- ನಮ್ಮ ಸಾರಿಗೆ ನಿಗಮದಲ್ಲಿ ಎಂಡಿ, ಡಿಪಿಯವರನ್ನು ಹೊರೆತುಪಡಿಸಿದರೆ ಉಳಿದ ನಾವೆಲ್ಲರೂ ಕೂಡ ಸಾರಿಗೆ ಸಿಬ್ಬಂದಿಗಳೇ ಅಲ್ಲವೇ?
ಹೋರಾಟ ಅನ್ನೋದು ಅನ್ಯಾಯಕ್ಕೆ ಒಳಗಾದ ಪ್ರತಿಯೊಬ್ಬ ಪ್ರಜೆಯ ಹಾಗೂ ನೌಕರರ ಜನ್ಮಸಿದ್ದ ಹಕ್ಕು ಎನ್ನುವುದರಲ್ಲಿ ಯಾವುದೇ ಸಂಶಯಬೇಡ. ವಾಸ್ತವ ಹೀಗಿರುವಾಗ ನಮ್ಮ ಬೇಡಿಕೆ ಈಡೇರಿಕೆಗಾಗಿ ಚಾಲಕರು, ನಿರ್ವಾಹಕರು, ತಾಂತ್ರಿಕಸಿಬ್ಬಂದಿಗಳು ರಸ್ತೆಗಿಳಿದು ಎಲ್ಲ ನಮ್ಮ ಸಾರಿಗೆಯ ಸಿಬ್ಬಂದಿಗಳ ಪರವಾಗಿ ಹೋರಾಟಕ್ಕೆ ನಿಂತರೆ ಅಧಿಕಾರಿ ವರ್ಗದವರು ಕೂಡ ಸರದಿಸಾಲಿನಲ್ಲಿ ನಿಂತು ಹೋರಾಡಬೇಕಾ..?. ಇಲ್ಲ ಎಲ್ಲರ ಪರವಾಗಿ ನ್ಯಾಯಕೇಳಲು ನಿಂತವರ ಬೆನ್ನುಮೂಳೆ ಮುರಿಯಬೇಕಾ..? ಇಂತಹ ಹೀನ ಕೃತ್ಯ ನಡೆಯುವುದು ನಮ್ಮ ಸಾರಿಗೆ ಸಂಸ್ಥೆಯಲ್ಲಿ ಮಾತ್ರ.
ಇದು ಅವಾಗಿನಿಂದ ನಡೆದುಕೊಂಡು ಬಂದಿರುವ ಪದ್ಧತಿ ಅಂತ ಸುಮ್ಮನಾಗುವ ವಿಷಯವಂತು ಅಲ್ಲವೇ ಅಲ್ಲ. ಈ ಪದ್ಧತಿಯಿಂದಲೇ ನಮ್ಮ ಸಾರಿಗೆ ನೌಕರರಿಗೆ ನ್ಯಾಯಸಿಗದೇ ನಮ್ಮ ಹೋರಾಟಗಳು ಅರೆಬರೆ ಬೆಂದ ಮಡಿಕೆಯಂತೆ ಆಗುತ್ತಿರುವುದು ಸತ್ಯಸಂಗತಿ.
ನಾವೆಲ್ಲರೂ ಕೂಡ ಸಾರಿಗೆ ಸಂಸ್ಥೆಯ ನೌಕರರೇ ಹೊರತು ಬೇರೆ ಯಾರು ಅಲ್ಲ ಅಲ್ಲವೇ? ನಮ್ಮಲ್ಲಿಯೇ ನಾವು ಮೇಲಧಿಕಾರಿಗಳು, ಅಧಿಕಾರಿಗಳು, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು, ತನಿಖಾದಳದವರು ಅಂತೆಲ್ಲ ಭಿನ್ನಾಭಿಪ್ರಾಯವೇಕೆ ಎಂಬುದು ನನ್ನ ಯಕ್ಷಪ್ರಶ್ನೆ ಸತ್ಯವೂ ಕೂಡ ಹೌದು..
ಕೇವಲ ಚಾಲಕ, ನಿರ್ವಾಹಕ, ತಾಂತ್ರಿಕಸಿಬ್ಬಂದಿಗಳಿಗಷ್ಟೇ ವೇತನ ಹೆಚ್ಚಳ ಆಗೋದ ಇಲ್ಲ ಎಲ್ಲ ವರ್ಗದವರಿಗೂ ವೇತನ ಹೆಚ್ಚಳ ಆಗೋದ ಅನ್ನೋದು ನನ್ನ ಇನ್ನೊಂದು ಪ್ರಶ್ನೆ.
ಅದೇನೇ ಇರಲಿ ನ್ಯಾಯಕ್ಕಾಗಿ ನಮ್ಮ ಅಧಿಕಾರಿಗಳು ಮತ್ತು ಇನ್ನಿತರೇ ಸಿಬ್ಬಂದಿ ವರ್ಗದವರು ಹೋರಾಟ ಮಾಡೋದು ಬೇಡ. ಏಕೆಂದರೆ ಅದರ ಅವಶ್ಯಕತೆ ಅವರಿಗಿಲ್ಲ ಬಿಡಿ ಅಂತಹ ಜಂಜಾಟದಲ್ಲಿ ಅವರು ಕೆಲಸ ಮಾಡುವುದೇ ಇಲ್ಲ. ಆದರೇ, ವೇತನ ಹೆಚ್ಚಳಕ್ಕಾಗಿಯಾದರೂ ಅವರು ಹೋರಾಟ ಮಾಡಬೇಕಲ್ಲವೇ? ಇದು ಕೂಡ ನನ್ನ ಯಕ್ಷಪ್ರಶ್ನೆಯೇ ಆಗಿದೆ.
ಬೇರೆ ಬೇರೆ ಇಲಾಖೆಗಳಲ್ಲಿ, ನಿಗಮಗಳಲ್ಲಿ, ಬ್ಯಾಂಕ್ ನೌಕರರಲ್ಲಿ ಏಕೆ ಇಂತಹ ಭಿನ್ನಾಭಿಪ್ರಾಯವಿಲ್ಲ ಎನ್ನುವುದೂ ಕೂಡ ನನ್ನ ಇನ್ನೊಂದು ದೊಡ್ಡಪ್ರಶ್ನೆ. ನಮ್ಮ ಸಾರಿಗೆ ನಿಗಮದಲ್ಲಿ ಎಂಡಿ, ಡಿಪಿಯವರನ್ನು ಹೊರೆತುಪಡಿಸಿದರೆ ಉಳಿದ ನಾವೆಲ್ಲರೂ ಕೂಡ ಸಾರಿಗೆ ಸಿಬ್ಬಂದಿಗಳೇ ಅಲ್ಲವೇ? ಇದರಲ್ಲೇನಾದರೂ ತಾರತಮ್ಯವಿದೆಯೇ ಅನ್ನೋದು ಕೂಡ ನನ್ನ ಮತ್ತೊಂದು ಪ್ರಶ್ನೆ.
ಒಂದು ಮನೆಯಲ್ಲಿ ಐದು ಜನ ಕುಟುಂಬ ಸದಸ್ಯರಿದ್ದು ಅವರೆಲ್ಲರೂ ಕೂಡ ಬೇರೆ ಬೇರೆ ವೃತ್ತಿಯಲ್ಲಿದ್ದರೂ ಸಹ ಅವರು ಒಂದೇ ಮನೆಯ ಕುಟುಂಬ ಸದಸ್ಯರಲ್ಲದೇ ಬೇರೆಯವರಗಲು ಸಾಧ್ಯವೇ ಇದು ಮತ್ತೊಂದು ಪ್ರಶ್ನೆ.
ಹೀಗೆ ಪಟ್ಟಿಮಾಡುತ್ತ ಹೋದರೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಇರಲಿ ಮುಖ್ಯವಾದ ವಿಷಯಕ್ಕೆ ಬರೋಣ ಸರ್ಕಾರದ ತಾರತಮ್ಯ ಧೋರಣೆಯ ವಿರುದ್ಧ ನಮ್ಮ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಮಗೆ ನ್ಯಾಯಬದ್ಧವಾಗಿ ನೀಡಬೇಕಾದ ವೇತನ ಹಾಗೂ ಇನ್ನಿತರ ನಿಯಮಬದ್ದ ಸಂವಿಧಾನಬದ್ದ ಸವಲತ್ತುಗಳನ್ನು ನೀಡುವುದರಲ್ಲಿ ಸರ್ಕಾರ ವಿಫಲವಾದರೆ ಅದನ್ನು ಕಾನೂನುಬದ್ದ ಹೋರಾಟದ ಮುಖಾಂತರ ಪಡೆದುಕೊಳ್ಳುವ ಹಕ್ಕನ್ನು ನಮ್ಮ ಭಾರತ ದೇಶದ ಪವಿತ್ರ ಸಂವಿಧಾನದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರೇ ನೀಡಿರುವಾಗ ಇದರಲ್ಲಿ ನಮ್ಮ ನಮ್ಮಲ್ಲೇ ತಾರತಮ್ಯವೇಕೆ?
ಹೋರಾಟ ಅನ್ನೋದು ಅನ್ಯಾಯಕ್ಕೆ ಒಳಗಾದ ಪ್ರತಿಯೊಬ್ಬ ಪ್ರಜೆಯ ಹಾಗೂ ನೌಕರರ ಜನ್ಮಸಿದ್ದ ಹಕ್ಕು ಎನ್ನುವುದರಲ್ಲಿ ಯಾವುದೇ ಸಂಶಯಬೇಡ. ವಾಸ್ತವ ಹೀಗಿರುವಾಗ ನಮ್ಮ ಬೇಡಿಕೆ ಈಡೇರಿಕೆಗಾಗಿ ಚಾಲಕರು, ನಿರ್ವಾಹಕರು, ತಾಂತ್ರಿಕಸಿಬ್ಬಂದಿಗಳು ರಸ್ತೆಗಿಳಿದು ಎಲ್ಲ ನಮ್ಮ ಸಾರಿಗೆಯ ಸಿಬ್ಬಂದಿಗಳ ಪರವಾಗಿ ಹೋರಾಟಕ್ಕೆ ನಿಂತರೆ ಅಧಿಕಾರಿ ವರ್ಗದವರು ಕೂಡ ಸರದಿಸಾಲಿನಲ್ಲಿ ನಿಂತು ಹೋರಾಡಬೇಕಾ..?. ಇಲ್ಲ ಎಲ್ಲರ ಪರವಾಗಿ ನ್ಯಾಯಕೇಳಲು ನಿಂತವರ ಬೆನ್ನುಮೂಳೆ ಮುರಿಯಬೇಕಾ..? ಇಂತಹ ಹೀನ ಕೃತ್ಯ ನಡೆಯುವುದು ನಮ್ಮ ಸಾರಿಗೆ ಸಂಸ್ಥೆಯಲ್ಲಿ ಮಾತ್ರ.
ಹೋರಾಟಗಾರರ ಹೆಸರನ್ನು ಗುರುತಿಸಿ ಘಟಕ ಮಟ್ಟದ ಅಧಿಕಾರಿ ವರ್ಗದವರು ಹಾಗೆ ಮುಂದುವರಿದು ವಿಭಾಗಮಟ್ಟದ ಅಧಿಕಾರಿ ವರ್ಗದವರು ಕೇಂದ್ರ ಕಚೇರಿಗೆ ಅಮಾಯಕ ನೌಕರರನ್ನು ಫೋಟೋ ಸಮೇತ ರವಾನೆಮಾಡಿ ಹೋರಾಟಗಾರರ ಭವಿಷ್ಯಕ್ಕೆ ಎಳ್ಳು ನೀರು ಬಿಡುವ ಕೆಲಸವನ್ನು ಅಧಿಕಾರಿ ವರ್ಗದವರು ಮಾಡಿದಾಗ ನಮಗೆ ನ್ಯಾಯಸಿಗುವುದು ಕನಸಿನ ಮಾತಲ್ಲವೇ?
ಇಂತಹ ದೌರ್ಭಾಗ್ಯ ನಮಗೆ ಬೇಕೆ ಎನ್ನುವುದು ಚಾಲಕ ನಿರ್ವಾಹಕ ತಾಂತ್ರಿಕ ಸಿಬ್ಬಂದಿಗಲ್ಲಿ ಎದ್ದಿರುವ ಕೂಗು ಸಹಜವಾದದ್ದೇ ಎನ್ನುವುದು ನನ್ನ ಅಭಿಪ್ರಾಯ ಮತ್ತು ಆಲೋಚನೆ ಕೂಡ. ಯಶಸ್ಸು ಸಿಗುವುದಾದರೆ ಇಡೀ ಕುಟುಂಬ ಸದಸ್ಯರಿಗೆ ಸಿಗಲಿ. ಕೇಡು ಆಗುವುದಾದರೆ ಎಲ್ಲರಿಗೂ ಆಗಲಿ ಅಣ್ಣಂದಿರನ್ನು ಕಾಪಾಡಲು ಹೋಗಿ ತಮ್ಮ ನೀರುಪಾಲಾಗಿ ಸಾಯುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನ್ನ ಅಂತರಾಳದ ನೋವಿನ ಮಾತು ತಪ್ಪಿದ್ದರೆ ಕ್ಷಮೆ ಇರಲಿ..
ಇಂತಿ ನಿಮ್ಮ ನೊಂದಿರುವ ಸಹೋದ್ಯೋಗಿ ಬಿಳಿಗಿರಯ್ಯ, ಚಾಲಕ, ನಂಜನಗೂಡು ಘಟಕ.
Related

You Might Also Like
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...