CRIMENEWSನಮ್ಮಜಿಲ್ಲೆ

KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್ ಆಗುತ್ತಿದ್ದು, ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಪ್ರಕರಣದ ವಿಡಿಯೋ ಚಿತ್ರೀಕರಣ ಆಗಿಲ್ಲ ಎಂದು ಸುಳ್ಳು ಹೇಳಿದ್ದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಲು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ ಕುಮಾರ್‌ ಮುಂದಾಗಿದ್ದಾರೆ.

ಹಾಸನ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿಯಾದ ದೀಪಕ್‌ ಕುಮಾರ್‌ ಅವರು ಈ ಪ್ರಕರಣದ ಬಗ್ಗೆ ಸತ್ಯಾಸತ್ಯತೆಗಳನ್ನು ತಿಳಿಯಲು ನಿಯಮ 22ರ ಅನ್ವಯ ತನಿಖಾ ವಿಭಾಗದ ಸಂಚಾರ ನಿರೀಕ್ಷಕರಾದ ರಾಜಣ್ಣ, ಹಾಗೂ ಎಚ್.ಎಚ್. ಮಲ್ಲೇಶ್ ಅವರಿಗೆ ಆರೋಪ ಪತ್ರ ಜಾರಿ ಮಾಡಿದ್ದಾರೆ.

13-04-2023 ರಂದು ವಿಭಾಗೀಯ ತನಿಖಾದಳದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಂಜೆ ಸುಮಾರು 4.09ರಲ್ಲಿ ಬೆಂಗಳೂರು ಕೇಂದ್ರೀಯ ವಿಭಾಗದ ಆರನೇ ಘಟಕದ ವಾಹನ ಸಂಖ್ಯೆ ಕೆಎ57 ಎಫ್-2736 ಮಾರ್ಗ ಸಂಖ್ಯೆ 96ಎಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯದೇವ ಎಂ. ಚಾಲಕ-ಕಂ-ನಿರ್ವಾಹಕ ಮತ್ತು ಸಿದ್ದಗಂಗಯ್ಯ, ಚಾಲಕ  ಅವರು ಮಟ್ಟನವಿಲೆ ಹತ್ತಿರ ಸರ್ವಿಸ್ ರಸ್ತೆ ಮೂಲಕ ಕಾರ್ಯಾಚರಣೆ ಮಾಡದೆ ಬೈಪಾಸ್ ರಸ್ತೆ ಮೂಲಕ ಕಾರ್ಯಾಚರಣೆ ಮಾಡಿರುವ ಸಂಬಂಧ ಕೆಂಪು ಗುರುತಿನ ಪ್ರಕರಣ ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೇಹಕ್ಕೆ ಧರಿಸುವ ಕ್ಯಾಮರಾದಲ್ಲಿ ಚಿತ್ರೀಕರಣ ಮಾಡಿಲ್ಲ.

ಪ್ರಕರಣದ ಚಿತ್ರೀಕರಣ ಮಾಡದೆ ಇರುವ ಬಗ್ಗೆ ಸ್ಪಷ್ಟಿಕರಣ ನೀಡಲು ಸೂಚಿಸಿದಾಗ ಸತ್ಯ ಮರೆಮಾಚಲು ಕ್ಯಾಮೆರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್ ಆಗುತ್ತಿದ್ದು, ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಈ ಪ್ರಕರಣದ ವಿಡಿಯೋ ಚಿತ್ರೀಕರಣ ಆಗಿಲ್ಲ ಎಂದು ತಿಳಿಸಿದ್ದೀರಿ.

ಆದರೆ ಕ್ಯಾಮೆರಾದ ಚಿತ್ರೀಕರಣದ ತುಣುಕುಗಳನ್ನು ಪರಿಶೀಲಿಸಿದಾಗ ಆ ದಿನದಂದು ಯಾವುದೇ ಚಿತ್ರೀಕರಣ ದಾಖಲಾಗದೆ ಇರುವುದು ಕಂಡುಬಂದಿದೆ ಸುತ್ತೋಲೆ ಸಂಖ್ಯೆ-1591 ದಿನಾಂಕ-03-02-2021ರ ನಿರ್ದೇಶನಗಳನ್ನು ಉಲ್ಲಂಘಿಸಿ, ಪ್ರಕರಣದ ಚಿತ್ರೀಕರಣ ಮಾಡದೆ ಇರುವುದರಿಂದ ಜಯದೇವ ಅವರಿಗೆ ಕರ್ನಾಟಕ ಮಾಹಿತಿ ಆಯೋಗ ಪ್ರಕರಣದ ಚಿತ್ರೀಕರಣವನ್ನು ನೀಡುವಂತೆ ಆದೇಶಿಸಿದ್ದು ಮಾಹಿತಿ ನೀಡಲು ಕಷ್ಟಕರವಾಗಲು ನೀವು ಕಾರಣರಾಗಿದ್ದೀರಿ.

ಈ ಮೂಲಕ ಜವಾಬ್ದಾರಿಯುತ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳಾದ ನೀವು ಕರ್ತವ್ಯ ನಿರ್ಲಕ್ಷ್ಯತನ ತೋರಿ ಕರ್ತವ್ಯಲೋಪವೆಸಗಿರುತ್ತೀರಿ.

Advertisement

ಅಲ್ಲದೆ ವಿಭಾಗೀಯ ಸಂಚಲನಾಧಿಕಾರಿಗಳನ್ನು ಸಾಕ್ಷಿಯಾಗಿರಿಸಿದ್ದು, ಕೆಲ ದಾಖಲೆಗಳನ್ನು ಹಾಕ್ಕಿದ್ದೀರಿ ಆದರೆ ಇದೆಷ್ಟೇ ಅಲ್ಲದೆ ಅಗತ್ಯವೆಂದು ಕಂಡು ಬರುವ ಹೆಚ್ಚುವರಿ ಸಾಕ್ಷಿಗಳನ್ನು ಪರೀಕ್ಷಿಸುವ ಹಕ್ಕನ್ನು ಸಹಾ ವಿಚಾರಣಾ ಪ್ರಾಧಿಕಾರವು ಹೊಂದಿದೆ. ಹೀಗಾಗಿ ಈ ಆರೋಪ ಪತ್ರ ತಲುಪಿದ ಹತ್ತು ದಿನಗಳಲ್ಲಿ ತನ್ನ ರಕ್ಷಣಾ ಲಿಖಿತ ಹೇಳಿಕೆಗಳನ್ನು ಹಾಜರು ಪಡಿಸಬೇಕು ಎಂದು ಡಿಸಿ ಆದೇಶಿಸಿದ್ದಾರೆ.

ಈ ಆರೋಪಗಳಿಗೆ ನಿಮ್ಮ ಸಮಜಾಯಿಷಿಯು ನಿಗದಿತ ಸಮಯದಲ್ಲಿ ತಲುಪದೇ ಹೋದಲ್ಲಿ ಅವುಗಳಿಗೆ ಯಾವುದೇ ಸಮಜಾಯಿಷಿಯನ್ನು ನೀಡಲು ಇರುವುದಿಲ್ಲವೆಂದು ಭಾವಿಸಿ ಸಂಸ್ಥೆ ಸೇವಾ ನಿಯಮಾವಳಿಗಳ ಮೇರೆಗೆ ಏಕಪಕ್ಷೀಯವಾಗಿ ನಿರ್ಣಯಿಸಲಾಗುವುದು. ಆರೋಪ ಪತ್ರವನ್ನು ದ್ವಿಪ್ರತಿಯಲ್ಲಿ ಕಳುಹಿಸಲಾಗಿದ್ದು, ಮೂಲ ಪ್ರತಿಯನ್ನು ದಾಖಲೆಗೆ ಇರಿಸಿಕೊಂಡು ನಕಲು ಪ್ರತಿಯನ್ನು ತಮ್ಮ ಸಹಿಯೊಂದಿಗೆ ಹಿಂದಿರುಗಿಸಬೇಕು ಎಂದು ತಿಳಿಸಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!