NEWSದೇಶ-ವಿದೇಶನಮ್ಮರಾಜ್ಯ

ಅಬ್ಬಬ್ಬಾ ಲಾರಿ ಚಾಲನೆ ಜತೆಗೆ ಯೂಟ್ಯೂಬರಾಗಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಈತ ಹೊಸ ಮನೆ ಖರೀದಿಸಿದ!!

ವಿಜಯಪಥ ಸಮಗ್ರ ಸುದ್ದಿ

ಸಾಮಾಜಿ ಜಾಲತಾಣ ಅನ್ನೋದೇ ಹಾಗೇ. ಈಗಂತೂ ಯಾರು ಯಾವಾಗ ಫೇಮಸ್ ಆಗುತ್ತಾರೆ ಎಂದು ಹೇಳೋಕೆ ಆಗೋದಿಲ್ಲ ಬಿಡಿ. ಅದೃಷ್ಟ ಅನ್ನೋದೆ ಹಾಗೆಯೇ ಯಾವಾಗ ಯಾರ ಕೈ ಹಿಡಿಯುತ್ತದೆ. ಯಾರ ಕೈ ಬಿಡುತ್ತದೆ ಎಂದು ಹೇಳೋದಕ್ಕೆ ಅಸಾಯ. ಹೀಗೆ ಸುಮ್ಮನೆ ಶುರು ಮಾಡಿದ ಯೂಟ್ಯೂಬ್​ನಿಂದ ಈಗ ತಿಂಗಳಿಗೆ ಲಕ್ಷ ಲಕ್ಷ ಸಂಪದಾನೆ ಮಾಡಬಹುದೆಂದು ಆತನ ಕೂಡ ಊಹಿಸಿರಲಿಲ್ಲ.

ಹೌದು, ಲಾರಿ ಚಾಲಕನಾಗುವುದು ಎಂದರೆ ಅದುಕೂಡ ಸಾಮಾನ್ಯ ಕೆಲಸವಲ್ಲ. ಆದರೆ ಈ ಲಾರಿ ಚಾಲಕ ವೃತ್ತಿಯ ಜತೆಗೆ ತಿಂಗಳಿಗೆ 10 ಲಕ್ಷ ರೂ.ಗಳವರೆಗೆ ಯೂಟ್ಯೂಬ್​ನಿಂದ ಗಳಿಸುತ್ತಿದ್ದಾರ ಒಬ್ಬ ಚಾಲಕ. ಶ್ರಮ ಅನ್ನೋದು ಇದ್ದರೆ ಯಾರು ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

ಲಾರಿ ಚಾಲಕನಾಗಿರುವ ರಾಜೇಶ್ ರವಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್. ಭಾರತದಾದ್ಯಂತ ಟ್ರಕ್ ಓಡಿಸುತ್ತಾ ಸುಮಾರು 20 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ರಾಜೇಶ್ ಅವರು ತಮಗೆ ಅಡುಗೆಯ ಮೇಲಿರುವ ಆಸಕ್ತಿಯನ್ನು ಬಳಸಿಕೊಂಡೇ ವರ್ಲ್ಡ್ ಫೇಮಸ್ ಆಗಿದ್ದಾರೆ ಈಗ.

ಆರ್.ರಾಜೇಶ್ ವ್ಲಾಗ್ಸ್ ಎಂಬ ಹೆಸರಿನ ಚಾನೆಲ್ ಮೂಲಕ ಅವರು ವಿಧವಿಧವಾದ ಅಡುಗೆ ತಯಾರು ಮಾಡುತ್ತಾರೆ. ಜತೆಗೆ ಅಡುಗೆ ಮಾಡುವ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹೀಗಾಗಿ ರಾಜೇಶ್ ಅವರು ಈ ಮೂಲಕ ಯೂಟ್ಯೂಬ್​ನಿಂದ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರೆ.

ಇನ್ನು, ತಾವು ಲಾರಿ ಚಾಲಕ ವೃತ್ತಿ ಮಾಡುತ್ತಿದ್ದು, ಇದರಿಂದ ತಿಂಗಳಿಗೆ 25 ರಿಂದ 30 ಸಾವಿರ ಸಂಪಾದಿಸುತ್ತಿದ್ದೇನೆ. ಆದರೆ ಯೂಟ್ಯೂಬ್​ನಿಂದ ತಿಂಗಳಿಗೆ 10 ಲಕ್ಷ ರೂ.ವರೆಗೂ ಗಳಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ.

ಇನ್ನು, ಸಖತ್​ ಫೇಮಸ್ ಆಗಿದ್ದ ರಾಜೇಶ್ ಅವರ ಬಗ್ಗೆ ಆನಂದ್ ಮಹೀಂದ್ರ ಅವರು ತಮ್ಮ ಎಕ್ಸ್‌ನಲ್ಲಿ ವಿಡಿಯೋ ಶೇರ್ ಮಾಡಿ, 25 ವರ್ಷಗಳಿಂದ ರಾಜೇಶ್ ರಾವಾನಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಫುಡ್ ಹಾಗೂ ಟ್ರಾವೆಲ್ ವ್ಲಾಗಿಂಗ್ ಮಾಡುತ್ತಾರೆ. ಈಗ ಅವರು ಯೂಟ್ಯೂಬ್​ನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇರುವ ಯೂಟ್ಯೂಬರ್ ಎಂದು ತಿಳಿಸಿದ್ದಾರೆ.

ಅಲ್ಲದೆ ರಾಜೇಶ್​​ ತಮ್ಮ ಸಂಪಾದನೆಯಿಂದ ಹೊಸ ಮನೆ ಖರೀದಿಸಿದ್ದಾರೆ. ನಿಮ್ಮ ವಯಸ್ಸು ಎಷ್ಟೇ ಇರಲಿ, ನಿಮ್ಮ ಕೆಲಸ ಎಷ್ಟೇ ಕಷ್ಟದ್ದಾಗಿರಲಿ. ಹೊಸ ಟೆಕ್ನಾಲಜಿಗೆ ನಿಮ್ಮನ್ನು ನೀವು ಅಳವಡಿಸಿಕೊಂಡು ಬೆಳೆಯುವುದಕ್ಕೆ ಅಡ್ಡಿಯಿಲ್ಲ ಎಂದು ಅವರು ತೋರಿಸಿಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Leave a Reply

error: Content is protected !!
LATEST
KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌