NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರ ವೇತನ ಹಿಂಬಾಕಿಗಾಗಿ ಅಧಿವೇಶನದಲ್ಲಿ ಒತ್ತಡ ಹೇರಿ- ಅಶೋಕ್, ಎಚ್‌ಡಿಕೆಗೆ ನಿವೃತ್ತ ನೌಕರ ಮಾದಯ್ಯ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನಿವೃತ್ತ ನೌಕರರಿಗೆ ಬರಬೇಕಾದ ವೇತನ ಹೆಚ್ಚಳದ ಹಿಂಬಾಕಿ ಹಣವನ್ನು ಕೂಡಲೇ ಕೊಡುತ್ತೇವೆ ಎಂದು ಆದೇಶಿಸುವಂತೆ ಸರ್ಕಾರವನ್ನು ಅಧಿವೇಶನದಲ್ಲಿ ಆಗ್ರಹಿಸಬೇಕು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತು ಮಾಜಿ ಮುಖ್ಯಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನಿವೃತ್ತ ನೌಕರ ಮಾದಯ್ಯ ಮನವಿ ಪತ್ರ ಮಾಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 4ನಿಗಮಗಳಲ್ಲೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬರಬೇಕಾದ ಹಿಂಬಾಕಿ ಹಣದ ಬಗ್ಗೆ, ವಿವರವಾಗಿ ನಿಮಗೆ ಈ ಮೂಲಕ ಮಾಹಿತಿ ನೀಡುತ್ತಿದ್ದು, ನಿಮಗೂ ಕೂಡ ನಿಗಮದ ಬಗ್ಗೆ ಎಲ್ಲ ಮಾಹಿತಿಯೂ ಇದೆ. ಏಕೆಂದರೆ ನೀವು ಕೂಡ ಸಾರಿಗೆ ಸಚಿವರಾಗಿದ್ದು, ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೀರಿ.

ಹೀಗಾಗಿ ತಾವು ವಿಪಕ್ಷನಾಯಕರಾಗಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರಕ್ಕೆ ಈ ನಮ್ಮ ಬೇಡಿಕೆಗಳ ಬಗ್ಗೆ ಒತ್ತಾಯ ಹೇರಬೇಕಿದ್ದು, ನಮ್ಮ ಬೇಡಿಕೆಗಳೆಂದರೆ, 2018 ಏಪ್ರಿಲ್, ಮೇ, ಜೂನ್, ಜುಲೈ ತಿಂಗಳ ಡಿ.ಎ. ಮತ್ತು ಡಿಪಿಯ ವ್ಯತ್ಯಾಸ (ಡಿಫರೆನ್ಸ್) ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು.

2018-19ನೇ ಸಾಲಿನ ರಜೆ ನಗಧೀಕರಣವನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು. 2020 ಜನವರಿಯಿಂದ ವೇತನ ಪರಿಷ್ಕರಣೆ ಹಿಂಬಾಕಿಯು ಎಲ್ಲರಿಗೂ ದೊರಕುವಂತೆ ಕ್ರಮವಹಿಸಬೇಕು. 2023 ಫೆಬ್ರವರಿಯಿಂದ ನಿವೃತ್ತರಿಗೆ ಬರಬೇಕಾದ ಪಿಎಫ್, ಗ್ರಾಚ್ಯುಟಿ ಎನ್ ಕ್ಯಾಶ್ಮೆಂಟ್ ಹಣವನ್ನು ವಿತರಿಸಲು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಹಿರಿಯ ಚಾಲಕರು 25 ವರ್ಷ ಸೇವೆ ಸಲ್ಲಿಸಿದವರಿಗೆ ನೀಡುವ ವಿಶೇಷ ಭತ್ಯೆ ವ್ಯವಸ್ಥೆಯನ್ನು ಜಾರಿಗೊಳಿಸಬೇಖು. ಸೇವೆಯಲ್ಲಿದ್ದಾಗ ಕೊಡದಿರುವ ಸಮವಸ್ತ್ರ, ಶೂ, ಜರ್ಕಿನ್ ಮತ್ತು ಹೊಲಿಗೆ ಹಣವನ್ನು ನಿವೃತ್ತರಿಗೂ ಸಹ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ತಾವು ಆಗ್ರಹ ಪಡಿಸಬೇಕು ಎಂದು ತಮ್ಮಲ್ಲಿ ಒತ್ತಾಯ ಪೂರ್ವಕವಾಗಿ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದರಿಂದ ಸಂಸ್ಥೆಗೆ ಹೆಚ್ಚಿನ ಆದಾಯ ಬರುತ್ತಿದೆ. ಆದ್ದರಿಂದ ಕೆಎಸ್ಆರ್‌ಟಿಸಿಯ 4 ನಿಗಮಗಳು ಲಾಭದತ್ತ ಸಾಗುತ್ತಿವೆ ಎಂದು ಸಾರಿಗೆ ಮಂತ್ರಿಗಳು ಮತ್ತು ಸರ್ಕಾರದ ಇತರೆ ಪ್ರಮುಖರು ಸಾರ್ವಜನಿಕವಾಗಿ ಪ್ರಚಾರ ಮಾಡುತ್ತಿದ್ದಾರೆ.

ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಈವರೆಗೆ ಎಲ್ಲ ವಿಭಾಗಗಳಿಂದ ಮಹಿಳೆಯರಿಗೆ ವಿತರಿಸಿರುವ ಚೀಟಿ ಮೊತ್ತವೆಷ್ಟು? ಅದಕ್ಕೆ ಪರ್ಯಾಯವಾಗಿ ಸರ್ಕಾರ ಸಂಸ್ಥೆಗೆ ಕೊಟ್ರುಟಿರುವ ಹಣವೆಷ್ಟು? ಅದನ್ನು ಪ್ರಚುರ ಪಡಿಸಲು ತಾವುಗಳು ಸದನದಲ್ಲಿ ಒತ್ತಾಯಿಸಬೇಕು ಎಂದು ಕೋರುತ್ತಿದ್ದೇನೆ.

ಮತ್ತೊಮ್ಮೆ ನಮ್ಮ ನಿವೃತ್ತರಾದ ಮತ್ತು ಪ್ರಸ್ತುತ ಕರ್ತವ್ಯ ನಿವ್ಯಹಿಸುತ್ತಿರುವ ನೌಕರರಿಗೆ ಅಧಿಕಾರಿಗಳಿಗೆ ಬರಬೇಕಾದ ಎಲ್ಲ ಹಿಂಬಾಕಿ ಹಣವನ್ನು ಕೂಡಲೆ ವಿತರಿಸುವಂತೆ ಸರ್ಕಾರಕ್ಕೆ ಒತ್ತಡ ತರುವಂತೆ ತಮ್ಮಲ್ಲಿ ನಮ್ರತೆಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಸಮಸ್ತ ಸಾರಿಗೆ ನೌಕರರ ಪರವಾಗಿ ಮಾದಯ್ಯ ಮನವಿ ಸಲ್ಲಿಸಿದ್ದಾರೆ.

1 Comment

  • ತಮ್ಮದೇ ಸರ್ಕಾರದ ಕರ್ಮಕಾಂಡಗಳನ್ನು ತಾವೇ ಹೇಗೆ ಪ್ರಶ್ನೆ ಮಾಡುವರು

Leave a Reply

error: Content is protected !!
LATEST
BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ