BMTC: ನಿರ್ವಾಹಕರ ಸೀಟ್ನಲ್ಲಿ ಕುಳಿತು ಕೊಳ್ಳಬೇಡಿ ಎಂದ ಚಾಲಕನ ಮೇಲೆ ಕಿಡಿಗೇಡಿ ಹಲ್ಲೆ- FIR ದಾಖಲು, ಬಂಧನ

ಬೆಂಗಳೂರು: ಡ್ಯೂಟಿ ಮೇಲಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರೊಬ್ಬರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಸಂಜೆ ಉಡುಪಿ ಗಾರ್ಡನ್ ಸಮೀಪ ಬಿಎಂಟಿಸಿ ಬನಶಂಕರಿ ಘಟಕ-20ರ ಬಸ್ ಚಾಲಕ ಬಿ.ಶಿವರಾಜು(38) ಎಂಬುವರ ಮೇಲೆ ಪ್ರಯಾಣಿಕ ನಾಗರಾಜು ಎಂಬಾತನೆ ಹಲ್ಲೆ ಮಾಡಿದ ಆರೋಪಿ.
ಆರೋಪಿ ನಾಗರಾಜು ಏಕಾಏಕಿ ಬಸ್ ಚಲಾಯಿಸುತ್ತಿದ್ದ ಚಾಲಕ ಶಿವರಾಜು ಹಣೆಗೆ ಹೊಡೆದಿದ್ದು ಬಳಿಕ ತುಟಿಯ ಮೇಲೆ ಹೊಡೆದಿದ್ದರಿಂದ ಮುಂದಿನ ಎರಡು ಹಲ್ಲುಗಳು ಮುರಿದು ರಕ್ತಗಾಯವಾಗಿದೆ. ಸದ್ಯ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ಅಂದರೆ ಆ.24ರಂದು ಪೊಲೀಸ್ ಠಾಣೆಗೆ ಸಂಸ್ಥೆಯ ಅಧಿಕಾರಿಗಳು ಕರೆದುಕೊಂಡು ಬಂದು ದೂರು ನೀಡಿದ್ದಾರೆ.
ಘಟನೆ ವಿವರ: ಬಿಎಂಟಿಸಿ ನಿಗಮದ ಬನಶಂಕರಿ ಘಟಕದಲ್ಲಿ ಚಾಲಕ ಶಿವರಾಜು ಕರ್ತವ್ಯ ನಿರ್ವಹಿಸುತ್ತಿದ್ದು, ಶನಿವಾರ ಸಂಜೆ 4.30ರ ಸಮಯದಲ್ಲಿ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಿಟಿಎಂ ನಡುವೆ ಮಾರ್ಗಾಚರಣೆ ಮಾಡುತ್ತಿದ್ದ ವೇಳೆ ಉಡುಪಿ ಗಾರ್ಡನ್ ಸಿಗ್ನಲ್ ಬಳಿ ಪ್ರಯಾಣಿಕ ನಾಗರಾಜು ನಿರ್ವಾಹಕರ ಸೀಟ್ನಲ್ಲಿ ಕುಳಿತುಕೊಂಡಿದ್ದಾನೆ. ಆ ವೇಳೆ ಇದು ನಿರ್ವಾಹಕರ ಸೀಟು ನೀವು ಕುಳಿತುಕೊಳ್ಳಬೇಡಿ ಹಿಂದೆ ಹೋಗಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಈ ವೇಳೆ ಚಾಲಕ ಶಿವರಾಜು ಅವರ ಮನವಿಗೆ ಸ್ಪಂದಿಸುವ ಬದಲಿಗೆ ಅವಾಚ್ಯವಾಗಿ ನಿಂದಿಸಿದ್ದು, ಅಲ್ಲದೆ ಮುಂದೆ ಇಳಿದುಹೋಗುತ್ತೇವೆ ಸುಮ್ಮನಿರು ಎಂದು ದಮ್ಕಿಹಾಕಿದ್ದಾನೆ ಆರೋಪಿ. ಆದರೂ ತಾಳ್ಮೆ ಕಳೆದುಕೊಳ್ಳದ ಚಾಲಕ ನೀವು ಹೀಗೆ ಕುಳಿತುಕೊಂಡಿದ್ದರೆ ನಮ್ಮ ಲೈನ್ ಚೆಕಿಂಗ್ ಅಧಿಕಾರಿಗಳು ಬಂದರೆ ನಮಗೆ ದಂಡಹಾಕುತ್ತಾರೆ ನಾವು ಹೇಳುತ್ತಿರುವುದಕ್ಕೆ ಸ್ಪಂದಿಸಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಅಷ್ಟಕ್ಕೆ ಕುಪಿಗೊಂಡ ಆರೋಪಿ ನಾಗರಾಜು ಅವಾಚ್ಯ ಶಬ್ದಗಳಿಂದ ಬೈದು, ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಣೆಯಲ್ಲಿ ರಕ್ತಬಂದಿದೆ, ಅಷ್ಟಕ್ಕೂ ಬಿಡದೆ ಚಾಲಕನ ಮೇಲೆ ಮತ್ತೆ ಹಲ್ಲೆ ಮಾಡಿದ್ದರಿಂದ ಹಲ್ಲುಗಳು ಮುರಿದಿವೆ. ಈ ವೇಳೆ ಟಿಕೆಟ್ ವಿತರಿಸುತ್ತಿದ್ದ ನಿರ್ವಾಹಕ ಆಕಾಶ್ ಮತ್ತು ಪ್ರಯಾಣಿಕರು ತಡೆದಿದ್ದಾರೆ.
ಅಷ್ಟರಲ್ಲಿ ಹಣೆ ಮತ್ತು ತುಟಿಯ ಮೇಲೆ ಹಲ್ಲೆ ಮಾಡಿದ್ದರಿಂದ ರಕ್ತಸ್ರಾವವಾಗಿದ್ದು, ಕೂಡಲೇ ಚಾಲಕ ಶಿವರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆ.24ರಂದು ಪೊಲೀಸ್ ಠಾಣೆಗೆ ಸಂಸ್ಥೆಯ ಅಧಿಕಾರಿಗಳ ಜತೆ ಬಂದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹೊಡೆದು ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿರುವ ನಾಗರಾಜನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಚಾಲಕ ಶಿವರಾಜು ದೂರು ನೀಡಿದ್ದಾರೆ.
ಚಾಲಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Related

You Might Also Like
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಹಿಂದೂ ಸಂಪ್ರದಾಯದಂತೆ ಬಾನು ಮುಷ್ತಾಕ್ಗೆ ಬಾಗಿನ ನೀಡಿದ ನಟಿ ಶಶಿಕಲಾ
ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2025ರ ಉದ್ಘಾಟನೆಗೆ ಸಾಹಿತಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ನಟಿ ಶಶಿಕಲಾ ಅವರಿಗೆ ಹರಿಶಿಣ, ಕುಂಕುಮ, ಸೀರೆ,...
ಬೀದಿ ನಾಯಿ ಹಾವಳಿ ತಡೆಗೆ ಮುಂಜಾಗ್ರತಾ ಕ್ರಮ : ಜಿಲ್ಲಾಧಿಕಾರಿ ಬಸವರಾಜು
ಬೆಂಗಳೂರು ಗ್ರಾಮಾಂತರ: ಬೀದಿ ನಾಯಿ ಹಾವಳಿಯಿಂದ ಆಗುವ ಅನಾಹುತವನ್ನು ತಪ್ಪಿಸಲು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು...
ಬ್ಯಾಟರಿ ಚಾಲಿತ ವ್ಹೀಲ್ ಚೇರ್ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ
ಬೆಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಜಿಲ್ಲಾ ಪಂಚಾಯಿತಿಯ ಅನಿರ್ಬಂಧೀತ ಅನುದಾನದಲ್ಲಿ ವಿಕಲಚೇತನರಿಗೆ ಬ್ಯಾಟರಿ ಚಾಲಿತ...
ಸಾರಿಗೆ ನೌಕರರಿಗೆ ವೇತನ ಆಯೋಗದ ಶಿಫಾರಸು: ಕೊಟ್ಟ ಭರವಸೆ ಉಳಿಸಿಕೊಳ್ಳುತ್ತ ಸರ್ಕಾರ !
ಬೆಂಗಳೂರು: ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾಗಿರುವ ಸಾರಿಗೆ ನೌಕರರಿಗೂ ವೇತನ ಆಯೋಗದ ಶಿಫಾರಸು ಅಳವಡಿಸಿ ಎಂಬ ನೌಕರರ ಕೂಗಿಗೆ ಸರ್ಕಾರ ಸ್ಪಂದಿಸಲಿದೆಯೇ? ಹೌದು! ನಮಗೂ ಸಮಾನ ಕೆಲಸಕ್ಕೆ...
ಬೈಕ್ನಿಂದ ಬಿದ್ದ ಬಾಲಕನ ಮೇಲೆ ಹರಿದ ಬಿಎಂಟಿಸಿ ಬಸ್: ಬಾಲಕ ಸ್ಥಳದಲ್ಲೇ ಸಾವು
ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ...
KSRTC: ಘಟಕಕ್ಕೆ ಬಂದರೂ ಡ್ಯೂಟಿ ಸಿಗದೆ ಹೋದರೆ ಕೆಲಸದ ಸಮಯ ಡಿಪೋದಲ್ಲೇ ಇದ್ದರೆ ಹಾಜರಾತಿ: ಮಾಹಿತಿ ನೀಡಿದ ಡಿಸಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗಳು ಘಟಕಕ್ಕೆ ಹಾಜರಾಗಿ ಅವರಿಗೆ ಡ್ಯೂಟಿ ಸಿಗದೆ ಹೋದರೆ ಅವರು, ಡಿಪೋದಲ್ಲೇ ಕೆಲಸದ ಸಮಯದಲ್ಲಿ ಇದ್ದರೆ...
ಪ್ಲಾಸ್ಟರ್ ಆಫ್ ಪ್ಯಾರಿಸ್ ಬಿಡಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ: ರಾಜ್ಯ ಮಾಲಿನ್ಯ ಮಂಡಳಿ
ಬೆಂಗಳೂರು: ಇದೇ ಆಗಸ್ಟ್ 26 ಮತ್ತು 27 ರಂದು ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಆಚರಣೆ ಮಾಡುವ ಸಲುವಾಗಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ)...
BMTC ಚಾಲನಾ ಸಿಬ್ಬಂದಿಗಳ ವಿರುದ್ಧ ವಜಾ, ಅಮಾನತು ಕ್ರಮ- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ!
ಎಲ್ಲ ಬಸ್ ಅಪಘಾತಗಳಿಗೂ ಚಾಲಕ-ನಿರ್ವಾಹಕರೇ ಹೊಣೆಯಲ್ಲ..!? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳಲ್ಲಾಗುವ ಎಲ್ಲ ಅಪಘಾತಗಳಿಗೂ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರನ್ನೇ ಹೊಣೆ...
BMTC: ಮೊಬೈಲಲ್ಲಿ ಮಾತನಾಡುತ್ತ ಬಸ್ ಓಡಿಸಿದರೆ 15 ದಿನ ಅಮಾನತು- ಎಚ್ಚರಿಕೆ
ಬೆಂಗಳೂರು: ಬಿಎಂಟಿಸಿ ಬಸ್ಗಳಿಂದ ಅಪಘಾತ ಹೆಚ್ಚುತ್ತಿರುವುದನ್ನು ತಡೆಯಲು ಸಂಸ್ಥೆಯ ಚಾಲಕರಿಗೆ ವಲಯವಾರು ವಾರದಲ್ಲಿ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಶಾಂತಿನಗರದಲ್ಲಿರುವ...