ರಾಯಚೂರು: ಕಾನೂನು ಬಾಹಿರ ಮುಷ್ಕರದಲ್ಲಿ ಭಾಗವಹಿಸಿ ಕಾನೂನು ನಿಯಮಗಳು ಹಾಗೂ ನಿಗಮದ ಶಿಸ್ತು ಮತ್ತು ನಡೆತೆ ನಿಯಮಗಳ ಉಲ್ಲಂಘಿಸಿದ್ದೀರಿ ಎಂದು ದೇವದುರ್ಗ ಘಟಕ ಚಾಲಕ ಪ್ರಭು ಎಂಬುವರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಯಚೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಕಾರಣ ಕೇಳುವ ಸೂಚನಾ ಪತ್ರ ಕೊಟ್ಟಿದ್ದಾರೆ.
ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು ಕೈಗಾರಿಕ ವಿವಾದಗಳ ಅಧಿನಿಯಮ 1947 ರ ಕಲಂ 2(n)(vi) ರ ಮೇರೆಗೆ ಸಾರ್ವಜನಿಕ ಉಪಯುಕ್ತ ಸೇವೆ ಎಂದು ಘೋಷಿಸಲಾಗಿದ್ದು, ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅವರು 16-07-2025 ರಂದು ನೀಡಿದ ಮುಷ್ಕರ ನೋಟಿಸ್ ಕುರಿತಾಗಿ ಕಾರ್ಮಿಕ ಇಲಾಖೆ ಆಯುಕ್ತರ ಸಮಕ್ಷಮ ರಾಜೀ ಸಂಧಾನ ಮಾತುಕತೆ ಚಾಲ್ತಿಯಲ್ಲಿ ಇರುವುದರಿಂದ 5-08-2025 ರಿಂದ ನಡೆಸುತ್ತಿರುವ ಮುಷ್ಕರ ಕಾನೂನುಬಾಹಿರವಾಗಿದೆ.
ಅಲ್ಲದೆ ನಿಗಮವು ಸಲ್ಲಿಸುತ್ತಿರುವ ಸೇವೆಯನ್ನು ಕರ್ನಾಟಕ ಅಗತ್ಯ ವಸ್ತುಗಳ ಸೇವೆಗಳ ನಿರ್ವಹಣೆ ಕಾಯ್ದೆಯ ಕಲಂ 3(1) ರಡಿ ಅಗತ್ಯ ಸೇವೆ ಎಂದು ಘೋಷಿಸಿ ಮುಷ್ಕರವನ್ನು ನಿಷೇಧಿಸಲಾಗಿದೆ.
ಇದರ ಜತೆಗೆ ಆದರಣೀಯ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನ ಪೀಠವು WP 23602/2025 ಸುನಿಲ್ ಜೆ & ಇತರರು ಮತ್ತು ಕರ್ನಾಟಕ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ 4-08-2025 ರ ಆದೇಶದಡಿ, ಉದ್ದೇಶಿತ ಮುಷ್ಕರವನ್ನು ಆ.5ರವರೆಗೆ ಪ್ರತಿಬಂಧಿಸಿ ಆದೇಶಿಸಿದೆ.
ಆದಾಗ್ಯೂ, ನೀವು 5-08-2025 ರಂದು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ, ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟ ಮುಷ್ಕರದಲ್ಲಿ ‘ಕಾನೂನು ಬಾಹಿರ ಮುಷ್ಕರ’ ಎಂದು ತಿಳಿದೂ ಭಾಗವಹಿಸಿ, ಕಾನೂನಿನ ನಿಯಮಗಳು ಹಾಗೂ ನಿಗಮದ ಶಿಸ್ತು ಮತ್ತು ನಡತೆ ನಿಯಮಾವಳಿಗಳನ್ನು ಉಲ್ಲಂಘಿಸಿ, ನಿಗಮದ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡಿರುತ್ತೀರಿ.
ಈ ಕುರಿತಾಗಿ, ನಿಮ್ಮ ಮೇಲೆ ‘ಏಕೆ ಕಾನೂನು ಮತ್ತು ನಿಗಮದ ನಿಯಮಗಳಡಿ ಕ್ರಮ ಜರುಗಿಸಬಾರದು ಎಂಬುದಕ್ಕೆ ನಿಮ್ಮ ಸಮಜಾಯಿಷಿ, ಏನಾದರೂ ಇದ್ದಲ್ಲಿ 24 ಗಂಟೆಗಳೊಳಗೆ ಸಲ್ಲಿಸುವುದು ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಪರಿಭಾವಿಸಿ, ಕ್ರಮ ಜರುಗಿಸಲಾಗುವುದು. ಅಲ್ಲದೇ ಈ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ನಿನ್ನೆ ಕೊಟ್ಟಿರುವ ಸೂಚನಾ ಪ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ನೌಕರರಲ್ಲ ಸಂಘಟನೆಗಳು ಕರೆ ನೀಡುವ ಮುಷ್ಕರಕ್ಕೆ ನೌಕರರು ಬೆಂಬಲ ನೀಡುವುದು ಅಧಿಕಾರಿಗಳು ಈ ನೌಕರರಿಗೆ ಈರೀತಿ ಆರೋಪ ಮಾಡಿ ಬಳಿಕ ಸಂಸ್ಥೆಯ ನಿಯಾಮವಳಿ ಹೆಸರಿನಲ್ಲಿ ಅಮಾನತು, ವಜಾ, ವರ್ಗಾವಣೆ ಜತೆಗೆ ಪೊಲೀಸ್ ಕೇಸ್ ಹಾಕಿ ಅಲೆಸುವುದು. ಇಲ್ಲಿ ಈ ರೀತಿ ನಡೆಯುವ ಮುಷ್ಕರದಿಂದ ಇದೇ ಡಿಸಿ, ಡಿಎಂಗಳಿಗೂ ಆರ್ಥಿಕ ಲಾಭ ಆಗುತ್ತದೆ ಆದರೂ ನೌಕರರ ಮೇಲೆ ಇವರು ಕ್ರಮ ತೆಗೆದುಕೊಳ್ಳುತ್ತಾರೆ.
ಇನ್ನು ಮುಷ್ಕರಕ್ಕೆ ಕರೆ ನೀಡುವ ಈ ಸಂಘಟನೆಗಳು ಡಿಪೋಗಳ ಗೇಟ್ನಲ್ಲಿ ನಿಂತು ಚಾಲನಾ ಮತ್ತ ತಾಂತ್ರಿಕ ಸಿಬ್ಬಂದಿಗಳನ್ನು ಮಾತ್ರ ಕರೆಯುತ್ತಾರೆ. ಏಕೆ ಡಿಎಂಗಳಿಗೆ ವೇತನ ಹೆಚ್ಚಳವಾಗುವುದಿಲ್ಲವೇ ಅವರನ್ನು ಏಕೆ ಕರೆಯುವುದಿಲ್ಲ. ಅದಕ್ಕೆ ಇವರ ಬಳಿ ಉತ್ತರವೂ ಇದೆ ಅದೇ ಅಧಿಕಾರಿಗಳು ಕಾರ್ಮಿಕರ ಕಾಯ್ದೆಯಡಿ ಬರುವುದಿಲ್ಲ ಅದಕ್ಕೆ ಅವರನ್ನು ಕರೆಯುವುದಿಲ್ಲ ಎಂದು ಹೇಳುತ್ತಾರೆ.
ಇನ್ನಾದರೂ ಇದನ್ನು ಬಿಟ್ಟು ನಾವು ಸಂಸ್ಥೆಯ ನೌಕರರು ಎಂದು ಪ್ರಯೊಬ್ಬರೂ ಈ ಒಂದು ಹೋರಾಟಕ್ಕೆ ನಿಲ್ಲಬೇಕು. ಆಗ ಮಾತ್ರ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಇಲ್ಲದಿದ್ದರೆ ಈ ರೀತಿಯ ಸರ್ಕಾರ ಕೊಡೊಲ್ಲ ಅನ್ನೋದು ಇತ್ತ ಸಂಸ್ಥೆಯ ನೌಕರರಲ್ಲದ ಸಂಘಟನೆಗಳು ಬಂದು ಬರಿ ಚಾಲನಾ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡೋದು ತಪ್ಪುವುದಿಲ್ಲ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...