NEWSನಮ್ಮರಾಜ್ಯಬೆಂಗಳೂರು

ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ನಿಗದಿ ಮಾಡಿ: ಸಾರಿಗೆ ಸಚಿವರಿಗೆ BMS ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಅಧಿಕಾರಿಗಳು ಮತ್ತು ನೌಕರರಿಗೆ ಅವರು ಕೇಳುತ್ತಿರುವ ಸರಿ ಸಮಾನ ವೇತನ ಅಂದರೆ 7ನೇ ವೇತನ ಆಯೋದಂತೆ ವೇತನ ಕೊಡಬೇಕು ಎಂದು ಕರ್ನಾಟಕ ರಸ್ತೆ ಸಾರಿಗೆ ಮದ್ದೂರ್ ಸಂಘ (ಭಾರತೀಯ ಮದ್ದೂರ್ ಸಂಘಕ್ಕೆ ಸಂಯೋಜಿತ) ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಮಹದೇವಯ್ಯ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಾರಂಭವಾಗಿದ್ದ ದಿನದಿಂದ ಎಲ್ಲ ವೇತನ ಪರಿಷ್ಕರಣೆಯು 4 ವರ್ಷಕ್ಕೆ ಅನುಗುಣವಾಗಿ ವೇತನ ಪರಿಷ್ಕರಣೆ ಸಂಸ್ಥೆ ಮತ್ತು ಸರ್ಕಾರ ಜಾರಿಗೆ ತಂದು ನೌಕರರಿಗೆ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ವೇತನ ಜಾರಿ ಮಾಡಿಕೊಂಡು ಬಂದಿದೆ.

ಆದರೆ ಹೆಚ್ಚಿನ ಕಾರ್ಯ ಒತ್ತಡದಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ಸಾರಿಗೆ ಉತ್ತಮ ಸೌಲಭ್ಯ ನಿಡುತ್ತಿರುವುದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ.

ತಾವುಗಳು 2023ರ ಚುನಾವಣೆಯಲ್ಲಿ ನಮ್ಮ ಕಾರ್ಮಿಕರು ಸಹ ಮತ ನೀಡಿದ್ದರಿಂದ 136 ವಿಧಾನಸಭಾ ಸದಸ್ಯರು ಆಯ್ಕೆಯಾಗಿರುವುದರಲ್ಲಿ ನಮ್ಮ ಸಾರಿಗೆ ನೌಕರರ ಸಹಕಾರವಿದೆ. ನಂತರ ತಾವು 2ನೇ ಬಾರಿಗೆ ಸಾರಿಗೆ ಇಲಾಖೆಗೆ ಸಚಿವರಾಗಿದ್ದಕ್ಕೆ ಸಂಸ್ಥೆಯ ಎಲ್ಲ ಒಂದು ಲಕ್ಷ ಹತ್ತು ಸಾವಿರ ನೌಕರರು ಬಹಳ ಸಂತೋಷಪಟ್ಟಿದ್ದಾರೆ.

ನಿಮ್ಮ ಮೇಲೆ ನೌಕರರು ಇನ್ನು ಮುಂದೆ ನಮ್ಮ ವೇತನ ಸೌಲಭ್ಯಗಳು ಉತ್ತಮವಾಗಿರುತ್ತವೆ ಎಂದು ನಿರೀಕ್ಷಣೆ ಪಟ್ಟಿದ್ದರು. ಆದರೆ 2020ರ ವೇತನ ಪರಿಕ್ಷರಣೆ 38ತಿಂಗಳು ಬಾಕಿ ಹಣವನ್ನು ಸಹ ನೌಕರರಿಗೆ ತಾವು ಕೊಡಿಸುವಲ್ಲಿ ವಿಫಲರಾಗಿದ್ದೀರಿ.

ನಂತರ 01/01/2024 ವೇತನ ಪರಿಷ್ಕರಣೆ 10ತಿಂಗಳಾದರೂ ಜಾರಿ ಬಂದಿರುವುದಿಲ್ಲ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಗಳು ಆಸಕ್ತಿ ತೋರಿರುವುದಿಲ್ಲವೆಂದು ಕಂಡು ಬಂದಿದೆ.

ಕೆಎಸ್‌ಆರ್‌ಟಿಸಿ ಆಫೀಸರ್ ವೆಲ್ಫರ್ಸ್‌ ಅಸೋಸಿಯೇಷನ್ ಅವರು 04.10.2024 ರಂದು ತಮಗೆ ಪತ್ರವನ್ನು ನೀಡಿದ್ದು, ಆ ಪತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 799 ಜನ ಅಧಿಕಾರಿಗಳು ಇದ್ದೇವೆ. ನಾವುಗಳು ಬಹಳ ಕಷ್ಟಪಟ್ಟು ಕರ್ತವ್ಯ ಮಾಡುತ್ತಿದ್ದೇವೆ. ಆದ್ದರಿಂದ ನಮಗೂ ಸಹ ಸರ್ಕಾರದ 7ನೇ ವೇತನ ಆಯೋಗದಂತೆ ವೇತನ ನಿಗದಿಪಡಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಅದರಂತೆ ನಾವೂ ಸಾರಿಗೆ ಕರ್ತವ್ಯ ನಿರ್ವಹಿಸುತ್ತಿರುವ 1.10 ಲಕ್ಷ ನೌಕರರಿಗೂ ಸಹ ಸರ್ಕಾರಿ ನೌಕರರಿಗೆ ಸರ್ಕಾರ ನೀಡಿರುವ 7ನೇ ವೇತನ ಆಯೋಗದಂತೆ ಸಾರಿಗೆ ನೌಕರರಿಗೂ ನಿಗದಿಪಡಿಸಬೇಕು ಎಂದು ಅಥವಾ ಅದಕ್ಕೆ ಅನುಗುಣವಾಗಿ ಶೇಕಡಾವಾರು ನೀಡಬೇಕು ಎಂದು ನಮ್ಮ ಒಕ್ಕೂಟ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

ಮುಖ್ಯವಾದ ಬೇಡಿಕೆಗಳು: 1) 01/01/2020 ರಿಂದ ಜಾರಿಗೆ ಬಂದ ಪರಿಷ್ಕರಣೆ 01/03/2023 ರಂದು ಜಾರಿ ಮಾಡಿದ್ದು, 38 ತಿಂಗಳ ಬಾಕಿ ಹಣ ನೀಡಲು ಅನೇಕ ಪತ್ರ ವ್ಯವಹಾರಗಳನ್ನು ತಮಗೂ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೂ ಮಾಡಿದ್ದರೂ ಸಹ ಬಾಕಿ ಹಣ ನೀಡಿರುಲ್ಲ. ಈ ಬಾಕಿ ಹಣವನ್ನು ತಾವು ಯಾವ ದಿನಾಂಕದೊಳಗೆ ನೀಡುತ್ತೀರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು.

2) 01/01/2024 ರಿಂದ ಜಾರಿಗೆ ಬರಬೇಕಾದ ವೇತನ ಪರಿಷ್ಕರಣೆಯನ್ನುಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಬೇಕೆಂದು ಅದಕ್ಕೆ ಸಮಾನ ವೇತನ ಶೇಕಡವಾರು ಜಾರಿ ಮಾಡಬೇಕು ಇಂಕ್ರಿಮೆಂಟ್‌ ಸ್ಲಾಬ್‌ಗಳನ್ನು ಅಂದರೆ ಈಗಿರುವ ಇಂತ್ರಮೆಂಟ್‌ಗೆ ದುಪ್ಪಟ್ಟು ಮಾಡಿಕೊಡಬೇಕೆಂದು ಆಗ್ರಹ.

3) ಹಿಂದೆ 3ವೇತನ ಪರಿಷ್ಕರಣೆ 2012, 2016, 2020ರ ಸಮಯದಲ್ಲಿ ಭತ್ಯೆಗಳನ್ನು ಹೆಚ್ಚಿಸಿಲ್ಲ. ಇವುಗಳನ್ನು ಮೂರುಪಟ್ಟು ಹೆಚ್ಚಿಗೆ ಮಾಡಬೇಕು. ಅಧಿಕಾರಿಗಳಿಂದ ನೌಕರರಿಗೆ ಆಗುತ್ತಿರುವ ಕಿರುಕುಳ ಹಾಗೂ ಭ್ರಷ್ಟಾಚಾರ ತಪ್ಪಿಸಬೇಕು.

ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ ಪ್ರಯಾಣ) ಯಿಂದ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಿಗೆ ಬರುತ್ತಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಸಹ ನಮ್ಮ ಸಾರಿಗೆ ನೌಕರರ ಶ್ರಮದಿಂದ ಬಂದಿದೆ. ಸಂಸ್ಥೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಸುಮಾರು 140 ಪ್ರಶಸ್ತಿಗಳು ಸಹ ಲಭ್ಯವಾಗಿದ್ದು ಇದೂ ಸಹ ನೌಕರರ ಶ್ರಮದಿಂದಲೇ ಲಭಿಸಿದೆ.

ಈ ಎಲ್ಲ ವಿಷಯಗಳನ್ನು ತಾವು ಸಾರಿಗೆ ನೌಕರರಿಗೆ ರಾಜ್ಯದ ಇತರ ಎಲ್ಲ ಬೇರೆ ನಿಗಮಗಳಂತೆ ಅಂದರೆ KPTCL, BWSSB ಸೇರಿ ಇತರ ನಿಗಮಗಳ ನೌಕರಂತೆ ಹೆಚ್ಚಿನ ವೇತನ ನೀಡಬೇಕು ಎಂದು ಭಾರತೀಯ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ಸಂಘಟನೆಯು ಒತ್ತಾಯಪೂರಕವಾಗಿ ವೇತನ ನಿಗದಿಪಡಿಸಬೇಕು ಎಂದು ಮನವಿ ಮಾಡಿದೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ ನಿರಂತರ ಮಳೆ- BBMP ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ: ತುಷಾರ್ ಗಿರಿನಾಥ್