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಜತೆಗೆ ಅಧಿಕಾರಿಗಳು ಯಾವುದೇ ಹೋರಾಟಕ್ಕೆ ಬರುವುದಿಲ್ಲ, ಅವರ ಪರವಾಗಿ ನಾವು ಹೋರಾಟಕ್ಕೆ ಇಳಿದರು ಸಹಿಸಿಕೊಳ್ಳುವುದಿಲ್ಲ. ಇದು ನಮಗೆ ಬಿಸಿ ತುಪ್ಪವಾಗಿ ಈ ಹಿಂದಿನಿಂದಲೂ ಪರಿಣಮಿಸುತ್ತಿದ್ದು ಇದು ಸಂಪೂರ್ಣವಾಗಿ ನಿಲ್ಲಬೇಕು. ಇದು ನಿಲ್ಲಬೇಕಾದರೆ ಮೊದಲು ನೌಕರರಾದ ನಾವು ಎಚ್ಚೆತ್ತುಕೊಳ್ಳಬೇಕು.
ಮುಷ್ಕರಕ್ಕೆ ಕರೆ ನೀಡುವ ಸಂಘಟನೆಗಳ ಹಿಂದೆ ಹೋಗುವುದನ್ನು ನಿಲ್ಲಿಸಬೇಕು. ಜತೆಗೆ ಅಧಿಕಾರಿಗಳು ತಮ್ಮ ವೇತನವೂ ಹೆಚ್ಚಾಗಬೇಕು ಎಂದು ಪ್ರತಿಭಟನೆಗೆ ಮುಂದಾಗದ ಹೊರತು ನಾವು ಕೂಡ ಮುಂದಾಗಬಾರದು. ಏಕೆಂದರೆ ಅಧಿಕಾರಿಯೊಬ್ಬರ ವೈಯಕ್ತಿಕ ಜೀವನ ಹೇಗೋ ಹಾಗೆಯೇ ಒಬ್ಬ ನೌಕರನ ಜೀವನ ಕೂಡ. ಇಲ್ಲಿ ವೇತನ ಹೆಚ್ಚಳವಾದರೆ ಅಧಿಕಾರಿಗಳಿಗೆ ನಮಗಿಂತ ಹೆಚ್ಚು ವೇತನ ಸಿಗುತ್ತದೆ.
ಅದೇ ರೀತಿ ನಮಗೆ ಕಡಿಮೆ ವೇತನ ಸಿಗುತ್ತದೆ. ಆದರೆ ನಾವು ಹೋರಾಟ ಮಾಡಿ ಅವರಿಗೆ ವೇತನ ಹೆಚ್ಚಳ ಮಾಡಿಕೊಡುವ ಜತೆಗೆ ಇಂಥ ಶಿಕ್ಷೆಗಳನ್ನು ಅವರಿಂದಲೇ ಅನುಭವಿಸಬೇಕು ಎಂದರೆ ಮನಸ್ಸಿಗೆ ಭಾರಿ ನೋವಾಗುತ್ತದೆ. ಹೀಗಾಗಿ ಅಧಿಕಾರಿಗಳು ಬರದ ಹೋರಾಟವನ್ನು ನಾವು ಮಾಡಬಾರದು ಎಂದು ನೊಂದ ನೌಕರರು ದೂಃಖದಿಂದ ತಮಗಾಗುತ್ತಿರುವ ಅನ್ಯಾಯದ ನೋವುವನ್ನು ತೋಡಿಕೊಳ್ಳುತ್ತಿದ್ದಾರೆ.
ಇನ್ನು ಈಗಲಾದರೂ ಅಧಿಕಾರಿಗಳು ಮಾಡುತ್ತಿರುವ ತಾರತಮ್ಯವನ್ನು ಬಿಟ್ಟು ಎಲ್ಲರನ್ನೂ ಸಂಸ್ಥೆಯ ನೌಕರರಂತೆ ಕಾಣುವ ಮೂಲಕ ವಿಶೇಷ ರಜೆ ಮಂಜೂರು ಮಾಡಬೇಕು. ಜತೆಗೆ ಈಗ ಎಐಟಿಯುಸಿ ಮೇಲೆ ಬಂದಿರುವ ಆರೋಪವನ್ನು ಹೊಗಲಾಡಿಸಲು ಈ ಸಂಘಟನೆಗಳ ಮುಖಂಡರು ಕೂಡ ಅನ್ಯಾಯಕ್ಕೊಳಗಾಗುತ್ತಿರುವ ನೌಕರರ ಪರ ನಿಂತು ವಿಶೇಷ ರಜೆ ಮಂಜೂರು ಮಾಡಿಸುವುದಕ್ಕೆ ಮುಂದಾಗಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...