₹5 ಸಾವಿರ ಕೊಟ್ಟರೆ ಕೆಲಸಕ್ಕೆ ವಾಪಸ್ ಬರುತ್ತೀಯೆ ನೋಡು: ವಜಾಗೊಂಡ ನೌಕರರ ಸುಲಿಗೆಗೆ ನಿಂತರೆ ಸಾರಿಗೆ ಸಂಘಟನೆಯೊಂದರ ಮುಖಂಡರು..?

- 2021ರ ಮುಷ್ಕರದ ವೇಳೆ ವಜಾಗೊಂಡಿರುವ ಯಾರು ಕೂಡ ಹಣ ಕೊಡಬೇಡಿ
- ನಿಮ್ಮ ಎಲ್ಲ ಕೇಸ್ಗಳು ಅತೀ ಶೀಘ್ರದಲ್ಲೇ ಇತ್ಯರ್ಥವಾಗಲಿವೆ
- ಸುಳ್ಳು ಹೇಳಿ ನಿಮ್ಮಿಂದ ಹಣ ಪೀಕಲು ಬರುತ್ತಿದ್ದಾರೆ ಹುಷಾರ್
ಬೆಂಗಳೂರು: 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ನೂರಕ್ಕೂ ಹೆಚ್ಚು ಪೊಲೀಸ್ ಕೇಸ್ಗಳು ಇತ್ಯರ್ಥವಾಗುವ ಹಂತ ತಲುಪಿವೆ. ಇನ್ನು ಈ ನಡುವೆ ಈ ಕೇಸ್ ವಾಪಸ್ ಪಡೆಯಲು ಅಧಿಕಾರಿಗಳಿಗೆ ಹೇಳುತ್ತೇವೆ. ಆದರೆ ಅವರಿಗೆ 5 ಸಾವಿರ ರೂ. ಲಂಚ ಕೊಡಬೇಕು ಎಂದು ಸಾರಿಗೆ ಸಂಸ್ಥೆಯ ಸಂಘಟನೆಯೊಂದರ ಪದಾಧಿಕಾರಿಗಳು ಪೊಲೀಸ್ ಕೇಸ್ ದಾಖಲಾಗಿರುವ ನೌಕರರ ಬೆನ್ನುಬಿದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಂದರೆ, 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಬಸ್ ಚಾಲನೆ ಮಾಡಿದ ನೌಕರರಿಗೆ ಮುಷ್ಕರದ ಸಮಯದಲ್ಲಿ ಬಸ್ ಏಕೆ ಓಡಿಸುತ್ತಿದ್ದೀಯ ಎಂದು ಕೇಳಿದ ಕಾರಣ ಬಿಎಂಟಿಸಿ ಆಡಳಿತ ಮಂಡಳಿ ಫೋನ್ ಮಾಡಿರುವವರ ವಿರುದ್ಧ ಪೊಲೀಸ್ ಕೇಸನ್ನು ದಾಖಲಿಸಿ ಕೆಲಸದಿಂದ ವಜಾ ಮಾಡಿದೆ.
ಈ ಆಡಳಿತ ಮಂಡಳಿ ದಾಖಲಿಸಿರುವ ಪೊಲೀಸ್ ಕೇಸ್ಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ 98 ಕೇಸುಗಳು ಇದ್ದು, ಈ ಕೇಸ್ಗಳನ್ನು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಹಿಂಪಡೆಯುವ ಬಗ್ಗೆ ಅಂತಿಮಘಟ್ಟ ತಲುಪಿದ್ದು ಅತೀ ಶೀಘ್ರದಲ್ಲೇ ಈ ಎಲ್ಲ ಕೇಸ್ಗಳನ್ನು ಆಡಳಿತ ಮಂಡಳಿ ಹಿಂಪಡೆಯಲಿದೆ. ಹೀಗಾಗಿ ಇದನ್ನು ತಿಳಿದ ಸಾರಿಗೆ ನೌಕರರ ಸಂಘಟನೆಯೊಂದರ ಮುಖಂಡರು ವಜಾಗೊಂಡಿರುವ ನೌಕರರಿಗೆ ಫೋನ್ ಮಾಡಿ ಲಂಚಕೊಟ್ಟರೆ ನಿಮ್ಮ ಕೇಸ್ ವಾಪಸ್ ಪಡೆಯುತ್ತಾರೆ ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹೆದರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಜಾಗೊಳಿಸಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ನಡೆಸುತ್ತಿರುವ ನೌಕರರೊಬ್ಬರಿಗೆ ಸಂಘಟನೆಯ ಮುಖಂಡನೊಬ್ಬ ಫೋನ್ ಮಾಡಿ ಸರ್ಕಾರದಿಂದ ಕೇಸು ಹಿಂಪಡೆಯಲು ಅಧಿಕಾರಿಗಳಿಗೆ 5 ಸಾವಿರ ರೂ. ಲಂಚ ಕೊಡಬೇಕು. ಮೊದಲಿಗೆ 3000 ರೂ. ಕೊಡು ಕೇಸು ವಾಪಸ್ ಪಡೆದ ನಂತರ ಉಳಿದ 2,000 ಕೊಡುವೆಯಂತೆ ಎಂದು ಹೇಳಿದ್ದಾನೆ.
ಅದಕ್ಕೆ ನೌಕರ ನಾನು ಫೋನ್ ಪೇ ಮಾಡುತ್ತೇನೆ ಎಂದರೆ ಬೇಡ ಬೇಡ ನಗದನ್ನುತಂದು ಕೊಡು ಎಂದು ಹೇಳಿದ್ದಾನೆ. ಕಾರಣ ಫೋನ್ ಪೇ ಗೂಗಲ್ ಪೇ ಆದರೆ ದಾಖಲೆಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಹಿಡಿದುಕೊಂಡು ಕೇಸ್ ಹಾಕಿದರೆ ನಾವು ಸಿಕ್ಕಿಕೊಳ್ಳುತ್ತೇವೆ ಎಂಬ ಭಯ. ಇನ್ನು ವಜಾಗೊಂಡ ಈ ನೌಕರ ತನ್ನ ಅಸಹಾಯಕತೆ ಮತ್ತು ತಾನು ಕಷ್ಟದಲ್ಲಿ ಇದ್ದೇನೆ ಎಂದರೂ ಮಾನವೀಯತೆ ಇಲ್ಲದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಮಹಾನ್ ಸಂಘಟನೆಯ ನಾಯಕರೆಸಿನಿಕೊಂಡಿರುವ ಭ್ರಷ್ಟರು.
ಇದಿಷ್ಟೆ ಅಲ್ಲ ಈ ಸಂಘಟನೆಯಲ್ಲಿರುವ ಗೋಮುಖವ್ಯಾಘ್ರಗಳು ಅಧಿಕಾರಿಗಳು ಹಾಗೂ ಕೆಲ ಸಿಬ್ಬಂದಿಗಳನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಸಾರಿಗೆ ಸಂಸ್ಥೆಯ ಸೊಸೈಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅದನ್ನು ಬಯಲಿಗೆ ಎಳೆಯುತ್ತೇವೆ ಎಂದು ಹೆದರಿಸಿ ಸುಲಿಗೆ ಮಾಡುವುದು. ಸೊಸೈಟಿಗಳ ಚುನಾವಣೆಗಳಲ್ಲಿ ಬಂದು ಅಪಪ್ರಚಾರ ಮಾಡಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹಣ ಮಾಡುವುದು.
ಮುಷ್ಕರದ ಸಮಯದಲ್ಲಿ ವಜಾಗೊಂಡು ಪುನರ್ ನೇಮಕಗೊಂಡ ತರಬೇತಿ ಮತ್ತು ಪ್ರೊಬೇಷನರಿ ನೌಕರರಿಗೆ ಅವರಿಗೆ ಬೇಕಾದ ಘಟಕಗಳನ್ನು ಹಾಕಿಸಿ ಕೊಡುತ್ತೇವೆ ಎಂದು ನೌಕರರಿಂದ ಹಣ ಸುಲಿಗೆ ಮಾಡಿರುವುದು. (ಈ ಬಗ್ಗೆ ಈ ಹಿಂದೆ ಕೇಂದ್ರ ಕಚೇರಿಗೆ ದೂರು ನೀಡಲಾಗಿದೆ). ಭ್ರಷ್ಟಾಚಾರ ಬಯಲಿಗೆ ಯಲ್ಲಿಯುತ್ತೇವೆ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿರುವುದು.
ಇತ್ತೀಚೆಗೆ ಕೆಎಸ್ಆರ್ಟಿಸಿ ನಿಗಮದ ಒಂದು ವಿಭಾಗದ ನಿಯಂತ್ರಣಾಧಿಕಾರಿಗೆ ಬೆದರಿಕೆ ಹಾಕಿ ಸುಮಾರು 50 ಸಾವಿರ ರೂ.ಗಳನ್ನು ಸುಲಿಗೆ ಮಾಡಿರುವುದು. ಒಂದು ಘಟಕದ ಎಟಿಎಸ್ ಒಬ್ಬರನ್ನು ವರ್ಗಾವಣೆ ಮಾಡಿಸುತ್ತೇವೆ ಎಂದು ನೌಕರರಿಂದಲೇ ಸುಲಿಗೆ ಮಾಡಿರುವುದು. ಒಂದು ನಿಗಮದಿಂದ ಮತ್ತೊಂದು ನಿರ್ಗಮಕ್ಕೆ ಮುಂಬಡ್ತಿಯಾಗಿ ಹೋಗುವ ಅಧಿಕಾರಿಗಳಿಂದ ಅವರ ಭ್ರಷ್ಟಾಚಾರವನ್ನು ಬಯಲಿಗೆ ತರುತ್ತೇವೆ ಎಂದು ಹೆದರಿಸಿ ಸುಲಿಗೆ ಮಾಡುತ್ತಿರುವುದು.
ಇನ್ನು ಪ್ರಮುಖವಾಗಿ ಅನುಕಂಪದ ಉದ್ಯೋಗ ಪಡೆಯಲು ಬರುವ ಮೃತಪಟ್ಟ ನೌಕರರ ಕುಟುಂಬ ಸದಸ್ಯರಿಂದಲೂ ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೆ ಬೇರೆ ಸಂಘಟನೆಗಳು ಭ್ರಷ್ಟಾಚಾರ ಮಾಡುತ್ತಿವೆ ಎಂದು ಕಿಡಿಕಾರುವ ಇವರು ಕೆಲಸದಿಂದ ವಜಾಗೊಂಡಿದ್ದರೂ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದರೆ ಇವರಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಯೋಚನೆ ಮಾಡಬೇಕಿದೆ.
ಇನ್ನು ಸಾರಿಗೆ ನಿಗಮವೊಂದರಲ್ಲಿ ಕೆಲವು ಗೌಪ್ಯ ಮಾಹಿತಿಗಳನ್ನು ಕದ್ದು ಸಂಬಂಧಪಟ್ಟ ನೌಕರರು ಮತ್ತು ಅಧಿಕಾರಿಗಳಿಂದ ಸುಲಿಗೆ ಮಾಡಿರುವ ವಿಚಾರ ಆಡಳಿತ ಮಂಡಳಿಗೆ ತಿಳಿದ ಬಳಿಕ ಮೇಲಧಿಕಾರಿಗಳು ಭ್ರಷ್ಟರಿಗೆ ಲಂಚಕೊಟ್ಟ ಅಧಿಕಾರಿಯೊಬ್ಬರನ್ನು ಹಲವು ತಿಂಗಳವರೆಗೆ ಆ ಹುದ್ದೆಯಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿರುವುದು ಕೂಡ ಗುಟ್ಟಾಗೇನು ಉಳಿದಿಲ್ಲ.
ಹೀಗಾಗಿ ನೌಕರರೇ ಮತ್ತೆ ಈ ನಾಯಕರೆನಿಸಿಕೊಂಡ ಕಿಡಿಗೇಡಿಗಳು ನೌಕರರಿಗೆ ಅನ್ಯಾಯವಾಗುತ್ತಿದೆ ನೌಕರರು ತುಂಬಾ ಕಷ್ಟ ಪಡುತ್ತಿದ್ದಾರೆ ಅವರಿಗೆ ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಹೈಡ್ರಾಮಾ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸಿ ನಿಮ್ಮನೇ ಪ್ರಚೋದನೆ ಮಾಡಿ ಹಳ್ಳಕ್ಕೆ ತಳ್ಳುವ ಹುನ್ನಾರವನ್ನು ಮಾಡುತ್ತಿದ್ದಾರೆ. ಹೀಗಾಗಿ ಇಂಥ ಸಂಘಟನೆಗಳ ಬಗ್ಗೆ ಹಾಗೂ ಇಂಥ ಡೋಂಗಿ ನಾಯಕರ ಬಗ್ಗೆ ಹುಷಾರಾಗಿರಿ. ನಾಳೆ ದಿನ ನೀವು ಇವರ ಮಾತು ನಂಬಿ ಬೀದಿಗಿಳಿದರೆ ನಿಮಗೇ ತೊಂದರೆ. ಈ ತೊಂದರೆ ಹಾಗೂ ಸಮಸ್ಯೆ ನಿವಾರಣೆ ಮಾಡುವ ನೆಪದಲ್ಲಿ ನಿಮ್ಮನ್ನು ಮತ್ತೆ ಸುಲಿಗೆ ಮಾಡಲು ಬರುತ್ತಾರೆ ಜೋಪಾನ.
Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...