ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ ಆಯೋಜಿಸಿದ್ದ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶ್ರೀಗಳು, ಸುತ್ತೂರು ಶ್ರೀಗಳು, ಮಾದಾರ ಚನ್ನಯ್ಯ ಶ್ರೀಗಳು, ನಂಜಾವಧೂತ ಶ್ರೀಗಳು ದೇವೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ, ದೇವೇಗೌಡರ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಮಾತನಾಡಿದ ದೇವೇಗೌಡ ಅವರು, ಜೀವನದ ಕೊನೆ ಹಂತ ಇದು. ನಿಮ್ಮ ಆಶೀರ್ವಾದ ಈ ಹಂತದಲ್ಲಿ ಈ ಆತ್ಮಕ್ಕೆ ಸಮಾಧಾನ ತಂದಿದೆ. ನಾನು ಅನೇಕ ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ರಾಜಕೀಯದಲ್ಲಿ ಸೋಲು, ಗೆಲುವು ಯಾರು ತಲೆ ಕೆಡಿಸಿಕೊಳ್ಳಬಾರದು ಎಂದರು.
ಇನ್ನು ನನ್ನ ಶ್ರೀಮತಿ ಚನ್ನಮ್ಮ ಎಲ್ಲ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಅನೇಕ ಕಷ್ಟದಲ್ಲಿ ನನ್ನ ಗೌರವ ಉಳಿಸಿದ್ದಾರೆ. ನನ್ನ ಬೆಳವಣಿಗೆಗೆ ಅವರ ಕೊಡುಗೆ ಸಾಕಷ್ಟು ಇದೆ ಎಂದು ಚೆನ್ನಮ್ಮ ಅವರ ತ್ಯಾಗ ನೆನೆದು ಕಣ್ಣೀರು ಹಾಕಿದರು.
ಆದಿಚುಂಚನಗಿರಿ ಹಿಂದಿನ ಗುರುಗಳ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಆಯ್ತು, ಸತ್ಯ ಹೇಳ್ತೀನಿ ಎಲ್ಲರ ಮಧ್ಯೆ ನಾವು ಏನಾದರೂ ಗೌರವ ಸಂಪಾದನೆ ಮಾಡಿದ್ದೇವೆ ಅಂದರೆ ಅದು ಬಾಲಗಂಗಾಧರನಾಥ ಸ್ವಾಮೀಜಿಗಳಿಂದ. ರಾಮಕೃಷ್ಣ ಆಶ್ರಮದಲ್ಲಿ ನನ್ನ ದೊಡ್ಡ ಮಗನನ್ನು ಹಾಸ್ಟೆಲ್ಗೆ ಸೇರಿಸಿದ್ದೆ. ಆಗ ಅಲ್ಲಿನ ಶ್ರೀಗಳು ಬಾಲಕೃಷ್ಣ ಹೆಸರಿನಲ್ಲಿ ಗೌಡ ಅನ್ನೋ ಹೆಸರು ತೆಗೆಸು ಎಂದು ಹೇಳಿದರು. ಗೌಡ ಎನ್ನುವ ಹೆಸರು ಇದ್ದರೆ ಡಿಗ್ರಿ ಮಾತ್ರ ಸಿಗುತ್ತೆ. ರ್ಯಾಂಕ್ ಸಿಗಲ್ಲ ಅಂದರು. ಬಾಲಗಂಗಾಧರನಾಥ ಸ್ವಾಮೀಜಿ ನಮ್ಮ ಸಮಾಜ ಗುರುತಿಸಲು ದುಡಿದರು. ಈಗ ನಮ್ಮ ಮುಂದೆ ಅವರು ಇಲ್ಲ. ನಿರ್ಮಲಾನಂದ ಶ್ರೀಗಳನ್ನ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರದ ಜನತೆಗೆ ನೀರು ಸಿಗದೆ ಬವಣೆ ಪಡುತ್ತಿರುವುದನ್ನ ನೋಡಿದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ನರ್ಮದಾ, ಬ್ರಹ್ಮ ಪುತ್ರ ಸೇರಿ ಹಲವು ನದಿ ಸೇರಿಸಿ ಒಂದು ಡ್ಯಾಮ್ ಮಾಡಿದೆ. ಗೋದಾವರಿ ನೀರು ತಮಿಳುನಾಡಿಗೆ ಕೊಡುತ್ತೇವೆ ಅಂತಾರೆ. ಶನಿವಾರ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ತಮಿಳುನಾಡು ಸರ್ ಪ್ಲಸ್ ಸ್ಟೇಟ್. ಇದನ್ನು ಟ್ರಿಬ್ಯೂನಲ್ ಹೇಳಿದೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಈಗ ಆಡಳಿತ ಮಾಡೋರ ಬಗ್ಗೆಯೂ ಟೀಕೆ ಮಾಡಲ್ಲ ಎಂದರು.
ಇನ್ನು ಕರ್ನಾಟಕದಲ್ಲಿ ಕುಡಿಯೋಕೆ ನೀರಿಲ್ಲ ಎಂದು ಹೇಳುತ್ತಾರೆ. ಆಂಧ್ರ ಸಿಎಂ ಬಂದು ಕೂತ್ಕೋ ಅಂತ ನನ್ನನ್ನ ಕೂರಿಸಿದ್ರು. ನಾನು ಯಾವುದೂ ಮರೆಯಲ್ಲ. ತುಂಗಭದ್ರಾದಿಂದ ಮಡಕಶಿರದ ಮೇಲೆ ತೆಗೆದುಕೊಂಡು ಹೋಗುತ್ತಾರೆ ಅಂತೆ. ಹೈಕೋರ್ಟ್ನಲ್ಲಿ ರಿಟ್ ಹಾಕಿಸ್ತಾರೆ. ಮಧುಗಿರಿ, ಶಿರಾಗೆ ನೀರು ಕೊಡಿ ಅಂತ ಈಗ ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಅಲ್ಲಿ ರದ್ದು ಮಾಡುತ್ತಾರೆ.
ಗೋದಾವರಿ ನೀರಿನ ಬಗ್ಗೆ ಶನಿವಾರ ಡಿಟೇಲ್ ಆಗಿ ಪತ್ರ ಬರೆದಿದ್ದೇನೆ. ನಾನು ಈಗಿನ ಪ್ರಧಾನಿಗಳನ್ನ ಹೊಗೊಳೋಕೆ ಬರಲ್ಲ. ವಾಜಪೇಯಿ ನನಗೆ ಸಹಕಾರ ಕೊಡ್ತೀನಿ ಅಂದರು ನಾನು ಬೇಡ ಅಂದೆ. ನನ್ನ ಜನ ನಾನು ಹೋದ ಮೇಲೆ ಈ ಬವಣೆಯಿಂದ ಪಟ್ಟ ನೋವನ್ನ ಈ ಆತ್ಮ ನೋಡುತ್ತದೆ. ನಾನು ನರಕ, ಸ್ವರ್ಗದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ನರ್ಮದಾ ನೀರು ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರದ ಜನ ನೀರಿಗಾಗಿ ಏನು ಮಾಡಬೇಕು? ಇರೋ ಅವಧಿಯಲ್ಲಿ ರಾಜ್ಯಸಭೆಯಲ್ಲಿ ನನ್ನ ಹೋರಾಟ ಮಾಡುತ್ತೇನೆ. ನನಗೆ ಕಾಲಿಗೆ ನೋವು ಇರಬಹುದು. ಬುದ್ದಿಗೆ ನೋವಿಲ್ಲ. ಸಂಸತ್ನಲ್ಲಿ ಹೋರಾಟ ಮಾಡೋ ಶಕ್ತಿ ನನಗೆ ಇದೆ. ಪ್ರಧಾನಿಗಳಿಗೆ ಮನವರಿಕೆ ಮಾಡುತ್ತೇನೆ. 17 ಜನರನ್ನು ಕೊಟ್ಟಿದ್ದೇವೆ, ಕೈ ಬಿಡಬೇಡಿ ಅಂತ ಹೇಳುತ್ತೇನೆ ಎಂದರು.
ಇನ್ನು ನೀರಿನ ಸಮಸ್ಯೆ ಪರಿಹಾರ ಮಾಡೋಕೆ ಮೋದಿಯಿಂದ ಮಾತ್ರ ಸಾಧ್ಯ. ನನ್ನ ಜನಕ್ಕೆ ಆಗೋ ಅನ್ಯಾಯವನ್ನ ಈ ದೇಶದ ಪ್ರಧಾನಿ, ವಿಶ್ವವೇ ಗುರುತಿಸೋ ಮೋದಿ ಅವರಿಂದ ಈ ಸಮಸ್ಯೆ ಪರಿಹಾರ ಸಾಧ್ಯ. ಪಕ್ಷರಹಿತವಾಗಿ ನಾವು ಒಗ್ಗಟ್ಟಾಗಿ ನಮಗೆ ಆಗಿರೋ ಅನ್ಯಾಯ ಸರಿ ಮಾಡೋಣ ಎಂದು ಹೇಳಿದರು.
Related

You Might Also Like
KSRTC ನೌಕರರ ವೇತನ ಹೆಚ್ಚಳಕ್ಕೆ ಜೆಡಿಎಸ್ ಮುಖಂಡ, ವಕೀಲ ಶಂಕರೇಗೌಡ ಆಗ್ರಹ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ....
ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ
ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ರೂಪಾ ನಗರದಲ್ಲಿ ಸ್ಥಳೀಯ...
ಜಮೀರ್ ರಾಜೀನಾಮೆಗೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯ
ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ...
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ
ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ...
KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ಪಾಷ ಅವರನ್ನು ಕರ್ನಾಟಕ...
KSRTC ಬಸ್- ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ: 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಸಕಲೇಶಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯವಾಗಿರುವ ಘಟನೆ ತಾಲೂಕಿನ...
KSRTC ಅಧಿಕಾರಿಗಳು-ನೌಕರರಿಗೆ 7ನೇ ವೇತನ ಆಯೋಗ ಘೋಷಿಸಿ: ಸಂಸ್ಥೆಯ ನೂತನ ಎಂಡಿಗೆ ಅಧಿಕಾರಿಗಳ ಸಂಘ ಮನವಿ
ಬೆಂಗಳೂರು: ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ನೌಕರರಿಗೆ 7ನೇ ವೇತನ ಅಯೋಗವನ್ನು ಘೋಷಿಸುವಂತೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನು ಕೆಎಸ್ಆರ್ಟಿಸಿ ಆಫೀರ್ಸ್ ವೆಲ್ಫೇರ್...
ಜಗತ್ತಿನ ಒತ್ತಡ ಪರಿಸ್ಥಿತಿ ನಿವಾರಣೆಗೆ ಯೋಗ ಒಂದೇ ಮಾರ್ಗ: ಪ್ರಧಾನಿ ನರೇಂದ್ರ ಮೋದಿ
ನ್ಯೂಡೆಲ್ಲಿ: ಜಗತ್ತಿನ ಅನೇಕ ಕ್ಷೇತ್ರಗಳಲ್ಲಿ ಒತ್ತಡದ ಪರಿಸ್ಥಿತಿ ಎದುರಾಗಿ ಅಶಾಂತಿ ಮತ್ತು ಅಸ್ಥಿರತೆ, ಜಾಗತಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಇಂತಹ ಪ್ರಕ್ಷುಬ್ದ ಪರಿಸ್ಥಿತಿ ನಿವಾರಣೆ ಆಗಬೇಕು. ಯೋಗ ಒಂದೆ...
ಕೆ.ಆರ್.ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ: ಅಧಿಕಾರಿಗಳಿಗೆ ಸುರಳ್ಕರ್ ಸೂಚನೆ
ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದು ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ....