ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾನೂನು ವಿಭಾಗ ಇರುವುದು ಚಾಲನಾ ಸಿಬ್ಬಂದಿಗಳ ರಕ್ಷಣೆಗೆ. ಆದರೆ ಇಲ್ಲಿ ಅದರ ಬದಲಿಗೆ ಚಾಕಲರಿಗೆ ಶಿಕ್ಷೆಕೊಡಿಸುವುದಕ್ಕೆ, ಅವರ ವಿರುದ್ಧವೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಕ್ಕೆ ಇದೆ ಎಂಬ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ಭಾರಿ ನೋವಿನ ಸಂಗತಿ.
ಹೌದು! ನಡೆಯುವವರು ಎಡವಿಬೀಳದೆ ಕುಳಿತಿರುವವರು ಬೀಳುತ್ತಾರೆಯೇ ಎಂಬ ಗಾದೆಯಂತೆ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿವೆ ಎಂದರೆ ಅಲ್ಲಿ ಆಕಸ್ಮಿಕವಾಗಿ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಅಂದಮಾತ್ರಕ್ಕೆ 10-20 ವರ್ಷಗಳ ಚಾಲನಾ ಅನುಭವವಿರುವ ನೌಕರರು ತಪ್ಪು ಮಾಡಿದ್ದಾರೆ ಎಂದು ತೀರ್ಮಾನ ಮಾಡುವುದು ಸಾಧ್ಯವೇ ಇಲ್ಲ, ಅವರ ಪರ ನಿಂತು ಅವರ ರಕ್ಷಣೆ ಮಾಡಬೇಕು.
ಆದರೆ, ಅದನ್ನು ಸಾರಿಗೆ ನಿಗಮಗಳ ಕಾನೂನು ಅಧಿಕಾರಿಗಳು ಸಂಸ್ಥೆಯ ಹುಟ್ಟಿದಾಗಿನಿಂದ ಈವರೆಗೂ ಮಾಡಿಲ್ಲ, ಬದಲಿಗೆ ಅಪಘಾತವಾದ ಬಸ್ ಬಿಡಿಸಿಕೊಂಡು ನೌಕರರನ್ನು ಕಾಲ್ ಕಸಕ್ಕಿಂತ ಕೀಳಾಗಿ ನೋಡಿಕೊಂಡೆ ಬರುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಬಳಲುತ್ತಿರುವ ನೌಕರರು ಆತ್ಮಹತ್ಯೆ ಮಾರ್ಗ ಅನುಸರಿಸುತ್ತಿದ್ದಾರೆ. ಇದು ಬದಲಾಗಬೇಕಿದೆ.
ಆಕಸ್ಮಿಕವಾಗಿ ವಾಹನಗಳ ನಡುವೆ ಅಪಘಾತವಾದ ಕೂಡಲೇ ಸಂಬಂಧಪಟ್ಟ ಸಂಸ್ಥೆಯ ವಕೀಲರು ಚಾಲಕನ ಪರವಾಗಿ ಕಾನೂನು ಹೋರಾಟ ಮಾಡುವುದಕ್ಕೆ ಸಿದ್ಧರಾಗಬೇಕು. ಜತೆಗೆ ಚಾಲಕನಿಗೆ ಯಾವುದೇ ರೀತಿಯ ಶಿಕ್ಷೆ ಆಗದ ರೀತಿಯಲ್ಲಿ ಕಾನೂನು ಹೋರಾಟ ಮಾಡಬೇಕು.
ಕಾರಣ ರಸ್ತೆ ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ ಎಂದೆ ಅಪಘಾತ ವಿಮಾ ಕಂಪನಿಗಳು ಇರುವುದು ಹಾಗೂ ಚಾಲಕನಿಗೆ ಸರಿಯಾಗಿ ಚಾಲನೆ ಬರುತ್ತದೆಯೇ ಇಲ್ಲವೇ ಎಂದು ತಿಳಿದ ಬಳಿಕವೇ ಚಾಲನಾ ಪರವಾನಗಿಯನ್ನು ಆರ್ಟಿಒದಲ್ಲಿ ಕೊಡುವುದು. ಇಷ್ಟೆಲ್ಲ ಇದ್ದರೂ ಕೂಡ ತನ್ನ ಸಂಸ್ಥೆಯ ಚಾಲಕರ ಪರವಾಗಿ ಕಾನೂನು ಹೋರಾಟ ಮಾಡುವುದಿಲ್ಲ ಎಂದರೆ ಇದರ ಅರ್ಥವೇನು?
ಸಾರಿಗೆ ನಿಗಮಗಳಲ್ಲಿ ಇರುವ ಕಾನೂನು ವಿಭಾಗ ಹಾಗೂ ವಕೀಲರು ಕೇವಲ ಬಸ್ಗಳನ್ನು ಬಿಡಿಸಿಕೊಂಡು ಬರುವುದಕ್ಕೆ ಇರೋದ? ಹಾಗಾದರೆ ಸಂಸ್ಥೆಯಲ್ಲಿದ್ದುಕೊಂಡು ಸಾರ್ವಜನಿಕ ಸೇವೆ ಮಾಡುತ್ತಿರುವ ಚಾಲಕರು ಸಂಸ್ಥೆಗೆ ಏನೇನು ಅಲ್ಲವೆ? ಅಪಘಾತವಾದರೆ ಅವರು ಖಾಸಗಿ ವಕೀಲರ ಮೂಲಕ ಕಾನೂನು ಹೋರಾಟ ಮಾಡಬೇಕು ಎಂದರೆ ಇದರ ಅರ್ಥವೇನು?
ಸಂಸ್ಥೆಯಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿರುವ ಚಾಲಕರು ಅವರ ಸ್ವಂತಕ್ಕಾಗಿ ಬಸ್ಗಳನ್ನು ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದಾರೆ ಎಂದು ಸಂಸ್ಥೆಯ ವಕೀಲರು ನೌಕರರ ವಿರುದ್ಧವಾಗಿ ನಿಲ್ಲುತ್ತಿದ್ದಾರೆಯೇ? ಈ ಚಾಲಕರು ಬಸ್ ಓಡಿಸುತ್ತಿರುವುದರಿಂದಲೇ ವಕೀಲರಾಗಿರುವ ನಿಮಗೂ ಸಂಸ್ಥೆ ವೇತನ ಕೊಡುತ್ತಿದೆ ಎಂಬುದನ್ನು ತಾವು ಮರೆತಿದ್ದೀರಾ?
ಚಾಲಕರೆ ಇಲ್ಲ ಎಂದಮೇಲೆ ಸಾರಿಗೆ ಸಂಸ್ಥೆ ಎಲ್ಲಿರುತ್ತದೆ. ಸಂಸ್ಥೆಯೆ ಇಲ್ಲ ಎಂದ ಮೇಲೆ ನಿಮ್ಮ ಅವಶ್ಯಕತೆ ಯಾರಿಗೆ ಇರುತ್ತದೆ. ಇಲ್ಲಿ ಸಾರಿಗೆ ನಿಗಮಗಳು ಇವೆ ಎಂದರೆ ಅದಕ್ಕೆ ಚಾಲಕರೆ ಮೊದಲು. ಆನಂತರ ಎಂಡಿ, ಸಿಟಿಎಂ, ಡಿಸಿ, ಡಿಎಂ ಇತ್ಯಾದಿ ಹುದ್ದೆಗಳು ಬರುವುದು. ಆದರೆ ಇಲ್ಲಿ ಚಾಲನಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಬೇಕಾದ ಸಂಸ್ಥೆಯ ಕಾನೂನು ವಿಭಾಗ ಅಪಘಾತವಾದ ಕೂಡಲೇ ಚಾಲಕರನ್ನು ಶತ್ರುಗಳ ರೀತಿ ನಡೆಸಿಕೊಳ್ಳುತ್ತಿರುವುದು ಏಕೆ ಎಂಬುವದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಖಾಸಗಿ ಸಾರಿಗೆ ಕಂಪನಿಗಳ ಬಸ್ಗಳು ಅಪಘಾತವಾದರೆ ತಮ್ಮ ಚಾಲಕರ ರಕ್ಷಣೆಗೆ ವಕೀಲರನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಚಾಲಕರಿಗೆ ಶಿಕ್ಷೆ ಕೊಡಿಸುವುದಕ್ಕೆ ವಕೀಲರನ್ನು ನೇಮಕ ಮಾಡಿಕೊಂಡಿದೆ ಎಂಬ ರೀತಿ ಸಂಸ್ಥೆಯ ಕಾನೂನು ವಿಭಾಗ ನಡೆದುಕೊಳ್ಳುತ್ತಿದೆ. ಇದು ಸರಿಯೇ?
ಚಾಲಕರು ಇರುವುದರಿಂದಲೇ ಇಡಿ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರ ಕುಟುಂಬದವರಿಗೂ ಅನ್ನ ಸಿಗುತ್ತಿರುವುದು. ಅಂದಮೇಲೆ ನಿಮ್ಮ ಪಾಲಿಗೆ ಚಾಲಕರು ಅನ್ನಕೊಡುತ್ತಿರುವ ದೇವರಲ್ಲವೇ? ಆದರೆ ಅಂಥ ದೇವರುಗಳನ್ನೇ ನೀವು ಕೀಳಾಗಿ ಕಾಣುವ ಮೂಲಕ ಅವರಿಗೆ ಕೋರ್ಟ್ನಲ್ಲಿ ನ್ಯಾಯಕೊಡಿಸುವ ಬದಲು ಶಿಕ್ಷೆ ಆಗುವಂತೆ ನೋಡಿಕೊಳ್ಳುವುದಕ್ಕೇ ಹೆಚ್ಚಾಗಿ ಅವಸರ ಪಡುತ್ತೀರಿ ಎಂದರೆ ನಿಮ್ಮನ್ನು ಏನೆಂದು ಕರೆಯಬೇಕು ಹೇಳಿ?
ಇನ್ನು ಮುಂದಾದರೂ ಆಕಸ್ಮಿಕವಾಗಿ ಸಂಭವಿಸುವ ಅಪಘಾತದ ವೇಳೆ ಚಾಲಕರ ರಕ್ಷಣೆಗೆ ಸಂಸ್ಥೆಯ ಕಾನೂನು ವಿಭಾಗದ ಮುಂದಾಗಬೇಕು. ಜತೆಗೆ ಚಾಲಕರು ಯಾವುದೇ ಖಾಸಗಿ ವಕೀಲರ ಮೂಲಕ ಅಪಘಾತ ಪ್ರಕರಣವನ್ನು ಹಾಕದಂತೆ ನೋಡಿಕೊಳ್ಳಬೇಕು. ಆಗ ನೌಕರರು ಕೂಡ ಸಂಸ್ಥೆಗೆ ಇನ್ನಷ್ಟು ಪ್ರಾಮಾಣಿಕರಾಗಿ ಹಾಗೂ ನಿಷ್ಠಾವಂತರಾಗಿ ಇರುತ್ತಾರೆ.
ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟ ಎಂಡಿಗಳು ಎಚ್ಚೆತ್ತುಕೊಂಡು ಕಾನೂನು ವಿಭಾಗದ ಅಧಿಕಾರಿಗಳಿಗೆ ತಿಳಿಹೇಳಿ ನೌಕರರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು ಎಂಬುವುದು ವಿಜಯಪಥ ಮೀಡಿಯಾ ಕಳಕಳಿ.
Related

You Might Also Like
ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!
ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ...
ಆ.5ರಿಂದ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...
KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ
ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು...
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...