ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುರಿತು ನೌಕರರ ಸಲಹೆ ಮತ್ತು ಸೂಚನೆಗಳನ್ನು ಕೇಳಿ ತೀರ್ಮಾನಿಸಲು ತುರ್ತು ಸಭೆಯನ್ನು ಇದೇ ಜು.27ರಂದು ಆಯೋಜಿಸಲಾಗಿದೆ.
ಈ ಸಭೆಯನ್ನು ಅಂದು ಸಾಯಂಕಾಲ 4 ಗಂಟೆಗೆ ಮೈಸೂರಿನ ಬಸ್ ಸ್ಟ್ಯಾಂಡ್ ಬಳಿಯ ಪಿಡಬ್ಲ್ಯೂಡಿ ಗೆಸ್ಟ್ ಹೌಸ್ನಲ್ಲಿ ಆಯೋಜಿಲಾಗಿದೆ.
ಹೀಗಾಗಿ ಕೂಟದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ, ಪದಾಧಿಕಾರಿಗಳು ಮತ್ತು ಸಕ್ರಿಯ ಕಾರ್ಯಕರ್ತರು ಜು.27ರ ಭಾನುವಾರ ಸಾಯಂಕಾಲ 4ಗಂಟೆಗೆ ನೌಕರರ ಕೂಟದ ಗೌರವಾಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಗೆ ಆಗಮಿಸಿ ಜು. 29ರಿಂದ ಹಮ್ಮಿಕೊಳ್ಳುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುರಿತು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಸಲಹೆ ಹಾಗೂ ಸೂಚನೆಗಳು ಭಾರಿ ಅಮೂಲ್ಯವಾಗಿದ್ದು ತಾವು ಈ ತುರ್ತು ಸಭೆಯಲ್ಲಿ ಭಾಗವಹಿಸಿ ಅಂತಿಮವಾಗಿ ತೀರ್ಮಾನಿಸಲು ಎರಡು ವಿಭಾಗದ ನೌಕರರು ಭಾಗವಹಿಸಬೇಕೆಂದು ಪದಾಧಿಕಾರಿಗಳು ಕೋರಿದ್ದಾರೆ.
ಇದರ ನಡುವೆ ಜು.29ರಿಂದ ಹಮ್ಮಿಕೊಳ್ಳುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಮೈಸೂರು ನಗರ ಪೊಲೀಸರಿಂದ ಅನುಮತಿ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದೂ ತಿಳಿಸಿದ್ದಾರೆ.
Related









