NEWSನಮ್ಮಜಿಲ್ಲೆನಮ್ಮರಾಜ್ಯ

ನೌಕರರಿಗೆ 38 ತಿಂಗಳ ವೇತನ ಹಿಂಬಾಕಿ ಕೊಡದಿದ್ದರೂ ಯಾವ ಪುರುಷಾರ್ಥಕ್ಕಾಗಿ ಈ ಸಾರಿಗೆ ಸಂಭ್ರಮ!?

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸುಮಾರು 1.25 ಲಕ್ಷ ಅಧಿಕಾರಿಗಳು, ನೌಕರರಿಗೆ ಕಳೆದ 2020ರ ಜನವರಿಯಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ಕೊಡುವ ಬಗ್ಗೆ ಮಾತನಾಡದ ಸರ್ಕಾರದ ಪರವಾಗಿ ಯಾವ ಪುರುಷಾರ್ಥಕ್ಕೆ ಈ ಸಾರಿಗೆ ಸಂಭ್ರಮ ಆಚರಿಸುತ್ತಿದ್ದಾರೋ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಗೊತ್ತಿಲ್ಲ.

ಕಾಂಗ್ರೆಸ್‌ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಶಕ್ತಿಯೋಜನೆಯನ್ನು ಘೋಷಣೆ ಮಾಡಿತೆ ವಿನಾಃ ಸಾರಿಗೆ ನೌಕರರ ಅನುಕೂಲಕ್ಕಾಗಿ ಮಾಡಿಲ್ಲ. ಇನ್ನು ಸಾರಿಗೆ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬಗ್ಗೆ ನಿಜವಾಗಲು ಸಿಎಂ ಸಿದ್ದರಾಮಯ್ಯ ಅವರಿಗಾಗಲೀ ಇಲ್ಲ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗಾಗಲೀ ಕಾಳಜಿ ಇದ್ದಿದ್ದರೆ ಮೊದಲು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡುವ ಬಗ್ಗೆ ಘೋಷಣೆ ಮಾಡುತ್ತಿದ್ದರು.

ಆದರೆ, ನೌಕರರ ಪರವಾದ ಯಾವುದೇ ಒಂದೇವೊಂದು ಯೋಜನೆಯನ್ನು ಜಾರಿಗೊಳಿಸದ ಈ ಸರ್ಕಾರದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಮೈಸೂರಿನಲ್ಲಿ ಅದೂಕೂಡ ಬೃಹತ್‌ ಕಾರ್ಯಕ್ರಮ ಮಾಡಿ ಸನ್ಮಾನಿಸಲಾಗುವುದು ಎಂದು ಹೇಳುತ್ತಿದ್ದೀರಲ್ಲ ನಿಮಗೆ ನಾಚಿಕೆ ಆಗುವುದಿಲ್ಲವೇ?

ಮೊದಲು ನೌಕರರಿಗೆ ಬರಬೇಕಿರುವ ಅರಿಯರ್ಸ್‌ ಕೊಡಿಸಿ ಇದರ ಜತೆಗೆ ಈವರೆಗೂ ಸರ್ಕಾರ ಕೊಡಬೇಕಿರುವ 4500 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲು ಹೋರಾಟ ಮಾಡಿ, ಇದಿಷ್ಟೇ ಅಲ್ಲ ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ಪ್ರಯಾಣಿಸಿರುವ ಟಿಕೆಟ್‌ ಮೌಲ್ಯದ ಹಣವನ್ನು ಕೂಡ ಬಾಕಿ ಉಳಿಸಿಕೊಂಡು ಅರ್ಧಂಬರ್ಧ ಕೊಟ್ಟಿದೆ. ಅದನ್ನೂ ಬಿಡುಗಡೆ ಮಾಡಲು ಒತ್ತಾಯಿಸಿ.

ಸಾರಿಗೆಯ ನಾಲ್ಕೂ ನಿಗಮಗಳಿಗೂ ಸಾವಿರಾರು ಕೋಟಿ ರೂ.ಗಳನ್ನು ಕೊಡದೆ ಬಾಕಿ ಉಳಿಸಿಕೊಂಡಿರುವ ಸಿಎಂ, ಡಿಸಿಎಂ ಮತ್ತು ಸಾರಿಗೆ ಸಚಿವರನ್ನು ತರಾಟೆಗೆ ತೆಗೆದುಕೊಂಡು ಬಿಡುಗಡೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡದೆ, ನೌಕರರನ್ನು ಯಾಮಾರಿಸುವ ನಿಟ್ಟಿನಲ್ಲಿ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಿಂದ ಬಲ ಬಂದಿದೆ ಎಂದು ಹೇಳಿ ಇವರಿಗೆ ಹಾರ ತುರಾಯಿ ಹಾಕಲು ಮುಂದಾಗಿರುವುದು ನಿಮಗೆ ಸರಿ ಎನಿಸುತ್ತಿದೆಯೇ ಹೇಳಿ?

ಇನ್ನು 2024ರ ಜನವರಿ 1ರಿಂದ ಮತ್ತೊಮ್ಮೆ ವೇತನ ಹೆಚ್ಚಳವಾಗಬೇಕು. ಆದರೆ, 2020ರ ಜನವರಿಯಿಂದ ಆಗಿರುವ ವೇತನ ಹೆಚ್ಚಳದ ಹಿಂಬಾಕಿಯನ್ನೇ ಉಳಿಸಿಕೊಂಡಿರುವುದನ್ನು ಕೊಡಿಸುವ ನಿಟ್ಟಿನಲ್ಲಿ ಯೋಚನೆ ಮಾಡದ ನೀವು ಈ ಸಂಭ್ರಮವನ್ನು ಮಾಡಲು ಹೊರಟಿದ್ದೀರಲ್ಲ ನಿಮ್ಮನ್ನು ಏನೆಂದು ಕರೆಯಬೇಕು ಹೇಳಿ?

ನೌಕರರ ಪರವಾಗಿದ್ದೇವೆ ಎಂದು ಹೇಳಿ ಸಾರಿಗೆ ನೌಕರರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ನೌಕರರಿಂದ ಸಾವಿರಾರು ರೂ.ಗಳನ್ನು ವಸೂಲಿ ಮಾಡಿ ಬಳಿಕ ಅವರನ್ನೇ ಬೀದಿಗೆ ನಿಲ್ಲಿಸುವ ಇಂಥ ಸಂಘಟನೆಗಳು ಬೇಕಾ? ಈಗಲೂ ಪ್ರಜ್ಞಾವಂತ ನೌಕರರು ಹೇಳುತ್ತಿರುವಂತೆ ಸಾರಿಗೆಯ ಅಧಿಕಾರಿಗಳು ಒಟ್ಟಾಗಿ ಯಾವುದೇ ಕಾರ್ಯಕ್ರಮ ಮಾಡಿದರೂ ಅದರಲ್ಲಿ ಭಾಗವಹಿಸಿ.

ಇಲ್ಲ ಬರಿ ಸಾರಿಗೆ ಕಾರ್ಮಿಕರ ಸಂಘಟನೆಗಳು ಕರೆ ನೀಡುವ ಯಾವುದೇ ಹೋರಾಟ, ಸಮಾರಂಭಗಳಿಗೆ ಹೋಗುವ ಮುನ್ನಾ ಯೋಚನೆ ಮಾಡಿ. ಇನ್ನು ಇಲ್ಲಿ ಸಾರಿಗೆ ನೌಕರರ ಬದಲಿಗೆ ಈಗಲೂ ಸಾರಿಗೆ ಕಾರ್ಮಿಕರು ಎಂದು ಕರೆಯುತ್ತಿದ್ದಾರೆ. ಇಲ್ಲಿ ಯಾರು ಕಾರ್ಮಿಕರು ಅನ್ನೋದನ್ನು ಈ ಸಂಘಟನೆಗಳು ಖಚಿತಪಡಿಸಬೇಕು.

ನೌಕರರು ತಾವು ದುಡಿದ ಹಣವನ್ನು ಈ ರೀತಿಯ ಹೋರಾಟ ಸಮಾವೇಶಗಳಿಗೆ ಹಾಕಿ ದಿವಾಳಿಯಾಗುವ ಜತೆಗೆ ಹೋರಾಟದಲ್ಲೂ ಮುಂದೆ ಹೋಗಿ ಕೆಲಸವನ್ನೇ ಕಳೆದುಕೊಂಡು ಬೀದಿಗೆ ಬರುತ್ತಿರುವುದನ್ನು ನೋಡಿದ್ದೇವೆ. ಆದರೆ, ಸಾರಿಗೆಯ ಯಾವುದೇ ಒಬ್ಬ ಅಧಿಕಾರಿಯೂ ಈ ರೀತಿಯ ಸಮಾರಂಭಗಳಿಗೆ ಒಂದೇ ಒಂದು ರೂಪಾಯಿಯನ್ನು ಕೊಟ್ದಟಿರುವ ನಿದರ್ಶನ ನಮ್ಮ ಮುಂದೆ ಇಲ್ಲ. ಜತೆಗೆ ಯಾವುದೇ ಹೋರಾಟದಲ್ಲೂ ಭಾಗವಹಿಸಿಲ್ಲ. ಆದರೆ ನಿಮ್ಮ ಹೋರಾಟದಿಂದ ಮಾತ್ರ ವೇತನ ಹೆಚ್ಚಳ ಮಾಡಿಸಿಕೊಂಡು ನಿಮ್ಮನ್ನು ಬೀದಿಗೆ ತಳ್ಳುವ ಕೆಲಸ ಮಾಡಿರುವುದನ್ನು ಮಾತ್ರ ಮರೆಯುವಂತ್ತಿಲ್ಲ.

ಅಂದರೆ ಇದು ಏಣಿ ಹತ್ತಿ ಮೇಲೆ ಹೋದ ನಂತರ ಏಣಿಯನ್ನೇ ಒದೆಯುವಂತೆ ನಿಮ್ಮ ಹೋರಾಟದಿಂದಲೇ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ಇರುವ ನಿಮ್ಮನ್ನೇ ಅಮಾನತು, ವಜಾ, ವರ್ಗಾವಣೆ ಅಂತ ಮಾಡಿ ಸರ್ಕಾರದ ಮುಂದೆ ಒಳ್ಳೆಯವರಾಗುತ್ತಿದ್ದಾರೆ. ಆದರೆ ನೀವು ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿ ಇತ್ತ ಕೆಲಸವು ಇಲ್ಲದೆ ಅಲೆಯುವ ಸ್ಥಿತಿ ತಲುಪುತ್ತೀರಿ. ಇತ್ತ ಸಂಘಟನೆಗಳು ಯಾವುದೇ ಅಧಿಕಾರಿಗಳನ್ನು ಹೋರಾಟಕ್ಕೆ ಕರೆಯದೇ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿವೆ.

ಹೀಗಾಗಿ ಯೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಿ. ಇದರ ಜತೆಗೆ ಯಾವುದೇ ನೌಕರರು ಸಮಾರಂಭಗಳಿಗೆ ಯಾವುದೇ ಹಣಕಾಸಿನ ನೆರವು ನೀಡದಿರುವುದು ಒಳಿತು. ಕಾರಣ ಇಂಥ ಸಮಾರಂಭಗಳಿಗೆ ಲಕ್ಷಾಂತರ ರೂಪಾಯಿ ಎಲ್ಲೆಲ್ಲಿಂದಲೋ ಹರಿದು ಬರುತ್ತದೆ. ಹಾಗಾಗಿ ಈ ಬಗ್ಗೆಯೂ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಪ್ರಜ್ಞಾವಂತ ನೌಕರರು ಮತ್ತು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ