ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದ ಕಡೂರು ಘಟಕದಲ್ಲಿ ಅಧಿಕಾರಿಗಳು ತಮಗಿಷ್ಟ ಬಂದಂತೆ ಫಾರಂ-4 ಬದಲಾಯಿಸಿ ನೌಕರರಿಗೆ ಕಳೆದ 2017ರಿಂದ ಈವರೆಗೂ ಸರಿಯಾಗಿ ಓಟಿ ಕೊಡದೆ ಸುಮಾರು 12 ಕೋಟಿ ರೂ.ಗಳನ್ನು ನಷ್ಟಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ 2017ಕ್ಕೂ ಹಿಂದೆ 4 ನೌಕರರಿಗೆ ಡ್ಯೂಟಿ ಮತ್ತು ಓವರ್ ಟೈಮ್ ಡ್ಯೂಟಿಗೆ ತಕ್ಕ ಓಟಿ ಕೊಡುತ್ತಿದ್ದರು. ಆದರೆ 2017 ಮತ್ತು ನಂತರ ಬಂದ ಅಧಿಕಾರಿಗಳು ಮನಬಂದಂತೆ ಫಾರಂ-4 ಬದಲಾಯಿಸಿ ಈ ಹಿಂದೆ ಇದ್ದ 4ರಿಂದ 5 ಗಂಟೆ ಓಟಿಯನ್ನು ಕೇವಲ 1.30 ಗಂಟೆಗೆ ಬದಲಾಯಿಸಿ ಚಾಲನಾ ಸಿಬ್ಬಂದಿಗಳ ಶ್ರಮಕ್ಕೆ ತಕ್ಕ ಓಟಿ ಕೊಡದೆ ಕಾಡುತ್ತಿದ್ದಾರೆ.
ಇನ್ನು ಈ ಅಧಿಕಾರಿಗಳು ದರ್ಪಕ್ಕೆ ನೌಕರರ ಅಮಾನತಿಗೂ ಒಳಗಾಗುತ್ತಿದ್ದಾರೆ. ನಾವು ಮಾಡಿದ್ದೇ ರೂಲ್ಸ್ ಅದನ್ನು ನೀನು ಪಾಲಿಸಬೇಕು ಅಷ್ಟೆ ಎಂದು ನೌಕರರಿಗೆ ತಾಕೀತು ಮಾಡುವ ಮೂಲಕ ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದಾರೆ ಇಲ್ಲಿನ ಅಧಿಕಾರಿಗಳು. ಇನ್ನು ಸಾರಿಗೆ ನಿಗಮಗಳಲ್ಲಿ ಓವರ್ ಟೈಂ ಕೆಲಸಕ್ಕೆ ಅಂದರೆ ಎಂಟು ಗಂಟೆ ಕರ್ತವ್ಯದ ಬಳಿಕ ಮಾಡುವ ಡ್ಯೂಟಿಗೆ ಒಂದೂವರೆ ಪಟ್ಟು ಹೆಚ್ಚಾಗಿ ವೇತನ ಕೊಡಬೇಕು ಆದರೆ, ಆ ರೀತಿ ಮಾಡದೆ 4-5 ಗಂಟೆ ಮಾಡಿದರೂ ಬಿಡಿಗಾಸುಕೊಟ್ಟು ನೌಕರರನ್ನು ಯಾಮಾರಿಸುತ್ತಿದ್ದಾರೆ.
ಇದನ್ನು ಕೇಳಬೇಕಾದ ಸಂಘಟನೆಗಳ ಮುಖಂಡರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಳೆದ 30-40 ದಶಕಗಳಿಂದ ಚಾಲನಾ ಸಿಬ್ಬಂದಿಗಳಿಗೆ ನಷ್ಟವಾಗುತ್ತಿದ್ದರು ಸುಮ್ಮನಿದ್ದಾರೆ. ಇದನ್ನು ಗಮನಿಸಿದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾರಿಗೆ ನೌಕರರ ಪರ ಇರುವ ಹಳೆಯ ಮತ್ತು ಹೊಸ ಸಂಘಟನೆಗಳ ಜವಾಬ್ದಾರಿ ಏನು? ಎಂಬುವುದೆ ಗೊತ್ತಾಗುತ್ತಿಲ್ಲ.
ಇನ್ನು ಕಡೂರು ಘಟಕದ ವಿಷಯಕ್ಕೆ ಬಂದರೆ, ಇಲ್ಲಿ 60 ರಿಂದ 70 ಅನುಸೂಚಿಗಳಿದ್ದು, ಈ ರೂಟ್ಗಳಲ್ಲಿ ಬಹುತೇಕ ಎಲ್ಲ BAR ಡ್ಯೂಟಿಗಳಾಗಿದ್ದು ಬೆಳಗ್ಗೆ 7ಗಂಟೆಗೆ ಡ್ಯೂಟಿ ಪ್ರಾರಂಭವಾದರೆ ನಾಳೆ ರಾತ್ರಿ 7.30ಕ್ಕೆ ಮುಗಿಯುತ್ತವೆ. ಅದರೆ ಕರ್ತವ್ಯದ ಅವಧಿ 34ರಿಂದ 35 ಗಂಟೆಗಳಿವೆ.
ಈ 34ರಿಂದ 35 ಗಂಟೆಗಳು ಬಸ್ನಲ್ಲೇ ಕಳೆಯುತ್ತಿದ್ದು ನೌಕರರಿಗೆ ಯಾವುದೇ ಸಮಯ ಸಿಗುತ್ತಿಲ್ಲ. ರಾತ್ರಿ ಬಸ್ನಲ್ಲೇ ಮಲಗಬೇಕು ಮನೆಗೆ ಹೋಗಲಿಕ್ಕೆ ಬರಲಿಕ್ಕೂ ಸರಿಯಾಗಿ ಸಮಯ ಸಿಗುತ್ತಿಲ್ಲ. ಆದರೆ, ಈ 34ರಿಂದ 35 ಗಂಟೆಗಳು ಬಸ್ನಲ್ಲೇ ಇದ್ದರೂ ಮೊದಲದಿನ 8 ಗಂಟೆ ಮತ್ತು ಎರಡನೇ ದಿನ 8 ಗಂಟೆ ಮತ್ತು ರಾತ್ರಿ ಮಲಗಲಿಕ್ಕೆ 8 ಗಂಟೆ ಎಂದು ಒಟ್ಟಾರೆ 24ಗಂಟೆ ತೆಗೆದರು ಹಾಕಿದರು, ಉಳಿದ ಇನ್ನೂ 10ರಿಂದ 11 ಗಂಟೆ ಹೆಚ್ಚುವರಿಯಾಗಿ ನೌಕರರು ಡ್ಯೂಟಿ ಮಾಡುತ್ತಿದ್ದಾರೆ.
ಅಂದರೆ 10ರಿಂದ 11 ಗಂಟೆಗಳು ಓಟಿ ಮಾಡುತ್ತಿದ್ದರೂ ನೌಕರರಿಗೆ ಕೇವಲ 1.30ಗಂಟೆಯಿಂದ 2ಗಂಟೆಯಷ್ಟೇ ಓಟಿ ಲೆಕ್ಕ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದರೆ ಮೊದಲದಿನ 13ಗಂಟೆಗಳು ನಿರಂತರವಾಗಿ ಮತ್ತು ಮಾರನೆಯ ದಿನ 13ಗಂಟೆಗಳು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸರಿಯಾದ ಓಟಿ ಕೊಡದೆ ಈ ಅಧಿಕಾರಿಗಳು ನೌಕರರಿಂದ ದುಡಿಸಿಕೊಳ್ಳುತ್ತಿದ್ದಾರೆ.
ಅಂದರೆ 9ರಿಂದ 9.30ಗಂಟೆಗಳು ಫ್ರೀಯಾಗಿ ನೌಕರರು ದುಡಿಯುತ್ತಿದ್ದಾರೆ. ಹೀಗೆ ಓವರ್ ಟೈಂ ಡ್ಯೂಟಿ ಮಾಡುತ್ತಿರುವ ನೌಕರರ ಜಾಗದಲ್ಲಿ ಈ ಅಧಿಕಾರಿಗಳನ್ನು ಸುಮ್ಮನೇ ನೀವು ಡ್ಯೂಟಿ ಮಾಡಬೇಡಿ ನಮ್ಮ ಜೊತೆ ಒಂದು ದಿನ ಬಸ್ನಲ್ಲಿ ಬಂದು ಹೋಗಿ ಸಾಕು ಎಂದು ಹೇಳಬೇಕು.
ಎಸಿ, ಫ್ಯಾನ್ ಕೆಳಗೆ ಕುಳಿತು ಫಾರಂ-4ಅನ್ನು ತಮಗಿಷ್ಟ ಬಂದರೀತಿ ಬದಲಾಯಿಸಿ ಈ ರೀತಿ ಕಷ್ಟಪಟ್ಟು ದುಡಿಯುತ್ತಿರುವ ನೌಕರರಿಗೆ ಅವರು ಮಾಡಿದ ಕೆಲಸಕ್ಕೆ ತಕ್ಕ ಓಟಿಯನ್ನು ಕೊಡದೆ ದರ್ಪಮೆರೆಯುತ್ತಿರುವುದಕ್ಕೆ ನಿಮಗ ನಾಚಿಕೆ ಆಗುವುದಿಲ್ಲವೆ? ಖಾಸಗಿ ಕಂಪನಿಗಳಲ್ಲಿ ಡ್ಯೂಟಿ ಟೈಂ ಮಗಿದ ಮೇಲೆ ಓಟಿ 2ಗಂಟೆ ಓಟಿ ಮಾಡಿದರೆ ವೇತನ ಒಂದೂವರೆ ಪಟ್ಟು ಹೆಚ್ಚು ವೇತನ ಕೊಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲ? ಅಥವಾ ಈ ಕಾರ್ಮಿಕ ನಿಯಮ ನಿಮಗೆ ಅನ್ವಯವಾಗುವುದಿಲ್ಲವೇ?
ಅಧಿಕಾರಿಗಳು ಅತಿ ಬುದ್ಧಿವಂತರ ರೀತಿ ನಡೆದುಕೊಳ್ಳುವ ಮೂಲಕ ಕಷ್ಟಪಟ್ಟು ದುಡಿಯುತ್ತಿರುವ ನೌಕರರಿಗೆ ಅವರ ಶ್ರಮಕ್ಕೆ ಸಿಗಬೇಕಾದ ಫಲವನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ಇನ್ನಾದರೂ ಕನಿಷ್ಟಪಕ್ಷ ಅವರ ಶ್ರಮಕ್ಕೆ ತಕ್ಕ ಓಟಿಯನ್ನು ಕೊಡಬೇಕಿದೆ.
ಇನ್ನು ಪ್ರಮುಖವಾಗಿ ಇಲ್ಲಿ 204 ಕಿಮೀಗೆ 2.15ಗಂಟೆ ಓಟಿ ಕೊಡುತ್ತಿದ್ದು, 610 ಮತ್ತು 600 ಕಿಮಿಗೆ ಕೇವಲ 1.45ಗಂಟೆ ಮತ್ತು 1.30ಗಂಟೆ ಓಟಿ ಕೊಡುತ್ತಿದ್ದಾರೆ. ಇದು ಕಡೂರು ಡಿಪೋನಲ್ಲೇ ಈ ರೀತಿ ತಾರತಮ್ಯತೆ ಮೆರೆಯುತ್ತಿದ್ದಾರೆ ಅಧಿಕಾರಿಗಳು, ಇದು ಮೊದಲು ನಿಲ್ಲಬೇಕು ನಮಗೆ ಓಟಿಗೆ ತಕ್ಕ ವೇತನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...