NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಹೆಚ್ಚಳ ಸಂಬಂಧದ ಪ್ರಕರಣ: ಇನ್ನೂ ಏಕೆ Objection ಹಾಕಿಲ್ಲ- ಸಂಸ್ಥೆಯ ವಕೀಲರ ಪ್ರಶ್ನಿಸಿದ ನ್ಯಾಯಪೀಠ

ವಿಜಯಪಥ ಸಮಗ್ರ ಸುದ್ದಿ
  • ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧದ ಈ ಪ್ರಕರಣವೇ ಬೇರೆ
  • ಪಿಐಎಲ್‌ ಹಾಕಿರುವುದೇ ಬೇರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದ ವಕೀಲರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2020 ಜನವರಿ 1ರಿಂದ ಹೆಚ್ಚಳವಾಗಿರುವ ಶೇ.15ರಷ್ಟು ವೇತನದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ವೇತನ ಹೆಚ್ಚಳವಾಗಬೇಕಿರುವ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಅರ್ಜಿ ಹಾಕಿದ್ದು ಆ ಪ್ರಕರಣದ ವಿಚಾರಣೆ ಇಂದು ಹೈ ಕೋರ್ಟ್‌ನ ಏಕಸದಸ್ಯ ನ್ಯಾಯಪೀಠದ ಮುಂದೆ ಬಂದಿತ್ತು.

ಈ ವೇಳೆ ಹೈ ಕೋರ್ಟ್‌ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯರೂರ ಅವರಿದ್ದ ಏಕಸದಸ್ಯ ನ್ಯಾಯಪೀಠ ಸಾರಿಗೆ ನಿಗಮದ ವಕೀಲರನ್ನು ಈ ಪ್ರಕರಣ ಸಂಬಂಧ ಆಕ್ಷೇಪಣೆ (Objection) ಸಲ್ಲಿಸಿದ್ದೀರಾ ಎಂದು ಕೇಳಿತು. ಅದಕ್ಕೆ ಇನ್ನು ಹಾಕಿಲ್ಲ ಎಂದು ಹೇಳಿದ್ದಕ್ಕೆ ಏಕೆ ‌ 5ತಿಂಗಳು ಕಳೆದಿದ್ದರೂ ಇನ್ನೂ ಹಾಕಿಲ್ಲ ಎಂದು ಸ್ವಲ್ಪ ಖಾರವಾಗಿಯೇ ಪ್ರಶ್ನಿಸಿತು.

ಆಗ ಇಲ್ಲ ನಿನ್ನೆ ಈ ಸಂಬಂಧ ಮತ್ತೊಂದು ಪ್ರಕರಣವಿದ್ದು ಅದು ನಾಳೆ ವಿಚಾರಣೆಗೆ ಬರಲಿದೆ ಎಂದು ಸಾರಿಗೆ ಸಂಸ್ಥೆಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಈ ವೇಳೆ ಆ ಪ್ರಕರಣ ಬೇರೆ ಈ ಪ್ರಕರಣ ಬೇರೆ ಅದು ಪಿಐಎಲ್‌  ಹಾಕಿರುವುದು ನಾವು ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಅರ್ಜಿ ಹಾಕಿರುವುದು ಎಂದು ನೌಕರರ ಪರ ವಕೀಲರು ಹೇಳಿದರು.

ಅದಕ್ಕೆ ಆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ ನೀವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ (Objection) ಇದ್ದರೆ ಹಾಕಿ ಎಂದು ಹೇಳಿ ಪ್ರಕರಣವನ್ನು ಮುಂದಿನವಾರಕ್ಕೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ಹೇಳಿತು.  ಈ ವೇಳೆ ನೌಕರರ ಪರ ವಕೀಲರಾದ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಅವರು ಇಲ್ಲ ನಾವು ಹೈದರಾಬಾದ್‌ನಲ್ಲಿ ಖಾಸಗಿ ಕಂಪನಿಯೊಂದರ ವಕೀಲರಾಗಿರುವುದರಿಂದ ನಮಗೆ ಕಾಲವಕಾಶಬೇಕು ಹಾಗಾಗಿ ಸೆ.3ರೊಳಗೆ ಹಾಕಿ ಎಂದು ಮನವಿ ಮಾಡಿದ್ದರಿಂದ ಸೆ.3ಕ್ಕೆ ಪ್ರಕರಣವನ್ನು ಮುಂದೂಡಿದ್ದಾರೆ.

ಇನ್ನು ಸಾರಿಗೆ ಸಂಸ್ಥೆಯ ವಕೀಲರು ಈ ಬಾರಿ ಡೇಟ್‌ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದರು ಆದರೆ, ಅದಕ್ಕೆ ಅವಕಾಶಕೊಡದೆ ನೌಕರರ ಪರ ವಕೀಲರು ಪ್ರಕರಣ ವಿಚಾರಣೆ ನಡೆಯಬೇಕು ಎಂದು ಮನವಿ ಮಾಡಿದ್ದರಿಂದ ವಿಚಾರಣೆ ನಡೆಯಿತು. ಈ ವೇಳೆ ಇದು ವೈಯಕ್ತಿಕ ಅರ್ಜಿಯಾಗಿದ್ದು, ಯಾವುದೇ ಸಂಘಟನೆಯೂ ಭಾಗಿಯಾಗಿಲ್ಲದ ಕಾರಣ ಇದನ್ನು ಪರಿಗಣಿಸಬಾರದು ಎಂದರು. ಅದಕ್ಕೆ ನೌಕರರ ಪರ ವಕೀಲರು ಇಲ್ಲ ಈ ಪ್ರಕರಣದಲ್ಲಿ ಸಂಸ್ಥೆಯ ನೌಕರರು ಇದ್ದು ಅವರು ಎಂಡಿಯವರಿಗೆ ಮನವಿ ಪತ್ರ ನೀಡಿ ನಮಗೆ ವೇತನ ಹೆಚ್ಚಳಮಾಡಿಕೊಡಿ ಎಂದು ಕೋರಿದ್ದಾರೆ. ಹೀಗಾಗಿ ಇದನ್ನು ಮಾನ್ಯ ಮಾಡಬೇಕು ಎಂದು ಕೋರಿದರು.

ಇನ್ನು ಈ ಪ್ರಕರಣ ಜೂನ್‌ 25ರಂದು ಪ್ರಕರಣ ನಡೆದಿತ್ತು. ನೌಕರರ ಪರ ವಕೀಲರು ಹಾಗೂ ಸರ್ಕಾರ, ಸಾರಿಗೆ ಆಡಳಿತ ಮಂಡಲಿ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ಯಾವುದಾದರೂ ನೌಕರರ ಪರ ಸಂಘಟನೆಗಳು ಸಂಸ್ಥೆಯ ಎಂಡಿ ಅವರಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಸಂಬಂಧ ಮನವಿ ಮಾಡಿರುವ ಪ್ರತಿಯನ್ನು ಲಗತ್ತಿಸಲು ಕೇಳಿ ಜುಲೈ 2ಕ್ಕೆ ನ್ಯಾಯಪೀಠ ಮುಂದೂಡಿತ್ತು.

ಆ ಬಳಿಕ ಸಮಯದ ಅಭಾವದಿಂದ ಜುಲೈ 16ಕ್ಕೆ ಮುಂದೂಡಿತ್ತು. ಮತ್ತೆ ಇಂದಿಗೆ ಅಂದರೆ ಆ.6ಕ್ಕೆ ಮುಂದೂಡಿತ್ತು. ಇಂದು ಸಂಸ್ಥೆಯ ಎಂಡಿ ಅವರಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಸಂಬಂಧ ಮನವಿ ಮಾಡಿರುವ ಪ್ರತಿಯನ್ನು ಲಗತ್ತಿಸಲು ಕೇಳಿರುವುದರ ಸಂಬಂಧ ಎಲ್ಲ ಅರ್ಜಿಗಳನ್ನು ಕ್ರೂಢೀಕರಿಸಿಕೊಂಡಿದ್ದು, ಅಲ್ಲದೆ ಸರ್ಕಾರ ಪ್ರತಿ 4ವರ್ಷಕ್ಕೊಮ್ಮೆ ನೌಕರರ ವೇತನ ಹೆಚ್ಚಳ ಮಾಡಿರುವ ಪ್ರತಿಗಳನ್ನು ಸಂಸ್ಥೆಯಿಂದ ಕಲೆಹಾಕಿದ್ದು ಅದನ್ನು ಸೆ.3ರಂದು ಸಲ್ಲಿಸಲಾಗುವುದು ಎಂದು ನೌಕರರ ಪರ ವಕೀಲರಾದ ಎಚ್‌.ಬಿ.ಶಿವರಾಜು ವಿಜಯಪಥಕ್ಕೆ ತಿಳಿಸಿದ್ದಾರೆ.

ಪ್ರಕರಣವೇನು?: ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು19ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ನೌಕರರ ವೇತನ ಹೆಚ್ಚಳ ಸಂಬಂಧ 2025ರ ಮಾರ್ಚ್‌ 10ರಂದು ಹೈ ಕೋರ್ಟ್‌ನಲ್ಲಿ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ, ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಹೈ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Megha
the authorMegha

Leave a Reply

error: Content is protected !!