NEWSನಮ್ಮಜಿಲ್ಲೆಬೆಂಗಳೂರು

ನವೆಂಬರ್‌ ಮೊದಲ ವಾರದಲ್ಲೇ ನಿವೃತ್ತ ನೌಕರರ ಹಣ ಕೊಟ್ಟರೆ ಅನುಕೂಲ: ಸಾರಿಗೆ ಸಚಿವರಿಗೆ ಸಮಿತಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ನಿವೃತ್ತ ಸಾರಿಗೆ ನೌಕರರಿಗೆ ಬರಬೇಕಿರುವ ಎಲ್ಲ ಬಾಕಿ ಹಣವನ್ನು ನವೆಂಬರ್‌ ಮೊದಲವಾರದಲ್ಲೇ ಕೊಟ್ಟರೆ ಅನುಕೂಲವಾಗಲಿದೆ ಎಂದು ಹುಬ್ಬಳ್ಳಿಯ ಸೇವಾ ನಿವೃತ್ತಿ ನೌಕರರ ಬಾಕಿ (ವೇತನ, ಗ್ರಾಚ್ಯುಟಿ, ನಿವೃತ್ತಿ ಗಳಿಕೆ ರಜೆ ನಗಧೀಕರಣ ಹಾಗೂ ಇನ್ನಿತರ ಸೌಲಭ್ಯಗಳು) ಬರುವ ಹೋರಾಟ ಸಮಿತಿ ಮನವಿ ಮಾಡಿದೆ.

ಈ ಕುರಿತು ಸಾರಿಗೆ ಸಚಿವ ರಾಮಲಿಗಾರೆಡ್ಡಿ ಅವರಿಗೆ ಭಾನುವಾರ ಹುಬ್ಬಳ್ಳಿಯಲ್ಲಿ  ಸಮಿತಿಯ ಪದಾಧಿಕಾರಿಗಳು ಹನುಮಂತ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ.

ಆ ಮನವಿ ಪತ್ರದಲ್ಲಿ  ಸೇವಾ ವಿಮುಕ್ತಿ ನಿವೃತ್ತಿ/ ನಿಧನ/ ಸ್ವಯಂ ನಿವೃತ್ತಿ ನೌಕರರಿಗೆ 1-1-2020 ರಿಂದ 28- 2-2023 ರವರೆಗಿನ ಅವಧಿಗೆ ಶೇಕಡಾ 15ರ ವೇತನ ಹೆಚ್ಚಳದ ವ್ಯತ್ಯಾಸದ ಉಪಧನ ಮತ್ತು ನಿವೃತ್ತಿ ಗಳಿಕೆರಜೆ ನಗಧೀಕರಣ ಮೊತ್ತವನ್ನು ನವೆಂಬರ-2024 ರೊಳಗಾಗಿ ಪಾವತಿಸಲಾಗುವುದು ಎಂದು ನೀವೆ ತಿಳಿಸಿದ್ದೀರಿ.

9-10-2024 ರಲ್ಲಿ ವಿಧಾನಸೌಧದಲ್ಲಿ  ನಡೆದ ಸಭೆಯಲ್ಲಿ ಈ ಬಗ್ಗೆ ತಿಳಿಸಿದ್ದು, ಇದರಿಂದಾಗಿ ರಾಜ್ಯದ ನಿವೃತ್ತ ಸಿಬ್ಬಂದಿ ಮತ್ತು ಹಾಲಿ ಸಿಬ್ಬಂದಿಗಳ ಮೇಲೆ ನೀವು ಇಟ್ಟಿರುವ ವಿಶೇಷ ಕಾಳಜಿ ಎದ್ದು ಕಾಣುತ್ತಿದೆ. ಈ ತಮ್ಮ ಕರುಣೆಯ ನಿರ್ಧಾರಕ್ಕೆ ನಾವು ಚಿರರುಣಿ ಎಂದು ತಿಳಿಸಿದ್ದಾರೆ.

ಪ್ರಸ್ತುತ ನಮ್ಮ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಜೀವನದ ಜತೆಗೆ ಸದ್ಯ ದೀಪಾವಳಿ ಹಬ್ಬ ಬರುತ್ತಿದೆ. ಹೀಗಾಗಿ ಹಣದ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಈ ಹಣವನ್ನು ನಾವು ಹಿಂದೆ ಮನವಿಯಲ್ಲಿ ತಿಳಿಸಿದಂತೆ ನವೆಂಬರ ಮೊದಲನೇ ವಾರದಲ್ಲೇ ಪಾವತಿಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಎಂದು ಹನುಮಂತ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ ನಿರಂತರ ಮಳೆ- BBMP ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ: ತುಷಾರ್ ಗಿರಿನಾಥ್