NEWSನಮ್ಮರಾಜ್ಯಬೆಂಗಳೂರು

KSRTC ನೂತನ ಎಂಡಿ ಅಕ್ರಮ್‌ ಪಾಷಗೆ ಸ್ವಾಗತ ಕೋರಿದ ನಿಗಮದ ಪ್ರಭಾರ ಎಂಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್‌ ಅಧಿಕಾರಿ ಅಕ್ರಮ್‌ ಪಾಷ ಇಂದು ಅಧಿಕಾರ ಸ್ವೀಕರಿಸಿದರು.

ನಿಗಮದ ಪ್ರಭಾರ ಎಂಡಿಯಾಗಿದ್ದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ  ಆರ್.ರಾಮಚಂದ್ರನ್‌ ಅವರು ಗೂಗುಚ್ಛ ನೀಡುವ ಮೂಲಕ ನೂತನ ಎಂಡಿ ಅವರನ್ನು ಸ್ವಾಗತಿಸಿ ತಮ್ಮ ಅಧಿಕಾರಿರನ್ನು ಹಸ್ತಾಂತರಿಸಿದರು.

ಕಳೆದ ಮೂರು ವರ್ಷದಿಂದ ನಿಗಮದ ಎಂಡಿಯಾಗಿದ್ದ ವಿ.ಅನ್ಬುಕುಮಾರ್‌ ಅವರನ್ನು ಇದೇ ಜೂನ್‌ 2ರಂದು ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ ಬಿಎಂಟಿಸಿ ಎಂಡಿ ಅವರನ್ನು ಪ್ರಭಾರವಾಗಿ ನೇಮಕ ಮಾಡಲಾಗಿತ್ತು. ಹೀಗಾಗಿ ಇಂದು ಅಕ್ರಮ್‌ ಪಾಷ ಅವರನ್ನು ಎಂಡಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿದ ಹಿನ್ನೆಲೆಯಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ನೌಕರರಿಗೆ 2020ರ ಜನವರಿ ಒಂದರಿಂದ ಅನ್ವಯವಾಗುವಂತೆ 2023ರ ಮಾರ್ಚ್‌ನಲ್ಲಿ ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ವೇತನ ಹೆಚ್ಚಳವಾಗಬೇಕಿದ್ದು, ಅದು ಈವರೆಗೂ ಆಗಿಲ್ಲ. ಈ ಎಲ್ಲವನ್ನು ಸರ್ಕಾರದ ಜತೆ ಮಾತನಾಡಿ ಕೊಡಿಸುವ ಗರುತರವಾದ ಜವಾಬ್ದಾರಿ ನೂತನ ಎಂಡಿ ಅಕ್ರಮ್‌ ಪಾಷ ಅವರ ಮೇಲಿದೆ.

ಈ ಬಗ್ಗೆ ಸರ್ಕಾರದ ಜತೆ ಮಾತನಾಡಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಯಾವರೀತಿ ಕೊಡಿಸುತ್ತಾರೋ ಎಂಬ ಕುತೂಹಲ ಕೂಡ ನಾಲ್ಕೂ ನಿಗಮದ ನೌಕರರದ್ದಾಗಿದೆ. ಈ ಎಲ್ಲದರ ಜತೆಗೆ ಡಿಪೋಗಳ ಮಟ್ಟದಲ್ಲಿ ಚಾಲನಾ ಸಿಬ್ಬಂದಿ ಸೇರಿದಂತೆ ಇತರ ನೌಕರರಿಗೆ ಆಗುತ್ತಿರುವ ಮಾನಸಿಕ ಕಿರುಕುಳ ಹಾಗೂ ಲಂಚಾವತಾರಕ್ಕೂ ಕಡಿವಾಣ ಹಾಕುವ ಜಾಣ್ಮೆಯನ್ನು ನೂತನ ಎಂಡಿಯವರು ತೋರಿಸಬೇಕಿದೆ.

ಇನ್ನು ಈ ಹಿಂದೆ ಇದ್ದ ಎಂಡಿ ವಿ.ಅನ್ಬುಕುಮಾರ್‌ ಅವರು ನೌಕರರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಿರುವ ಯೋಜನೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಗುರುತರ ಆರೋಪದಡಿ ಲೋಕಾಯುಕ್ತಕ್ಕೆ ಕೆಆರ್‌ಎಸ್‌ ಪಕ್ಷದ ಮುಖಂಡರು 2025ರ ಏಪ್ರಿಲ್‌ನಲ್ಲಿ ದೂರು ನೀಡಿದ್ದರು. ಈ ಹಿನ್ನೆಯಲ್ಲಿ ಅವರನ್ನು ಸರ್ಕಾರ ರಜೆ ಮೇಲೆ ಕಳುಹಿಸಿ ಬಳಿಕ ವರ್ಗಾವಣೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ತಾವು ಸ್ವಚ್ಛ ಮನಸ್ಸಿನಿಂದ ಹಾಗೂ ಶುದ್ಧವಾದ ನಡೆಯಿಂದ ನೌಕರರಿಗೆ ಸರ್ಕಾರದಿಂದ ಹಾಗೂ ಸಂಸ್ಥೆಯಿಂದ ಸಿಗಬೇಕಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸಬೇಕು ಎಂಬುವುದು ವಿಜಯಪಥದ ಕಳಕಳಿ.

Megha
the authorMegha

Leave a Reply

error: Content is protected !!