BMTC: 79ರ ಬದಲು 34ಕಿಮೀ ಕಾರ್ಯಾಚರಣೆ ಮಾಡಿ ಆರ್ಥಿಕ ನಷ್ಟಮಾಡಿದ ಆರೋಪ- ಚಾಲನಾ ಸಿಬ್ಬಂದಿಗೆ ಡಿಎಂ ಮೆಮೋ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸುಮಾರು 3500 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ಕಾರಣರಾಗಿರುತ್ತೀರಿ ಎಂದು ಆರೋಪಿಸಿ ಚಾಲನಾ ಸಿಬ್ಬಂದಿ ವಿರುದ್ಧ ಘಟಕ ವ್ಯವಸ್ಥಾಪಕರು ಆರೋಪಣ ಪತ್ರ ನೀಡಿ 7ದಿನದೊಳಗೆ ಲಿಖಿತ ಹೇಳಿಕೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.
ಬಿಎಂಟಿಸಿ ಡಿಪೋ-2ರ ಚಾಲನಾ ಸಿಬ್ಬಂದಿಗಳಾದ ಕಂಡಕ್ಟರ್ ವೀರಯ್ಯ ಗುಮತಿಮಠ ಮತ್ತು ಚಾಲಕ ಬಸವರಾಜು ಎಂಬುವರಿಗೆ ಘಟಕ ವ್ಯವಸ್ಥಾಪಕ ಮೆಮೋ ಕೊಟ್ಟಿದ್ದಾರೆ.
ಪ್ರಕರಣವೇನು? ಜೂನ್ 11ರಂದು ಎರಡನೆ ಪಾಳಿಯ ಮಾರ್ಗ ಸಂ-150/04 ರಲ್ಲಿ ನಿರ್ವಾಹಕರಾಗಿ ಮತ್ತು ಚಾಲಕರಾಗಿ ಕರ್ತವ್ಯ ನಿರ್ವಹಿಸಿರುವ ನೀವು ಈ ಮಾರ್ಗದಲ್ಲಿ ಅಪರಾಧ ಮಾಡಿರುತ್ತೀರಿ.
ಅದರಲ್ಲಿ ಮೊದಲನೆಯದಾಗಿ ನಮೂನೆ-04ರ ಪ್ರಕಾರ ಮಾರ್ಗದ ಒಟ್ಟಾರೆ ಕಿಲೋ ಮೀಟರ್-79 ಕಿಮೀ ಆಗಿದ್ದು, ನೀವು ಕೇವಲ 34 ಕಿಮೀ ಮಾತ್ರ ಕಾರ್ಯಾಚರಣೆ ಮಾಡಿ ಸುಮಾರು 45 ಕಿಮೀ ರದ್ದು ಮಾಡಿದ್ದೀರಿ. ಇದರಿಂದ ಘಟಕದ ಸಾರಿಗೆ ಆದಾಯ ನಷ್ಟವಾಗಲು ಕಾರಣರಾಗಿದ್ದೀರಿ.
2) ವಿನಾ ಕಾರಣ ಪ್ರತಿ ಸುತ್ತುವಳೆಯಲ್ಲೂ 15-20 ನಿಮಿಷ ಕಾಲ ಹರಣ ಮಾಡಿರುತ್ತಿರಿ.
3) ನಮೂನೆ-4 ರ ಪ್ರಕಾರ 01:45ಕ್ಕೆ ಕೆ.ಆರ್ ಮಾರುಕಟ್ಟೆಯಿಂದ ಮಾರ್ಗಚರಣೆ ಮಾಡಬೇಕಾಗಿತ್ತು. ಆದರೆ ನೀವು 2:03 ನಿಮಿಷಕ್ಕೆ ಮಾರ್ಗಾಚರಣೆ ಮಾಡಿದ್ದು, ಸುಮಾರು 18 ನಿಮಿಷ ತಡವಾಗಿ ಆಚರಣೆ ಮಾಡಿರುತ್ತೀರಿ. ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಲಭ್ಯವಿಲ್ಲದೆ ತೊಂದರೆ ಉಂಟಾಗಲು ಕಾರಣರಾಗಿದ್ದೀರಿ.
4) ಈ ಮಾರ್ಗದ ನಿಗದಿತ ಆದಾಯವು 6000 ರೂ.ಗಳಾಗಿದ್ದು, ತಾವು ಕೇವಲ 2572 ರೂ. ಗಳನ್ನು ಸಂದಾಯ ಮಾಡಿರುತ್ತೀರಿ. ಇದರಿಂದ ಸುಮಾರು 3500 ರೂ.ಗಳಷ್ಟು ಸಂಸ್ಥೆಗೆ ಆರ್ಥಿಕ ನಷ್ಟವುಂಟಾಗಲು ಕಾರಣರಾಗಿದ್ದೀರಿ.
5) ನಮೂನೆ-4 ರ ಪ್ರಕಾರ ಮಾರ್ಗದ ಕಾರ್ಯಾಚರಣೆ ಮುಗಿಸಿಕೊಂಡು 21:10 ಗಂಟೆಗೆ ಘಟಕಕ್ಕೆ ಆಗಮಿಸಬೇಕಾಗಿತ್ತು. ಆದರೆ ನೀವು ಕಾರ್ಯಾಚರಣೆ ಮುಗಿಸಿಕೊಂಡು ರಾತ್ರಿ 08-33 ಗಂಟೆಗೆ ಘಟಕಕ್ಕೆ ಹಾಜರಾಗಿರುತ್ತೀರಿ. ಅಂದರೆ ಸುಮಾರು 37 ನಿಮಿಷ ಬೇಗ ಆಗಮಿಸಿರುತ್ತೀರಿ. ಇದರಿಂದ ಕಿಲೋ ಮೀಟರ್ ರದ್ದಾಗಿ ಸಾರಿಗೆ ಆದಾಯ ನಷ್ಟವಾಗಲು ಕಾರಣರಾಗಿದ್ದೀರಿ.
ಇನ್ನು ಹೆಚ್ಚಿನ ಜನ ಸಂದಣಿ ಅವಧಿಯಲ್ಲಿ ವಾಹನಗಳು ಲಭ್ಯವಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸಲು ಕಾರಣರಾಗಿದ್ದೀರಿ. ಇದು ನಿಮ್ಮ ಬೇಜವಾಬ್ದಾರಿತನದ ಹಾಗೂ ಕರ್ತವ್ಯ ನಿರ್ಲಕ್ಷತೆಯಿಂದ ಸಂಭವಿಸಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಲು ಹಾಗೂ ಸಂಸ್ಥೆಗೆ ಆರ್ಥಿಕ ನಷ್ಟವಾಗಲು ಕಾರಣರಾಗಿದ್ದೀರಿ.
ನಿಮ್ಮ ಮೇಲಿರುವ ಈ ಆರೋಪಗಳು ಕೇಂದ್ರ ಕಚೇರಿಯ AVLS ರಿಪೋರ್ಟ್ ವರದಿ ಮೇಲೆ ಆಧಾರವಾಗಿದೆ. ಹೀಗಾಗಿ ನೀವು, ಈ ಆರೋಪಗಳಿಗೆ ಸಂಬಂಧಿಸಿದಂತೆ, ನಿರ್ದೋಷಿ ಎಂಬುವುದರ ಬಗ್ಗೆ ಲಿಖಿತ ಹೇಳಿಕೆಯನ್ನು ಆರೋಪ ಪತ್ರ ತಲುಪಿದ 7 ದಿನಗಳೊಳಗಾಗಿ ಸಲ್ಲಿಸಬೇಕು. ತಪ್ಪಿದಲ್ಲಿ ಸಮಜಾಯಿಸಿ ಸಲ್ಲಿಸುವುದು ಏನೂ ಇಲ್ಲವೆಂದು ತೀರ್ಮಾನಿಸಲಾಗುವುದು ಮತ್ತು ನಿಮ್ಮ ಮೇಲೆ ಹೊರಿಸಲಾದ ಈ ಎಲ್ಲ ಆರೋಪಗಳು ರುಜುವಾತಾಗಿದೆ ಎಂದು ನಿರ್ಧರಿಸಿ ನಿಮ್ಮ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಘಟಕ ವ್ಯದಸ್ಥಾಪಕರು ಮೆಮೋ ನೀಡಿದ್ದಾರೆ.
ಅದು ಕೂಡ ಸಂಸ್ಥೆಯು ಅಳವಡಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ನಡಕೆ ಮತ್ತು ಶಿಸ್ತು ನಿಯಮಾವಳಿ 1971 ಹಾಗೂ ಅದರ ತಿದ್ದುಪಡಿ ಅನುಸೂಚಿಯ ನಿಯಮ 22 ರ ಅನುಸಾರವಾಗಿ ನಿಯಮ 19/2 ರ ಅನುಸಾರ ಶಿಸ್ತುಪಾಲನಾಧಿಕಾರಿಯಾಗಿ ನಾನು ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಉದ್ದೇಶಿಸಿ ಈ ಅಪರಾಧಗಳನ್ನು ಮಾಡಿರುವಿರೆಂದು ಭಾವಿಸಿ ಮೆಮೋ ಕೊಡುತ್ತಿರುವುದಾಗಿ ತಿಳಿಸಿದ್ದಾರೆ.
Related

You Might Also Like
KSRTC: ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ-ಸಾರಿಗೆ ಸಚಿವರ ನಡುವೆ ಏನೋ ಸರಿ ಇಲ್ಲ..!
ಇಂದು ನಡೆಯಬೇಕಿದ್ದ ಸಭೆ ಮಾಹಿತಿಯೇ ಇಲ್ಲದೆ ರದ್ದು ಇದಕ್ಕೆ ಸಿಎಂ ಸಾರಿಗೆ ಸಚಿವರ ನಡುವೆ ಹೊಂದಾಣಿಕೆ ಕೊರತೆ ಕಾರಣವೆ? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ...
BMTC: ಸಾಮಾನ್ಯ ಪಾಳಿಯ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳ ನಿಯೋಜನೆ ಮಾಡದಿರಲು ತೀರ್ಮಾನ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳ ಸಾಮಾನ್ಯ ಪಾಳಿಯಲ್ಲಿ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡದಿರಲು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರ (ಆ) ಅಧ್ಯಕ್ಷತೆಯಲ್ಲಿ...
ಹಾಳಾಗಿರುವ ಒಳಚರಂಡಿ ಸ್ಲ್ಯಾಬ್ ಬದಲಾಯಿಸಿ: ಅಧಿಕಾರಿಗಳಿಗೆ ಸ್ನೇಹಲ್ ತಾಕೀತು
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಜಲಮಡಂಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೂರ್ವ ವಲಯ...
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ...
ಗ್ರಾಪಂ- ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ: ಜಿಪಂ ಸಿಇಒ ಡಾ.ಅನುರಾಧ
ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವಕಾಂಕ್ಷಿ ಕಾರ್ಯಕ್ರಮ ಗ್ರಾಮಠಾಣಾ ವ್ಯಾಪ್ತಿಯ ಮನೆ ಬಾಗಿಲಿಗೇ ಈ ಸ್ವತ್ತು ಖಾತೆ ನೀಡುವ ಯೋಜನೆ ಆರಂಭ ಬೆಂಗಳೂರು ಗ್ರಾಮಾಂತರ: ಪಂಚಾಯತ್ ರಾಜ್ ಮತ್ತು...
ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ...
ಖಾಸಗಿ ಕಂಪನಿಯ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡ ವಕೀಲ ಶಿವರಾಜುರಿಗೆ ಅಭಿನಂದನೆಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್.ಬಿ.ಶಿವರಾಜು ಅವರಿಗೆ ಕೈ...
KSRTC ನೂತನ ಎಂಡಿ ಅಕ್ರಮ್ ಪಾಷಗೆ ಸ್ವಾಗತ ಕೋರಿದ ನಿಗಮದ ಪ್ರಭಾರ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಅಕ್ರಮ್ ಪಾಷ ಇಂದು ಅಧಿಕಾರ ಸ್ವೀಕರಿಸಿದರು. ನಿಗಮದ ಪ್ರಭಾರ ಎಂಡಿಯಾಗಿದ್ದ ಬಿಎಂಟಿಸಿ...
ಟೇಕಾಫ್ ಆದ ಕೆಲವೇ ಕ್ಷಣದ ಏರ್ ಇಂಡಿಯಾ ವಿಮಾನ ಪತನ: ಇಬ್ಬರು ಸೇಫ್
ಅಹಮದಾಬಾದ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡ ಘಟನೆಗೆ ಸಂಬಂಧಿಸಿದಂತೆ 240 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ...