NEWSನಮ್ಮಜಿಲ್ಲೆನಮ್ಮರಾಜ್ಯ

ಈ ಮೂರು ಅಂಶಗಳ ಪಾಲನೆ ಮಾಡದ KSRTC: ಸಮಸ್ಯೆ ಸುಳಿಯಲ್ಲಿ ನಿವೃತ್ತ ನೌಕರರು – ನಂಜುಂಡೇಗೌಡ

ವಿಜಯಪಥ ಸಮಗ್ರ ಸುದ್ದಿ
  • ನೌಕರರನ್ನು ಹಿಂದಿನಿಂದಲೂ ಯಾಮಾರಿಸಿಕೊಂಡೆ ಬಂದ ಸಾರಿಗೆಯ ಕೆಲ ಅಧಿಕಾರಿಗಳ ನಡೆಗೆ ಆಕ್ರೋಶ

ಬೆಂಗಳೂರು: KSRTC ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿದ್ದ ಪೀರ್ ಸಾಬ್ ಹೊಸಮನಿ ಅವರು 30/04/2014ರಂದು ನಿವೃತ್ತರಾಗಿದ್ದಾರೆ. ಈ ಬಗ್ಗೆ KSRTC ಮಂಗಳೂರು ವಿಭಾಗದ ಅಧಿಕಾರಿಗಳು 01.09.2014 ಕ್ಕೂ ಮೊದಲು ಹಾಗೂ ನಂತರ ನಿವೃತ್ತರಾದ ಎಲ್ಲ ನೌಕರರಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಿಂಚಣಿ ನೀಡುವ ಸಲುವಾಗಿ ಜಂಟಿ ಆಯ್ಕೆ ಪತ್ರವನ್ನು ಸಹಿ ಮಾಡಿ ಮಂಗಳೂರು ವಲಯದ ಪಿಎಫ್ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಅದಕ್ಕೆ ಮಂಗಳೂರು ವಿಭಾಗದ ಪಿಎಫ್ ಅಧಿಕಾರಿಗಳು 28/11/2023 ರಂದು ಪ್ರತಿಕ್ರಿಯಿಸಿದ್ದು, ಪೀರ್ ಸಾಬ್ ಹೊಸಮನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಪಿಎಸ್-95 ಯೋಜನೆ, ಕಾಲಂ 26(6) & 13(3)ರ ನಿಯಮಗಳನ್ನು ಪಾಲನೆ ಮಾಡಿದ ಬಗ್ಗೆ ದಾಖಲೆಗಳನ್ನು ನೀಡಬೇಕೆಂದು ಸೂಚಿಸಿರುವ ಬಗ್ಗೆ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಹಾಗೆಯೇ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ (04/11/2022) ಪ್ರಕಾರ, ಇದಾದ ನಂತರ ಕೇಂದ್ರ ಇಪಿಎಫ್ಒ ಕಚೇರಿಯಿಂದ ಹೊರಡಿಸಿದ ಸುತ್ತೋಲೆ (circular) 29/12/2022, 25/01/2023 ಅನ್ವಯ 01.09.2014ಕ್ಕೂ ಮೊದಲು ನಿವೃತ್ತರಾದವರು, ಜಂಟಿ ಆಯ್ಕೆ ಪತ್ರ ಸಲ್ಲಿಸಲು ಮೂರು ನಿಬಂಧನೆಗಳನ್ನು ವಿಧಿಸಲಾಗಿದೆ ಎಂದು ಪೀರ್ ಸಾಬ್ ಹೊಸಮನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದ್ದಾರೆ.

ಆ ದಾಖಲೆಗಳಲ್ಲಿ ಪ್ರಮುಖವಾದ 1) ಉದ್ಯೋಗದಾತ ಹಾಗೂ ಉದ್ಯೋಗಿ (Employeer & Employee) ಜಂಟಿ ಆಯ್ಕೆ ಪತ್ರ ಸಲ್ಲಿಸಿದ ಬಗ್ಗೆ ದಾಖಲೆ. 2) ಈ ಜಂಟಿ ಆಯ್ಕೆ ಪತ್ರ ತಿರಸ್ಕೃತಗೊಂಡ ಬಗ್ಗೆ ದಾಖಲೆ. 3) ವೇತನ ಸೀಲಿಂಗ್ ಅಂದರೆ ರೂ.5000/-,6500/-, 8.33% ಗಿಂತ ಹೆಚ್ಚುವರಿ ಹಣ ತುಂಬಿದ ಬಗ್ಗೆ ದಾಖಲೆ ನೀಡಬೇಕು. ಆದರೆ ಕೆಎಸ್‌ಆರ್‌ಟಿಸಿ ಇದಕ್ಕೆ ಸಂಬಂಧಿಸಿದಂತೆ ಈ ಮೂರು ಅಂಶಗಳನ್ನು ಸಂಸ್ಥೆಯು ಪಾಲನೆ ಮಾಡಿಲ್ಲ. ಹಾಗಾಗಿ 01/09/2014 ಕ್ಕೂ ಮೊದಲು ನಿವೃತ್ತರಾದ ಪೀರ್ ಸಾಬ್ ಹೊಸಮನಿ, ಹೆಚ್ಚುವರಿ ಪಿಂಚಣಿಗೆ ಅರ್ಹರಲ್ಲ ಎಂದು ತಿಳಿಸಿದೆ.

ಇನ್ನು 01/09/2014 ರ ನಂತರ ನಿವೃತ್ತರಾದ ನೌಕರರಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಿಂಚಣಿ ಪಡೆಯಲು EPFO ತನ್ನ ಪೋರ್ಟೆಲ್ ದಿನಾಂಕ 13/12/2023 ರಲ್ಲಿ ಕೆಲವನ್ನು ಸ್ಪಷ್ಟಪಡಿಸಿದೆ. ಅವುಗಳಲ್ಲಿ 1) ಉದ್ಯೋಗದಾತನು ವೇತನ ಸೀಲಿಂಗ್ ರೂ.5000/-.6500/-. 15000/- ಮೀರಿದ ಉದ್ಯೋಗಿಯ ವೇತನದೊಂದಿಗೆ ಪಿಎಫ್ ಕಚೇರಿಗೆ ಕಳುಹಿಸಿದ ದೇಣಿಗೆಯ ವಿವರಗಳು.

2) ಉದ್ಯೋಗದಾತರಿಂದ ಪಾವತಿಸಬೇಕಾದ ಆಡಳಿತಾತ್ಮಕ ಶುಲ್ಕವನ್ನು ನೀಡಲಾಗಿದೆ ಎಂಬ ಬಗ್ಗೆ ದಾಖಲೆ. 3) ಉದ್ಯೋಗದಾತನು (Employer) ತನ್ನ ನೌಕರನ ವಂತಿಗೆ ಹಣ ಹಾಗೂ ಅದಕ್ಕೆ ಲಗಾಯ್ತಿನಿಂದ ಬಡ್ಡಿ ಲೆಕ್ಕಾಚಾರ ಮಾಡಿ, ಇಪಿಎಸ್ ಕಾಯಿದೆ ಪ್ರಕಾರ ಸಂದಾಯಿಸಿದ ಬಗ್ಗೆ ದೃಢೀಕರಿಸಬೇಕು.

4) ಈ ಎಲ್ಲಾ ಅಂಶಗಳ ಬಗ್ಗೆ ಪಿಎಫ್ ಅಧಿಕಾರಿಗಳು ದಾಖಲೆಗಳನ್ನು ಕ್ರೌಡಿಕರಿಸಿ, ಉದ್ಯೋಗದಾತರಿಂದ ಪಡೆಯುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. 5) ನೌಕರನ ನಿವೃತ್ತಿಯ ಹಿಂದಿನ 60 ತಿಂಗಳ ಸರಾಸರಿ ವೇತನವನ್ನು ಲೆಕ್ಕ ಹಾಕಿ ಆತನ ಒಟ್ಟು ಸೇವಾವಧಿಯನ್ನು ಗಣನೆಗೆ ತೆಗೆದುಕೊಂಡು 70 ರಿಂದ ಭಾಗಿಸಿದರೆ ಬರುವ ಮೊತ್ತವೇ ಆತನ ಪಿಂಚಣಿ ಆಗಿರುತ್ತದೆ.

6) ಉದ್ಯೋಗಿಯಿಂದ ಭರಿಸುವ( contribution) ಅಥವಾ ಉದ್ಯೋಗಿಗೆ ನೀಡುವ ಪಿಂಚಣಿ ಮೊತ್ತವು(arriers of pension) ಆದಾಯ ತೆರಿಗೆ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. 7) ಆನ್ಲೈನ್ ನಲ್ಲಿ ಉದ್ಯೋಗಿಯು(employee) ಸೂಕ್ತ ದಾಖಲೆಗಳನ್ನು ಅಪ್ ಲೋಡ್ ಮಾಡಿಲ್ಲ ಎಂಬ ಕಾರಣದ ಮೇಲೆ ಉದ್ಯೋಗಿಯ ಅರ್ಜಿಯನ್ನು ತಿರಸ್ಕರಿಸಲು ಬರುವುದಿಲ್ಲ ಎಂದು ಇಪಿಎಫ್ಒ ಸ್ಪಷ್ಟಪಡಿಸಿದೆ.

ಇನ್ನು ಒಟ್ಟಾರೆ, 01/09/2014ರ ನಂತರ ನಿವೃತ್ತರಾದ ನೌಕರರು ಹಾಗೂ ಹಾಲಿ ಸೇವೆಯಲ್ಲಿರುವ ನೌಕರರು ಈ ಮೊದಲೇ ತಿಳಿಸಿರುವಂತೆ ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಿದ್ದಾರೆ. ಆದರೆ, 01/09/2014 ಕ್ಕೂ ಮೊದಲು ನಿವೃತ್ತರಾದವರಿಗೆ ಈ ಸೌಲಭ್ಯ ಸದ್ಯಕ್ಕೆ ಲಭ್ಯವಿಲ್ಲ.

ಹೀಗಾಗಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ, ಇತ್ತೀಚೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಜರುಗಿದ ಬೃಹತ್ ಪ್ರತಿಭಟನಾ ಸಭೆ ಹಾಗೂ ಜಂತರ್ ಮಂತರ್‌ನಲ್ಲಿ ನಡೆದ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕೆಂದು ಪಟ್ಟು ಹಿಡಿಯಲಾಗಿತ್ತು.

ಅದಕ್ಕೆ ಕೇಂದ್ರ ಸರ್ಕಾರ ಮಣಿದು ಕೇಂದ್ರದ ಉದ್ಯೋಗ ಹಾಗೂ ಕಾರ್ಮಿಕ ಸಚಿವ ( minister for labour & employment) ಭೂಪೇಂದ್ರ ಯಾದವ್ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು, ಖುದ್ದು ಎನ್ಎಸಿ ಮುಖಂಡರನ್ನು ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದಾರೆ. ಆ ಬಳಿ EPS ನಿವೃತ್ತರ ಎಲ್ಲ ಬೇಡಿಕೆಗಳನ್ನು ಇದೇ ಡಿ.31ರ ಒಳಗೆ ಬಗೆಹರಿಸಿ ಕೊಡುವುದಾಗಿ ಸಂಪೂರ್ಣ ಭರವಸೆ ನೀಡಿದ್ದಾರೆ ಎಂದು ನಂಜುಂಡೇಗೌಡ ತಿಳಿಸಿದ್ದಾರೆ.

ದೆಹಲಿಯ ಕೊರೆಯುವ ಚಳಿಯಲ್ಲಿ ಅಶೋಕ್ ರಾವುತ್ ಅವರು ತಮ್ಮ ಹೋರಾಟವನ್ನು ಇತರೆ ಮುಖಂಡರ ಜತೆ ಜೀವಪಣಕ್ಕಿಟ್ಟು ತಮ್ಮ ಹೋರಾಟ ಮುಂದುವರಿಸಿದ್ದು, ಕರ್ನಾಟಕದಿಂದ NAC ಸಂಯೋಜಕರಾದ ರಮಕಾಂತ್ ನರಗುಂದ ಈ ಚಳವಳಿಯಲ್ಲಿ ಭಾಗವಹಿಸಿದ್ದು, ಕೇಂದ್ರ ಸರ್ಕಾರದ ಜತೆ ನಡೆಸುವ ಮಾತುಕತೆ ಫಲಪ್ರದವಾಗಿ, ವೃದ್ಧ ಜೀವಗಳಿಗೆ, ತಮ್ಮ ಬದುಕಿನ ಮುಸ್ಸಂಜೆ ಕಾಲದಲ್ಲಿ ಈಗಲಾದರೂ ನೆಮ್ಮದಿ ಸಿಗಲಿ ಎಂದು ಹೇಳಿದರು.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ ನಿರಂತರ ಮಳೆ- BBMP ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ: ತುಷಾರ್ ಗಿರಿನಾಥ್