NEWSನಮ್ಮರಾಜ್ಯಬೆಂಗಳೂರು

BMTC: ಇಂದು ಬೆಳಗ್ಗೆ 6ರಿಂದ ರಾತ್ರಿ 10ಗಂಟೆ ವರೆಗೂ ಟಿಕೆಟ್‌ ಚೆಕಿಂಗ್‌ಗೆ 120 ಸಿಬ್ಬಂದಿಗಳ ನಿಯೋಜನೆ 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆದಾಯ ಕುಂಠಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗ ತನಿಖಾಧಿಕಾರಿಗಳನ್ನು ಇಂದು ಎರಡೂ ಪಾಳಿಗಳಲ್ಲಿ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ನಿಯೋಜಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಂದು (ಜುಲೈ 9ರಂದು) ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ವರೆಗೆ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆ ವರೆಗೆ ವಿಶೇಷ ಮಾರ್ಗ ತನಿಖಾ ಕಾರ್ಯಕ್ಕಾಗಿ ತಲಾ 60 ಸಂಚಾರ ಸಿಬ್ಬಂದಿಗಳ ನಿಯೋಜನೆ ಮಾಡಿ ಕಾರ್ಯಚರಣೆಗೆ ಇಳಿಸಲಾಗಿದೆ.

ಸಂಸ್ಥೆಯ ಆದಾಯ ಕುಂಠಿತಗೊಂಡಿದ್ದು, ಸಂಸ್ಥೆಯ ವಾಹನಗಳಲ್ಲಿ ಸಾರಿಗೆ ಆದಾಯ ಸೋರಿಕೆ ತಡೆಗಟ್ಟಿ ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸುವಂತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಸಾರಿಗೆ ಆದಾಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜುಲೈ 9ರಂದು ಮಂಗಳವಾರ, ಮೊದಲನೇ ಪಾಳಿ (06.00 ರಿಂದ 14.00) ಹಾಗೂ ಎರಡನೇ ಪಾಳಿ (14.00 ರಿಂದ 22.00ರವರೆಗೆ) ವಿಶೇಷ ಮಾರ್ಗ ತನಿಖೆ ನಡೆಯಲಿದೆ.

ಇನ್ನು ಮಾರ್ಗ ಪತ್ರಗಳ ತಿದ್ದುಪಡಿ, ಕಡಿಮೆ/ ಹೆಚ್ಚುವರಿ ದರದ ಚೀಟಿಗಳನ್ನು ವಿತರಿಸುವುದು, ಅನಧಿಕೃತ ಚೀಟಿಗಳನ್ನು ಹೊಂದಿರುವುದು, ಚೀಟಿಗಳನ್ನು ಮರುವಿತರಣೆ, ಪಾಸುಗಳ ಮರು ಮಾರಾಟ, ಶಕ್ತಿ ಯೋಜನೆ ಉಚಿತ ಚೀಟಿಗಳ ದುರುಪಯೋಗ ಪ್ರಕರಣಗಳ ನಿಗಾವಹಿಸಲು ಈ ವಿಶೇಷ ಮಾರ್ಗ ತನಿಖಾ ಕಾರ್ಯವನ್ನು ಘಟಕ/ ಬಸ್ ನಿಲ್ದಾಣ/ ವಲಯ/ ಕೇಂದ್ರ ಕಚೇರಿ ಮತ್ತು ಸಾರಥಿ/ ಭದ್ರತಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಹೀಗಾಗಿ ಅಧಿಕಾರಿಗಳ ಕಚೇರಿ ವಾಹನ, ಸಾರಥಿ/ ಘಟಕ ವಾಹನಗಳನ್ನು ಉಪಯೋಗಿಸಿ, ಹೆಚ್ಚು ತಂಡಗಳನ್ನು ನಿಯೋಜಿಸಿ ಎಲ್ಲ ವರ್ಗದ ಸಾರಿಗೆಗಳಲ್ಲಿ ತನಿಖೆಗೆ ಒಳಪಡಿಸಲು ಪರಿಣಾಮಕಾರಿ ಮಾರ್ಗ ತನಿಖಾ ಕಾರ್ಯ ಕೈಗೊಳ್ಳಲು ವಿಶೇಷ ತನಿಖೆ ಮಾಡಲಾಗುತ್ತಿದೆ.

ಇಂದು ಈ ವಿಶೇಷ ತನಿಖಾ ಕಾರ್ಯದ ಅವಧಿಯಲ್ಲಿ ಯಾವುದೇ ಅನುಸೂಚಿ ವಾಹನ ರದ್ದಾಗದೇ ನಿಗದಿತ ಸಮಯಕ್ಕೆ ಸರಿಯಾಗಿ ಮಾರ್ಗದ ಮೇಲೆ ಕಾರ್ಯಾಚರಣೆ ಮಾಡಲು ಎಲ್ಲ ಘಟಕ ವ್ಯವಸ್ಥಾಪಕರು/ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಈ ವಿಶೇಷ ತನಿಖಾ ಕಾರ್ಯಕ್ಕಾಗಿ ನಿಯೋಜಿಸಿರುವ ಸಿಬ್ಬಂದಿಗಳ ವಿವರದ ಪಟ್ಟಿಯನ್ನು ಸಹ ನೀಡಲಾಗಿದ್ದು, ಬಹುತೇಕ ಸಂಸ್ಥೆಯ ಎಲ್ಲ ಘಟಕ ವ್ಯವಸ್ಥಾಪಕರು, ATS, TI, TC ಹೀಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ತಪ್ಪದೇ ವಿಶೇಷ ತನಿಖಾ ಕಾರ್ಯಕ್ಕೆ ನಿಗದಿಪಡಿಲಾಗಿದೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ