CrimeNEWSದೇಶ-ವಿದೇಶ

ತುಂಬು ಗರ್ಭಿಣಿ ಮೇಲೆ GANG RAPE – ಬಳಿಕ ಬೆಂಕಿ ಹಚ್ಚಿ ಹತ್ಯೆಗೆ ಯತ್ನ

ವಿಜಯಪಥ ಸಮಗ್ರ ಸುದ್ದಿ

ಮೊರೇನಾ: ತುಂಬು ಗರ್ಭಿಣಿಯ ಮೇಲೆ ಮೂವರು ಪಾಪಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ನಡೆದಿದೆ.

38 ವರ್ಷದ ತುಂಬು ಗರ್ಭಿಣಿ ಮಹಿಳೆ ತನ್ನ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮಾಡಿದ ಅತ್ಯಾಚಾರ ಆರೋಪ ಕುರಿ ಸಂಧಾನ ನಡೆಸಲು ಆರೋಪಿಗಳ ಮನೆಗೆ ತೆರಳಿದ್ದಳು. ಈ ವೇಳೆ ಕಾಮಾಂದರು ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ.

ಹೌದು! ಸಂತ್ರಸ್ತೆಯ ಪತಿ ಸುರೇಶ್‌ ಸಂಖ್ವಾರ್‌ ಮೊರೆನಾ ಜಿಲ್ಲೆಯ ಅಂಬಾಹ್‌ ಪಟ್ಟಣದ ಚಾಂದ್‌ಪುರದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಸುರೇಶ್‌ ಅದನ್ನು ನಿರಾಕರಿಸಿದ್ದ. ಹಾಗಾಗಿ ಮಹಿಳೆ ಸುರೇಶ್‌ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದಳು.

ಈ ಪ್ರಕರಣವನ್ನು ಸಂತ್ರಸ್ತೆ ಸಂಧಾನ ಮಾಡಲು ಹೋದಾಗಲೇ ಕಿಡಿಗೇಡಿಗಳು ತುಂಬು ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮೂವರು ಆರೋಪಿಗಳು ಅತ್ಯಾಚಾರ ಎಸಗಿದ್ದು ಅಲ್ಲದೆ ಬಳಿಕ ಆಕೆಯನ್ನು ಪೆಟ್ರೋಲ್‌ ಸುರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಪರಿಣಾಮ ಆ ಮಹಿಳೆಗೆ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸಂತ್ರಸ್ತೆಯ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಮ್ಯಾಜಿಸ್ಟ್ರೇಟ್‌ ಬಳಿ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಮತ್ತೆ 16 ರಾಷ್ಟ್ರ ಪ್ರಶಸ್ತಿಗಳ ಮುಡಿಗೇರಿಸಿಕೊಂಡ ನಿಗಮ : ಸೆಪ್ಟೆಂಬರ್ 21ರಂದು ದೆಹಲಿಯಲ್ಲಿ ಪ್ರದಾನ BMTC & KSRTC- ಇನ್ನೆರಡು ವಾರದಲ್ಲಿ ನಿಮ್ಮ ಎಲ್ಲ ಬೇಡಿಕೆಗಳ ಈಡೇರಿಸಲು ಕ್ರಮ: ಇಪಿಎಸ್ ಪಿಂಚಿಣಿದಾರರಿಗೆ ವಿತ್ತ ಸಚಿವರ... ರಾಜ್ಯಕ್ಕೆ ಹೆಚ್ಚಿನ ಆದಾಯದ ಪಾಲು ಕೊಡಿ: 16ನೇ ಹಣಕಾಸು ಆಯೋಗಕ್ಕೆ ಎಎಪಿ ಆಗ್ರಹ BBMP: ಮಳೆ, ಗಾಳಿಗೆ ಬೀಳುವ ಮರಗಳ ತುರ್ತು ತೆರವಿಗೆ ತಂಡ ರಚನೆ -ಮುಖ್ಯ ಆಯುಕ್ತ ತುಷಾರ್‌ ಗಿರನಾಥ್‌ ಎಲ್ಲಿಯಾದರು ಆಸ್ತಿ ನೋಂದಣಿ ಮಾಡಿಸುವ ವ್ಯವಸ್ಥೆ ಜಾರಿ: ಜಿಲ್ಲಾಧಿಕಾರಿ ಡಾ. ಶಿವಶಂಕರ್ KSRTCEFWA: ಸಂಘಟನೆಗಳು ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ- ರುದ್ರೇಶ್ ಬೇಸರ BMTC &KSRTC ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ ಆಕ್ರೋಶ KKRTC: ಮೊಬೈಲ್‌ ನೋಡಿಕೊಂಡು ಬಸ್‌ ಚಾಲನೆ - ₹5 ಸಾವಿರ ದಂಡ ಕಟ್ಟಿದ ಚಾಲಕ KSRTC ಗುಂಡ್ಲುಪೇಟೆ: ಚಲಿಸುತ್ತಿದ್ದಾಗಲೇ ಕಳಚಿಬಿದ್ದ ಬಸ್‌ ಮುಂದಿನ ಚಕ್ರ: ಅಧಿಕಾರಿಗಳ ವಿರುದ್ಧ ಪ್ರಯಾಣಿಕರ ಆಕ್ರೋಶ "ವಿಜಯಪಥ ಇಂಪ್ಯಾಕ್ಟ್‌":  ನಕಲಿ ಬಸ್‌ಪಾಸ್‌ನಲ್ಲೇ 23ವರ್ಷಗಳು ಓಡಾಡಿದ್ದ  ಹೋಂ ಗಾರ್ಡ್‌ ಬಂಧಿಸಿದ KSRTC ಎಸ್‌&ವಿ ಅಧಿ...