KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!

- ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್ 2024 ರಿಂದ ಜಾರಿಗೆ ಬರುವಂತೆ ಮೂಲ ತುಟ್ಟಿಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರು ಮಾಡಿರುವ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಜೂನ್ 26 ರಂದು ಆದೇಶ ಹೊರಡಿಸಿದ್ದಾರೆ.
ಇಲ್ಲಿ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಸಂಬಂಧಪಡುವುದಿಲ್ಲ. ಹೀಗಾಗಿ ನೌಕರರಿಗೆ ಪ್ರಸ್ತುತ ಇರುವ ಶೇ.24ರಷ್ಟು ಎಚ್ಆರ್ಎ ಬದಲಿಗೆ ಈಗ ಶೇ.20ರಷ್ಟು ಎಚ್ಆರ್ಎ ಈ ಆದೇಶದಿಂದ ಸಿಗಲಿದೆ. ಹೀಗಾಗಿ ವೇತನದಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸವಾಗುವುದಿಲ್ಲ.
ಅದು ಹೇಗೆ ಎಂದರೆ? ನಿರ್ವಾಹಕರ ವೇತನವನ್ನು ಉದಾಹರಣೆಗೆ ತೆಗೆದುಕೊಳ್ಳೋಣ ಪ್ರಸ್ತುತ 24,260 ಮೂಲ ವೇತನ ಇದ್ದರೆ ಅದರ ಡಿಎ ಶೇ.42.50 ಇದೇ. ಅಂದರೆ ಅವರು 10,311 ರೂ. DA ಪಡೆಯುತ್ತಿದ್ದಾರೆ. ಅದಕ್ಕೆ ಶೇ.24 HRA ಇದೆ ಅಂದರೆ 5822 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈ ಮೂಲವೇತನ 24260 + ಡಿಎ 10311+ ಎಚ್ಆರ್ಎ 5822 = ಪ್ರಸ್ತುತ ಜೂನ್ 2025ರ ವೇತನ 40393 ಇದೆ ಅಂದುಕೊಳ್ಳೋಣ. ಈ ನಡುವೆ ದಿನಾಂಕ 01.07.2022ರಲ್ಲಿ 24260-(500×3=1500 ಇಂಕ್ರಿಮೆಂಟ್ ಕಳೆದರೆ) 24,260-1500 = 22,760 ಆಗಿನ ಮೂಲವೇತನ ಇದೆ.
ಈ 22,760ರ ಮೂಲವೇತನಕ್ಕೆ ಶೇ.31ಡಿಎ 7056 ರೂ.ಗಳನ್ನು ಜತೆಗೆ ಇದೇ ಮೂಲ ವೇತನಕ್ಕೆ ಶೇ.24 HRA 5,823 ರೂ.ಗಳನ್ನು ಸೇರಿಸಿದರೆ. ಈಗ ಒಟ್ಟಾರೆ 22,760 + 7056 + 5823= 35639 ರೂ.ಗಳು 01.07.2022ರ ದಿನಾಂಕದ ಸಂಬಳ ಆಗಿರುತ್ತದೆ.
22,760 ಮೂಲವೇತನ + 7056 ಡಿ ಎ ಶೇ.31 ವಿಲೀನಗೊಳಿಸಿದಾಗ 29,816 ಆಗಿದ್ದು ಸ್ಲಾಬ್ ಪ್ರಕಾರ 29,850 ಮೂಲವೇತನ ಆಗುತ್ತದೆ. ಮುಂದುವರಿದು ದಿನಾಂಕ 01.07.2022 ರಿಂದ ಜುಲೈ ತಿಂಗಳ 2025 ರ ವರೆಗೂ ಡಿಎ ಲೆಕ್ಕ ಮಾಡದೆ ನೇರವಾಗಿ ಸಂಬಳಕ್ಕೆ ಬಂದು ಬಿಡುತ್ತದೆ.
29,850ರ ಮೂಲವೇತನಕ್ಕೆ (ಕಳೆದಿರುವ ಮೂರು ಇಂಕ್ರಿಮೆಂಟ್ 500 ರೂ.ಗಳ ಬದಲಿಗೆ 550 ರೂಪಾಯಿಗಳ ಮೂರು ಇಂಕ್ರಿಮೆಂಟ್ ಹೆಚ್ಚಿಸಿಕೊಳ್ಳಬೇಕು) 550×3= 1650+29850 =31500 ಪ್ರಸ್ತುತ ಜುಲೈ 2025ರ ಮೂಲ ವೇತನವಾಗುತ್ತದೆ. ಜುಲೈ 2025ರ ಮೂಲವೇತನ 31500 ರೂಪಾಯಿ + ಡಿಎ ಶೇ.12.25 ಲೆಕ್ಕಾಚಾರ ಹಾಕಿದಾಗ ಆ ನಿರ್ವಾಹಕನಿಗೆ 3859 HRA ಶೇ.20ರಷ್ಟು ಲೆಕ್ಕಾಚಾರ ಹಾಕಿದಾಗ 6,300 ರೂಪಾಯಿಗಳು. ಒಟ್ಟಾರೆ 31,500+3859+6300= 41659 ರೂ. ವೇತನ ಆಗುತ್ತದೆ.
ಇದನ್ನು ಸಂಸ್ಥೆ ವತಿಯಿಂದ ಬಿಡಿಎ ತೋರಿಸುತ್ತಾರೆ ಈ ಮೇಲೆ ತಿಳಿಸಿದಂತೆ ಜೂನ್ 2025ರ ವೇತನ 40,393 ಸರ್ಕಾರದ ಆದೇಶದಂತೆ ಡಿಎ ವಿಲೀನಗೊಳಿಸಿದಾಗ ಆಗುವಂತಹ ಪೂರ್ಣ ಪ್ರಮಾಣದ ಸಂಬಳ 41,659 ರೂಪಾಯಿಗಳು. ಅಂದರೆ 41,659-40,393=1266 ರೂ.ಗಳು ಮಾತ್ರ ವೇತನದಲ್ಲಿ ಹೆಚ್ಚಾಗಿ ಸಿಗುತ್ತದೆ.
ಹೀಗಾಗಿ ತಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಮೂಲವೇತನ ಜಾಸ್ತಿಯಾಗುತ್ತದೆ. ಸದ್ಯಕ್ಕೆ ಶೇ.24ರಷ್ಟಿರುವ HRA ಶೇ.4 ಕಡಿಮೆಯಾಗಿ ಶೇ.20 ಪರ್ಸೆಂಟ್ಗೆ ಇಳಿಕೆಯುತ್ತದೆ. ಡಿಎ ಪ್ರಸ್ತುತ ದಿನಾಂಕ 01.01.2025ದಕ್ಕೆ ಶೇ.12.25 ರಷ್ಟು ಡಿಎ ಇರುತ್ತದೆ. ಇದನ್ನು ಗಮನಿಸಿದರೆ ಇಲ್ಲಿ ಯಾವುದೇ ಹೇಳಿಕೊಳ್ಳುವಂತಹ ಸಂಬಳದ ವ್ಯತ್ಯಾಸವಾಗುವುದಿಲ್ಲ. ಕಾರಣ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಅನ್ವಯವಾಗುವುದಿಲ್ಲ. ( ಒಂದು ವೇಳೆ 7ನೇ ವೇತನ ಆಯೋಗ ಸಾರಿಗೆ ನೌಕರರಿಗೂ ಸಿಕ್ಕಿದ್ದರೆ ಸರ್ಕಾರಿ ನೌಕರರ ವೇತನದಷ್ಟೇ ಸಿಗುತ್ತಿತ್ತು.
ಒಟ್ಟಾರೆ ಈ ಬಿಡಿಎ ಮೂಲ ವೇತನಕ್ಕೆ ವಿಲೀನ ಮಾಡಿರುವುದರಿಂದ ಹೇಳಿಕೊಳ್ಳುವ ರೀತಿಯಲ್ಲಿ ವೇತನ ಹೆಚ್ಚಳವಾಗದಿದ್ದರೂ ಕೂಡ ಅಲ್ಪ ಮಟ್ಟಿಗೆ ಹೆಚ್ಚಾಗುತ್ತದೆ. ಆದರೆ HRA ಶೇ.4ರಷ್ಟು ಕೈಬಿಟ್ಟು ಹೋಗುತ್ತದೆ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು.
Related

You Might Also Like
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...
9 ಎಕರೆಯಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ ನಿರ್ಮಾಣ: ಉಸ್ತುವಾರಿ ಸಚಿವ ಕೆಎಚ್ಎಂ
ನಾಡಪ್ರಭು ಕೆಂಪೇಗೌಡರ 516 ನೇ ಜಯಂತ್ಯೋತ್ಸವ ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಆವತಿ ಗ್ರಾಮದ ಬಳಿ 9.10 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ,...
ಲೋಕಾಯುಕ್ತರು ರಾಜಿನಾಮೆ ನೀಡಬೇಕು, ಅಬಕಾರಿ ಸಚಿವರ ವಜಾಗೊಳಿಸಲು ಆಗ್ರಹಿಸಿ KRS ಪಕ್ಷದಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಲೋಕಾಯುಕ್ತರು ರಾಜಿನಾಮೆ ನೀಡಲಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾಗೊಳಿಸಿ, ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ...
ಸರ್ಕಾರ ಅತೀ ಶೀಘ್ರದಲ್ಲೇ ಸಾರಿಗೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸಲಿದೆ: ಡಿಸಿಎಂ ಡಿಕೆಶಿ
ಬೆಂಗಳೂರು: ಚುನಾವಣಾ ಪೂರ್ವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ...
KKRTC: ತನ್ನದಲ್ಲದ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿದ ಮಹಿಳೆ- ಪ್ರಶ್ನಿಸಿದ್ದಕ್ಕೆ ಪ್ರಜ್ಞೆ ತಪ್ಪುವವರೆಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಸಂಬಂಧಿಕರು
ಕಲಬುರಗಿ: ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದುಕೊಳ್ಳಲು ಮುಂದಾದ ಮಹಿಳೆಗೆ ಇದು ನಿಮ್ಮ ಆಧಾರ ಕಾರ್ಡ್ ಅಲ್ಲ ನಿಮ್ಮದನ್ನು ಕೊಡಿ ಎಂದು ನಿರ್ವಾಹಕರು ಹೇಳಿದ್ದಕ್ಕೆ ಮಹಿಳೆ...
KSRTC: ಟೈರ್ ಬ್ಲಾಸ್ಟಾಗಿ ಮನೆಗೆ ನುಗ್ಗಿದ ಬಸ್-10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮನೆಗೆ ಬಸ್ ನುಗ್ಗಿದ ಘಟನೆ ತಾಲೂಕಿನ ಸಿದ್ದಾಪುರ...
ಕ್ರೂರವಾಗಿ ಮಹಿಳೆ ಕೊಲೆಗೈದು ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟ ಪಾಪಿಗಳು ಎಸ್ಕೇಪ್
ಬೆಂಗಳೂರು: ಅತ್ಯಾಚಾರ ಮಾಡಿದ ಬಳಿಕ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಲೆಗೈದು ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್...