NEWSಕ್ರೀಡೆದೇಶ-ವಿದೇಶ

ಹೈವೋಲ್ಟೆಜ್​ ಕದನ: ಸೋಲಿನಿಂದ ಕಂಗೆಟ್ಟಿರೋ ಅರ್​​​ಸಿಬಿ ಪಾಳಯದಲ್ಲಿ ಆತಂಕವೇ ಹೆಚ್ಚು!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆರ್​​​ಸಿಬಿ v/s ಮುಂಬೈ ಬಿಗ್​ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್​​ ವಾಂಖೆಡೆ ಸ್ಟೇಡಿಯಂನಲ್ಲಿ ಹೈವೋಲ್ಟೆಜ್​ ಕದನ ನಡೆಯಲಿದೆ.

ಹ್ಯಾಟ್ರಿಕ್​ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿರೋ ಮುಂಬೈ ಇಂಡಿಯನ್ಸ್​, ‘ರಾಯಲ್​ ಚಾಲೆಂಜ್’​ಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ. ಆದ್ರೆ ಸೋಲಿನಿಂದ ಕಂಗೆಟ್ಟಿರೋ ಅರ್​​​ಸಿಬಿ ಪಾಳಯದಲ್ಲಿ ಆತಂಕವೇ ಹೆಚ್ಚಾಗಿದೆ. ಆರ್​​​ಸಿಬಿ ಇಂದು ಗೆಲ್ಲಬೇಕು ಕೆಲ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕು.

ಇಂದಿನ ಪಂದ್ಯದಲ್ಲಿ ಆರ್​​ಸಿಬಿ ತಂಡದಲ್ಲಿ ಎಲ್ಲರೂ​ ನಿರೀಕ್ಷೆ ಮಾಡ್ತಿರೋ ಮೊದಲ ಬದಲಾವಣೆಯೇ ಇದು. ಪರ್ಫಾಮ್​ ಮಾಡಲು ತಿಣುಕಾಡ್ತಿರೋ ಕ್ಯಾಮರೂನ್​ ಗ್ರೀನ್​ ಕಿತ್ತು ಬಿಸಾಕಿ ವಿಲ್​ ಜಾಕ್ಸ್​​ಗೆ ಚಾನ್ಸ್​ ನೀಡಬೇಕು ಅನ್ನೋದು ಫ್ಯಾನ್ಸ್​ ಆಗ್ರಹವಾಗಿದೆ. ವಿಲ್​ ಜಾಕ್ಸ್​​, ಫಾಫ್​ ಡುಪ್ಲೆಸಿ ಜೊತೆ ಇನ್ನಿಂಗ್ಸ್​ ಓಪನ್​ ಮಾಡಿದ್ರೆ ತಂಡಕ್ಕೆ ಅದ್ದೂರಿ ಆರಂಭ ಸಿಗುತ್ತೆ ಅನ್ನೋ ನಿರೀಕ್ಷೆಯಿದೆ.

ನಂಬರ್​ 3 ವಿರಾಟ್​ ಕೊಹ್ಲಿ ಫೇವರಿಟ್​ ಸ್ಲಾಟ್​. ಈ ಕ್ರಮಾಂಕದಲ್ಲಿ ಕೊಹ್ಲಿ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದಾರೆ. ಸದ್ಯ ಸಾಲಿಡ್​ ಫಾರ್ಮ್​ನಲ್ಲಿರೋ ವಿರಾಟ್​ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ರೆ, ಆರ್​​ಸಿಬಿಯ ಮಿಡಲ್​ ಆರ್ಡರ್​ ಬ್ಯಾಟಿಂಗ್​ ಸ್ಟ್ರೆಂಥ್​ ಹೆಚ್ಚಲಿದೆ.

ವೈಫಲ್ಯದ ಸುಳಿಗೆ ಸಿಲುಕಿರೋ ರಜತ್​ ಪಟಿದಾರ್​ಗೆ ಗೇಟ್​ ಪಾಸ್​ ನೀಡಿ ಲೆಫ್ಟ್​ ಆರ್ಮ್​ ಬ್ಯಾಟರ್​ ಅನುಜ್​ ರಾವತ್​ಗೆ ಚಾನ್ಸ್​ ನೀಡಬೇಕಿದೆ. 4ನೇ ಕ್ರಮಾಂಕದಲ್ಲಿ ಅನುಜ್​ ರಾವತ್​ ಕಣಕ್ಕಿಳಿದ್ರೆ, ಬ್ಯಾಟಿಂಗ್​ ಲೈನ್​ ಅಪ್​ಗೆ ಅಡ್ವಾಂಟೇಜ್​​ ಆಗಲಿದೆ. ಮಿಡಲ್​ ಆರ್ಡರ್​ಗೆ ಲೆಫ್ಟ್​ – ರೈಟ್​ ಕಾಂಬಿನೇಶನ್​​ನ ಬಲ ಬರಲಿದೆ.

ಲೋವರ್​​ ಆರ್ಡರ್​​ನಲ್ಲಿ ಗ್ಲೆನ್​ ಮ್ಯಾಕ್ಸ್​​ವೆಲ್​, ದಿನೇಶ್​ ಕಾರ್ತಿಕ್​ ಆಡಿದ್ರೆ, ಆರ್​​ಬಿಯ ಬಲ ದುಪ್ಪಟ್ಟಾಗಲಿದೆ. ಅನುಭವಿಗಳಾದ ಇಬ್ಬರೂ ಒತ್ತಡವನ್ನ ನಿಭಾಯಿಸಬಲ್ಲರು. ಫಿನಿಷರ್​ ರೋಲ್​ ಪ್ಲೇ ಮಾಡುವ ಕಲೆ ಇಬ್ಬರಲ್ಲೂ ಇದ್ದು, ಡೆತ್​ ಓವರ್​​ಗಳಲ್ಲಿ ರನ್​ ಕೊಳ್ಳೆ ಹೊಡೆಯಬಲ್ಲರು.

ಇನ್ನು ಒಂದು ಪಂದ್ಯ ಆಡಿ ಬಳಿಕ ಬೆಂಚ್​ಗೆ ಸೀಮಿತವಾಗಿರುವ ಕರಣ್​ ಶರ್ಮಾಗೆ ಮತ್ತೆ ಅವಕಾಶ ನೀಡಬೇಕು. ಅನುಭವಿ ಸ್ಪಿನ್ನರ್ ಕಮ್​ಬ್ಯಾಕ್​​ ಸ್ಪಿನ್​ ವಿಭಾಗದ ಬಲ ಹೆಚ್ಚಿಸಲಿದೆ. ಮಯಾಂಕ್​ ಡಾಗಾರ್​​ಗಿಂತ ಕರಣ್​ ಶರ್ಮಾ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ.

ಆರ್​​​ಸಿಬಿಯ ಬೌಲಿಂಗ್​ ಡಿಪಾರ್ಟ್​​ಮೆಂಟ್​ಗೆ​ ಸರ್ಜರಿ ಮಾಡ್ಲೇಬೇಕಿದೆ. ಮೊಹಮ್ಮದ್​ ಸಿರಾಜ್​, ರೀಸಿ ಟೋಪ್ಲಿ ಜೊತೆಗೆ ವೇಗಿ ವೈಶಾಖ್​ ವಿಜಯ್​ ಕುಮಾರ್​​​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡಬೇಕಿದೆ. ಮೂವರು ವೇಗಿಗಳ ಬಲ ಬೌಲಿಂಗ್​ ವಿಭಾಗದ ಸ್ಟ್ರೆಂಥ್​ ಹೆಚ್ಚಿಸಲಿದೆ.

ಮಹಿಪಾಲ್​ ಲೋಮ್ರೋರ್​, ಯಶ್​ ದಯಾಳ್​ರನ್ನ ಇಂಪ್ಯಾಕ್ಟ್​ ಪ್ಲೇಯರ್ ಅವಕಾಶದಲ್ಲಿ ಟಾಸ್​ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಡಿಸಬೇಕಿದೆ. ಮೊದಲು ಬ್ಯಾಟಿಂಗ್​ ಆದ್ರೆ ಲೋಮ್ರೋರ್​, ಬೌಲಿಂಗ್​ ಆದ್ರೆ ಯಶ್​​ ದಯಾಳ್​ರನ್ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸಿ, ಇನ್ನಿಂಗ್ಸ್​ ಅಂತ್ಯದ ಬಳಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಷ್ಟು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದ್ರೆ, ಗೆಲುವಿನ ಹಳಿಗೆ ಮರಳೋದು ಆರ್​​ಸಿಬಿಗೆ ಕಷ್ಟದ ವಿಚಾರವೇನಲ್ಲ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...