ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್ಗಳ ನಡುವೆ ಓವರ್ ಟೇಕ್ ಮಾಡುವಾಗ ಘರ್ಷಣೆ ಸಂಭಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯ ಮಾದಾವರದ ಬಳಿ ಇಂದು ಮುಂಜಾನೆ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ. ಮಾದಾವರದ ಹೆದ್ದಾರಿಯಲ್ಲಿ ಒಂದು ಕೆಎಸ್ಆರ್ಟಿಸಿ ಬಸ್ ಅನ್ನು, ಇನ್ನೊಂದು ಬಸ್ ಓವರ್ ಟೇಕ್ ಮಾಡುತ್ತಿತ್ತು. ಆಗ ಎರಡು ಬಸ್ಗಳ ನಡುವೆ ಭಯಾನಕ ಅಪಘಾತವಾಗಿದೆ. ಇದರಿಂದ ಎರಡು ಬಸ್ಗಳು ಮೇಲು ಸೇತುವೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಹೆದ್ದಾರಿಗೆ ಅಡ್ಡವಾಗಿ ನಿಂತಿವೆ.
ಈ ಅವಘಡದಿಂದ ಬೇರೆ ವಾಹನಗಳು ಹೆದ್ದಾರಿಯಲ್ಲಿ ಚಲಿಸದಂತೆ ಆಗಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಂದು ಭಾನುವಾರವಾದ್ದರಿಂದ ತೀರ್ಥ ಕ್ಷೇತ್ರಕ್ಕೆ, ದೇವಾಲಯಗಳಿಗೆ ಹೋಗುತ್ತಿದ್ದ ಸವಾರರು, ಪ್ರಯಾಣಿಕರಿಗೆ ಬಸ್ಗಳ ಅಪಘಾತದಿಂದ ಟ್ರಾಫಿಕ್ ಬಿಸಿ ತಟ್ಟಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)