CRIMENEWSನಮ್ಮಜಿಲ್ಲೆ

KSRTC: ಬೈಕ್‌ಗೆ ಆಟೋ ಡಿಕ್ಕಿ- ಸಾರಿಗೆ ಘಟಕ ವ್ಯವಸ್ಥಾಪಕ ಮೃತ, ಮತ್ತೊಬ್ಬರಿಗೆ ಗಾಯ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

 ಬೆಂಗಳೂರು: ಆಟೋ ಮತ್ತು ಬೈಕ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಪೋ 4ರ ವ್ಯವಸ್ಥಾಪಕರು ಮೃತಪಟ್ಟಿರುವ ದಾರುಣ ಘಟನೆ ಶಾಂತಿನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಇಂದು ಮುಂಜಾನೆ ಸುಮಾರು 6.30ರಲ್ಲಿ ಬಿಟಿಎಸ್‌ ರಸ್ತೆಯಲ್ಲಿ (ಶಾಂತಿನಗರ) ಚಾಲಕನ ನಿಯಂತ್ರಣ ತಪ್ಪಿದ ಆಟೋ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಎಸ್‌‍ಆರ್‌ಟಿಸಿ (AWS) ಡಿಪೋ ಮ್ಯಾನೇಜರ್‌, ಬಿಟಿಎಂ ಲೇಔಟ್‌ ನಿವಾಸಿ ಕುಮಾರ್‌ (41) ಮೃತಪಟ್ಟಿದ್ದಾರೆ.

ಕುಮಾರ್‌ ಕೆಎಸ್‌‍ಆರ್‌ಟಿಸಿ 4ನೇ ಡಿಪೋನಲ್ಲಿ ಘಟಕ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಕುಮಾರ್‌ ಅವರು ಹೆಲ್ಮೇಟ್‌ ಧರಿಸದೆ ಬೈಕ್‌ನಲ್ಲಿ ಬಿಟಿಎಸ್‌‍ ರಸ್ತೆಯ ಮೆಡಿಕಲ್‌ ಸೆಂಟ್ರಲ್‌ ಎದುರು ಹೋಗುತ್ತಿದ್ದಾಗ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿದ ಆಟೋವೊಂದು ಇವರ ಬೈಕ್‌ ಸೇರಿದಂತೆ ಎರಡು ಬೈಕ್‌ಗಳೀಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಕುಮಾರ್‌ ಅವರು ಗಂಭೀರ ಗಾಯಗೊಂಡದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ಖಚಿತಪಡಿಸಿದ್ದಾರೆ. ವಿಕ್ಟೋರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.

ಮತ್ತೊಂದು ಬೈಕ್‌ನ ಸವಾರಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತ ಅಪಘಾತ ಮಾಡಿದ ಗಾಬರಿಯಲ್ಲಿ ಆಟೋ ಚಾಲಕ ಒಂದು ಕಿಲೋ ಮೀಟರ್‌ ಮುಂದೆಹೋಗಿ ಆಟೋ ನಿಲ್ಲಿಸಿ ಪರಾರಿಯಾಗಿದ್ದಾನೆ. ಗಾಬರಿಯಲ್ಲೇ ಆಟೋ ಚಾಲಕ ತನ್ನ ಮೊಬೈಲ್‌ಫೋನ್‌ ಕೂಟ ಆಟೋದಲ್ಲೇ ಬಿಟ್ಟು ಹೋಗಿದ್ದಾನೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ವಿಲ್ಸನ್‌ಗಾರ್ಡನ್‌ ಸಂಚಾರಿ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಆಟೋವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ಆಟೋ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!