CrimeNEWSನಮ್ಮಜಿಲ್ಲೆ

ಕಬ್ಬು ಬೆಂಕಿಗಾಹುತಿಯಾದ ನೋವಿನಲ್ಲಿದ್ದ ರೈತನಿಂದ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು 400 ರೂ. ಪಡೆದಿದ್ದ ASI ಅಮಾನತು

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ತಾನು ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದ್ದ ನೋವಿನಲ್ಲಿದ್ದ ಬಡಪಾಯಿ ರೈತನಿಂದ ಬೀದರ್​ನ ಎಎಸ್​ಐ ಒಬ್ಬ 1000 ರೂಪಾಯಿ ಲಂಚಕ್ಕೆ ಕೈ ಚಾಚಿ ಈಗ ಅಮಾನತು ಶಿಕ್ಷಗೆ ಒಳಗಾಗಿದ್ದಾನೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಭ್ರಷ್ಟ ಈ ಪೊಲೀಸನ ಬಗ್ಗೆ ಲಂಚಾವತಾರವನ್ನು ಕಾತರಿಪಡಿಸಿಕೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಲಂಚಬಾಕ ಎಎಸ್​ಐ ಶೌರಾಜ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೀದರ್​ನಲ್ಲಿ ಅಸಹಾಯಕ ರೈತನೆದುರು ಚಿಲ್ಲರೆ ಕಾಸಿಗೆ ಈ ಪೊಲೀಸಪ್ಪ ಕೈಚಾಚಿದ್ದ. ಕಬ್ಬು ಸುಟ್ಟು ಕರಕಲಾಗಿದ್ದ ಜಮೀನಿನ ಪಂಚನಾಮೆಗೆ ಬಂದಿದ್ದ ಎಎಸ್‌ಐ ಶೌರಾಜ್, ಈ ಹೀನ ಕೃತ್ಯಕ್ಕೆ ಇಳಿದಿದ್ದ. ಜಿಲ್ಲೆಯ ಬೇಲೂರು ಗ್ರಾಮದ ರೈತನಿಂದ ಮಾನವೀಯತೆಯೇ ಇಲ್ಲದೇ ಎಎಸ್‌ಐ ಶೌರಾಜ್, ಹಣ ವಸೂಲಿ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಒಂದು ಸಾವಿರ ರೂಪಾಯಿಗೆ ರೈತನ ಬಳಿ ಬೇಡಿಕೆ ಇಟ್ಟಿದ್ದ ಹುಲಸೂರು ಠಾಣೆಯ ASI ಶೌರಾಜ್ ಕಡೆಗೂ 400 ರೂಪಾಯಿ ಪಡೆದೇ ತೀರಿದ್ರು. ಅನ್ನದಾತನ ಬಳಿ ಚಿಲ್ಲರೆ ಹಣಕ್ಕೆ ಕೈ ಚಾಚಿದ ಈತನ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು, ಆ ವರದಿ ಮಂದ ಕೆಲವೇ ಗಂಟೆಗಳಲ್ಲಿ ಎಎಸ್​ಐಯನ್ನು ಆಮಾನತು ಮಾಡಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಬರದ ಛಾಯೆ ಆವರಿಸಿಕೊಂಡು ಮೊದಲೇ ಅನ್ನದಾತರು ಸಂಕಷ್ಟದಲ್ಲಿದ್ದರೆ. ಹಾಕಿರುವ ಫಸಲು ಕೈ ಸೇರದೆ ಬಳಲಿಹೊತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಾನವೀಯತೆ ಬಿಟ್ಟು ಇಂತಹ ಪರಿಸ್ಥಿತಿಯಲ್ಲಿ ರೈತರಿಂದ ಹಣ ಪೀಕುವ ಕೆಲಸವನ್ನು ಭ್ರಷ್ಟ ಅಧಿಕಾರಿಗಳು ಮಾಡುತ್ತಿರುವುದು ಭಾರಿ ನೋವಿನ ಸಂಘತಿ. ಇನ್ನಾದರೂ ಇದನ್ನು ಬಿಟ್ಟು ನೇಗಿಲ ಯೋಗಿಯ ನೆರವಿಗೆ ಬರಬೇಕಿದೆ.

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ