NEWSನಮ್ಮರಾಜ್ಯಮೈಸೂರು

7ತಿಂಗಳಾದರೂ ವೇತನ ಸೌಲಭ್ಯ ಪಡೆಯಲಾಗದ KSRTC ನಿವೃತ್ತ ಅಧಿಕಾರಿಗಳು ನೌಕರರ ನಿಯೋಗದಿಂದ ಶೀಘ್ರದಲ್ಲೇ ಸಿಎಂ, ಸಾರಿಗೆ ಸಚಿವರ ಭೇಟಿ: ನಾಗಮಣಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಆಗಿರುವ 2020ರ ವೇತನ ಪರಿಷ್ಕರಣೆ ಸೌಲಭ್ಯ 2020 ಜನವರಿ 1ರಿಂದ 2023 ಮಾರ್ಚ್‌ನಿಂದೀಚೆಗೆ ನಿವೃತ್ತರಾದವರಿಗೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವರಿಗೆ ಈ ನಿವೃತ್ತ ನೌಕರರು ಮನವಿ ಸಲ್ಲಿಸಿ ನಮಗೂ ವೇತನ ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸಲಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಸಿಎಂ ಮತ್ತು ಸಾರಿಗೆ ಸಚಿವರ ಬಳಿಗೆ ನಿವೃತ್ತ ಅಧಿಕಾರಿಗಳು, ನೌಕರರಾದ ನಟರಾಜು, ದೇವರಾಜು, ರಾಮಪ್ರಸಾದ್‌ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನೊಳಗೊಂಡ ನಿಯೋಗ ಶೀಘ್ರದಲ್ಲೇ ತೆರಳಿ ಮನವಿ ಸಲ್ಲಿಸುವುದಕ್ಕೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ವಿಜಯಪಥ.ಇನ್‌ ಡಿಜಿಟಲ್‌ ಮೀಡಿಯಾದ ಮುಖ್ಯ ವರದಿಗಾರರೊಂದಿಗೆ ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಾಗಮಣಿ ಮಾಹಿತಿ ಹಂಚಿಕೊಂಡಿದ್ದಾರೆ.

ನಮ್ಮ ಸಾರಿಗೆ ನಿಗಮಗಳಲ್ಲಿ ಪ್ರತಿ 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಜಾರಿ ಮಾಡುವ ಪದ್ಧತಿ ಇದೆ. ಈ ವೇಳೆ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಜತೆ ಚರ್ಚಿಸಿ ಶೇಕಡಾವಾರು ಹೆಚ್ಚಳ ತೀರ್ಮಾನಿಸಿ ಇತರ ಸವಲತ್ತುಗಳೊಂದಿಗೆ ಕೈಗಾರಿಕಾ ಒಪ್ಪಂದವನ್ನು ಜಾರಿ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ 2016ನೇ ಸಾಲಿನಲ್ಲಿ ಅಂದಿನ ಸಿಎಂ ಆಗಿದ್ದ ಹಾಲಿ ಸಿಎಂ ಸಿದ್ದರಾಮಯ್ಯನವರೇ ಶೇ.12.50ರಷ್ಟು ಹೆಚ್ಚಿಸಿ ಆದೇಶ ನೀಡಿದ್ದರು.

ಪ್ರಸ್ತುತ ಅಂದರೆ ಜನವರಿ 1-2020ರಿಂದ ಜಾರಿಯಾಗಬೇಕಿದ್ದ ಪರಿಷ್ಕೃತ ವೇತನವು  ಕೋವಿಡ್‌ -19 ಮತ್ತಿತರ ಕಾರಣಗಳಿಂದ ವಿಳಂಬವಾಗಿದ್ದರಿಂದ ಅಂತಿಮವಾಗಿ 17-ಮಾರ್ಚ್‌2023ರಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.15ರಷ್ಟು ವೇತನ ಹೆಚ್ಚಳ ಮಾಡಿದ್ದರು. ಅದು 31 ಡಿಸೆಂಬರ್‌ 2019ರಲ್ಲಿ ನೌಕರರು ಪಡೆಯುತ್ತಿದ್ದ ವೇತನದ ಆಧಾರದ ಮೇಲೆ ಹೆಚ್ಚಳ ಮಾಡಲಾಗಿದೆ ಎಂದೂ ಕೂಡ ಆದೇಶ ಹೊರಡಿಸಿದ್ದಾರೆ.

ಅಂದರೆ ಈ ವೇತನ ಹೆಚ್ಚಳವು ಜನವರಿ 1-2020ರಿಂದ ಜಾರಿಗೆ ಬಂದಿದೆ. ಅದರಂತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಮಾರ್ಚ್‌ 2023ರಿಂದ ಪರಿಷ್ಕೃತ ವೇತನ ಜಾರಿಯಾಗಿದ್ದು ಇದರ ಸೌಲಭ್ಯವನ್ನು ಈಗಾಗಲೇ ಆ ಎಲ್ಲ ನೌಕರರು ಪಡೆಯುತ್ತಿದ್ದಾರೆ.

ಇನ್ನು ಸರ್ಕಾರದ ಈ ಆದೇಶದಂತೆ 2020ರಿಂದ 2023ರವರೆಗೆ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ನೂರಾರು ನೌಕರರು ಮತ್ತು ಅಧಿಕಾರಿಗಳು ವೇತನ ಪರಿಷ್ಕರಣೆಯ ಹಿಂಬಾಕಿ ಹಣವನ್ನು ಪಡೆಯಲು ಅರ್ಹರಿದ್ದು, ಈ ಬಗ್ಗೆ ನಾಲ್ಕೂ ನಿಗಮಗಳ ನೌಕರರಿಗಾಗಿ ರಚಿಸಲಾಗಿರುವ ಏಕ ಸದಸ್ಯ ಸಮಿತಿಯು ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರದ ಸೂಕ್ತ ಅನುದಾನದೊಂದಿಗೆ ಕಾರ್ಮಿಕ ಸಂಘಟನೆಗಳೊಂದಿಗೆ ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಯಾವ ದಿನಾಂಕದಿಂದ ಪಾವತಿಸಬೇಕೆಂದು ತೀರ್ಮಾನಿಸಲು ಒಂದು ತಿಂಗಳ ಅವಧಿಯನ್ನು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದರು.

ಆದರೆ, ಪರಿಷ್ಕೃತ ವೇತನ ಜಾರಿಯಾಗಿ ಈ ಅಕ್ಟೋಬರ್‌ ತಿಂಗಳಿಗೆ 7ತಿಂಗಳು ಕಳೆಯುತ್ತಿದ್ದರೂ ಸಹ ಪರಿಷ್ಕೃತ ವೇತನದ ಹಿಂಬಾಕಿ ಮೊತ್ತವನ್ನು ನಿವೃತ್ತ ನೌಕರರಿಗೆ ಮತ್ತು ಇತರ ಸಿಬ್ಬಂದಿಗೆ ಪಾವತಿ ಮಾಡುವ ಬಗ್ಗೆ ನಿಗಮಗಳ ಆಡಳಿತ ಮಂಡಳಿಯಾಗಲೀ ಅಥವಾ ಏಕ ಸದಸ್ಯ ಸಮಿತಿಯಾಗಲೀ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಈ ಹಿಂದೆ 2016ರಲ್ಲಿ ವೇತನ ಹೆಚ್ಚಳದ ಸಂದರ್ಭದಲ್ಲಿ ನಿಗಮದಿಂದ ಹೊರಡಿಸಿದಂತೆ ಈ ಬಾರಿಯೂ ಅಂದರೆ 2020ರಲ್ಲೂ ನಿವೃತ್ತರಿಗೆ ಹಿಂಬಾಕಿಯನ್ನು ಪಾವತಿಸಬೇಕು. ಕಾರಣ ಈವರೆಗೂ ನಿಗಮಗಳಲ್ಲಿ ಹಿಂಬಾಕಿ ಪಾವತಿಸದ ಇತಿಗಹಾಸವಿಲ್ಲ. ಆದರೆ ಕೋವಿಡ್‌ -19ಅನ್ನು ಮುನ್ನೆಲೆಗೆ ತಂದು ನಿವೃತ್ತರಾದ ನಮ್ಮಗಳ ಹೊಟ್ಟೆ ಮೇಲೆ ಹೊಡೆಯಲು ಹೊರಟಿರುವುದು ಸರಿಯಲ್ಲ ಎಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಇದೀಗ ಶಕ್ತಿ ಯೋಜನೆ ಸರ್ಕಾರದಿಂದ ಜಾರಿಯಾಗಿದ್ದು ನಿಗಮಗಳ ವಾಹನಗಳಲ್ಲಿ ಜನದಟ್ಟಣೆಯೂ ಶೇ.60ರಿಂದ 89ಕ್ಕೆ ಏರಿಕೆಯಾಗಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಂಡಿದ್ದು, ಕೋವಿಡ್‌ -19 ನೆಪವೊಡ್ಡದೇ ನೌಕರರಿಗೆ ಬರಬೇಕಾಗಿರುವ ನ್ಯಾಯಯುತವಾದ ವೇತನ ಹೆಚ್ಚಳದ ಹಿಂಬಾಕಿ, ಗ್ರಾಚ್ಯುಟಿ ಮೊತ್ತ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೂಡಲೇ ಆದೇಶ ಮಾಡುವ ಮೂಲಕ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಪ್ರಮುಖವಾಗಿ ಸಾರಿಗೆ ನಿಗಮಗಳಲ್ಲಿ ಪ್ರಸ್ತುತ ಶಕ್ತಿಯೋಜನೆಯಿಂದ ಆರ್ಥಿಕವಾಗಿ ಶಕ್ತಿ ಇದ್ದರೂ ನಿಗಮದಲ್ಲೇ ಇರುವ ಕೆಲವರು ಮುಖ್ಯಮಂತ್ರಿಗಳಿಗೆ ಮತ್ತು ಸಾರಿಗೆ ಸಚಿವರಿಗೆ ಸರಿಯಾದ ಮಾಹಿತಿ ಕೊಡದೆ ಈ ನಮಗೆ ಬರಬೇಕಿರುವ ಸೌಲಭ್ಯಗಳಿಗೆ ಪಂಗನಾಮ ಹಾಕುವ ದುರಾಲೋಚನೆಗಳನ್ನು ಮಾಡುತ್ತಿದ್ದಾರೆ ಎಂಬ ಅನುಮಾನವಿದೆ. ಹೀಗಾಗಿ ತಾವು ಈ ಬಗ್ಗೆ ಸೂಕ್ತ ಗಮನಹರಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಿಎಂ ಮತ್ತು ಸಾರಿಗೆ ಸಚಿವರಿಗೆ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಾಗುವುದು ಎಂದು ಸಾರಿಗೆಯ ನಿವೃತ್ತ ನೌಕರರಾದ ನಾಗಮಣಿ ವಿವರಿಸಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ