KSRTC ಮುಷ್ಕರಕ್ಕೆ ಬೆಂಬಲ ನೀಡದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ: ಗೂಗಲ್ ಮೀಟ್ನಲ್ಲಿ ನೌಕರನಿಗೆ ಬೆದರಿಕೆ- ದೂರು ದಾಖಲು

ತುಮಕೂರು: ಸಾರಿಗೆ ನಿಗಮದ ದಾವಣಗೆರೆ ವಿಭಾಗದ ಜೂನಿಯರ್ ಆಸಿಸ್ಟೆಂಟ್ ಕಂ ಡಾಟಾ ಎಂಟ್ರಿ ಆಪರೇಟರ್ ಪ್ರಸ್ತುತ ಎರವಲು ಸೇವೆ ಸಾರಿಗೆ ಇಲಾಖೆ ಮತ್ತು ಕೆಎಸ್ಆರ್ಟಿಸಿ ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಂಗಳೂರು ಅಧ್ಯಕ್ಷ ಓಂಕಾರ್ ಸೇರಿದಂತೆ ಎಂಬುವರು ಆ.5ರಂದು ಜಂಟಿ ಕ್ರಿಯಾ ಸಮಿತಿಯವರು ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಲು ಜುಲೈ 30ರಂದು ಗೂಗಲ್ ಮೀಟಿಂಗ್ ಸಭೆ ಆಯೋಜಿಸಿದ್ದರು.
ಈ ವೇಳೆ ವಿಭಾಗ ಹಾಗೂ ಘಟಕ ಮಟ್ಟದ ನೌಕರರನ್ನು ಮುಷ್ಕರ ಮಾಡಲು ಪ್ರಚೋದನೆ ಮಾಡಿ ಹಾಗೂ ಮುಷ್ಕರ ಮಾಡುವುದಿಲ್ಲ ಎಂದು ಹೇಳಿದ ನೌಕರರಿಗೆ ಬೆದರಿಕೆ ಹಾಕುತ್ತಿದ್ದು ಓಂಕಾರ್ ಸೇರಿದಂತೆ ಹಲವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆಯ ನೌಕರ ಸೈಯದ್ ಸಾಧಿಕ್ ಎಂಬುವರು ತುಮಕೂರು ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಶಿರಾ ಘಟಕ ಚಾಲಕ ಕಂ ನಿರ್ವಾಹಕ ಸೈಯದ್ ಸಾಧಿಕ್ ಅವರು ಈ ಸಂಬಂಧ ಘಟಕ ವ್ಯವಸ್ಥಾಪಕರ ಮೂಲಕ ಡಿಸಿ ಅವರಿಗೆ ಆ.1ರಂದು ದೂರು ನೀಡಿದ್ದಾರೆ. ಸಾಧಿಕ್ ಜುಲೈ 30ರಂದು ಕರ್ತವ್ಯ ಮುಗಿಸಿ ಫೋನ್ಲ್ಲಿ ವಾಟ್ಸಾಪ್ ನೋಡುವ ಸಂದರ್ಭದಲ್ಲಿ ಗೂಗಲ್ ಮೀಟ್ ಲಿಂಕ್ ಬಂದಿರುವುದು ನೋಡಿದ್ದಾರೆ.
ಹೀಗಾಗಿ ಆದರಲ್ಲಿ ವೇತನಕ್ಕೆ ಹಾಗೂ ಮುಷ್ಕರಕ್ಕೆ ಸಂಬಂಧಿಸಿದ ವಿಚಾರವನ್ನು ನೋಡಿ ಸಹಜವಾಗಿ ಕುತೂಹಲದಿಂದ ಗೂಗಲ್ ಮೀಟ್ಗೆ ಜಾಯಿನ್ ಆದೇ ಈ ಗೂಗಲ್ ಮೀಟ್ ಸಭೆಯನ್ನು ಓಂಕಾರ್ ಆಯೋಜಿಸಿದ್ದು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯ ಕೆಲವು ನೌಕರರು ಚರ್ಚೆ ಮಾಡುತ್ತಿದ್ದರು. ಅವರವರು ಅವರ ಅಭಿಪ್ರಾಯ ಮತ್ತು ಸಲಹೆ ನೀಡಿದ್ದು, ಈ ವೇಳೆ ಮಂಡ್ಯ ವಿಭಾಗದ ಪ್ರಸಾದ್ ಹಾಗೂ ಶ್ರೀಧರ್ ಎಂಬುವರು ಮುಷ್ಕರಕ್ಕೆ ಬೆಂಬಲ ನೀಡುವ ಹಾಗೂ ಸಂಪೂರ್ಣ ಬಸ್ ಕಾರ್ಯಾಚರಣೆ ಬಂದ್ ಮಾಡುವ ವಿಚಾರ ಮಾತನಾಡಿದರು.
ನಂತರ ತುಮಕೂರು ವಿಭಾಗದಿಂದ ಮಾತನಾಡಿದ ಪುಟ್ಟಯ್ಯ ಕೆ.ವಿ ಚಾಲಕ ಕಂ ನಿರ್ವಾಹಕ ಘಟಕ-01 ಅವರು, ತುಮಕೂರು ವಿಭಾಗದಲ್ಲಿ ಶಿರಾ ಘಟಕ ಹೊರತು ಪಡಿಸಿ ಬಾಕಿ ಎಲ್ಲ ಘಟಕಗಳ ಕಾರ್ಮಿಕರೊಂದಿಗೆ ಈಗಾಗಲೆ ಚರ್ಚೆ ಮಾಡಿದ್ದು ನಾವು ಎಲ್ಲರೂ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.
ಹೀಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಶ್ರೀಧರ್ ಮದ್ದೂರ್ ಘಟಕ ಹಾಗೂ ಪ್ರಸನ್ನ ಕುಮಾರ್ ಜೂನಿಯರ್ ಆಸಿಸ್ಟಂಟ್ ಚಿಕ್ಕಮಗಳೂರು ಇವರು ಮುಷ್ಕರ ಮಾಡಲು ಒಪ್ಪದ ನನ್ನ ಮೇಲೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈದು ಮುಷ್ಕರಕ್ಕೆ ಬೆಂಬಲ ನೀಡದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ ಹೇಗೆ ನೀನು ಕರ್ತವ್ಯ ನಿರ್ವಯಿಸುತ್ತೀಯೇ ನಾವು ನೋಡುತ್ತೇವೆ ಎಂದು ಬೆದರಿಕೆ ಸಹ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಗೂಗಲ್ ಮೀಟ್ ಸಭೆಯನ್ನು ಸಾರಿಗೆ ಮುಷ್ಕರ ಮಾಡಲು ಪ್ರಚೋದನೆ ನೀಡಲು ಹಾಗೂ ಮುಷ್ಕರ ಮಾಡಲು ನಿರಾಕರಣೆ ಮಾಡುವ ನೌಕರರಿಗೆ ಬೆದರಿಕೆ ಹಾಕಿ ಮುಷ್ಕರ ಮಾಡಿಸಲು ಆಯೋಜಿಸಿರುವ ಸಭೆ ಆಗಿತ್ತು. ಆದ್ದರಿಂದ ಈ ಗೂಗಲ್ ಮೀಟ್ ಸಭೆ ಆಯೋಜಿಸಿದ ಓಂಕಾರ್, ಪುಟ್ಟಯ್ಯ ಕೆ.ವಿ ಹಾಗೂ ಮುಷ್ಕರ ಮಾಡುವುದಿಲ್ಲ ಎಂದ ನನಗೆ ಹಾಗೂ ಇತರೆ ನೌಕರರಿಗೆ ಕೆಟ್ಟ ಪದಗಳಿಂದ ಬೈದು ಬೆದರಿಕೆ ಹಾಕಿರುವ ಶ್ರೀಧರ್, ಪ್ರಸನ್ನ ಕುಮಾರ್ ಇವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ, ವಂದನೆಗಳೊಂದಿಗೆ ಎಂದು ಸೈಯಾದ್ ಸಾಧಿಕ್ ದೂರು ನೀಡಿದ್ದಾರೆ.
ನಿನ್ನೆ ದೂರು ಸ್ವೀಕರಿಸಿರುವ ಡಿಎಂ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಇನ್ನಷ್ಟೆ ಗೊತ್ತಾಗಬೇಕಿದೆ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...