NEWSನಮ್ಮಜಿಲ್ಲೆನಮ್ಮರಾಜ್ಯ

KSRTC: TV9 ನೇರ ಪ್ರಸಾರದಲ್ಲಿ ಸಾರಿಗೆ ನೌಕರರ ಸಮಸ್ಯೆ ಅನಾವರಣ – ಕೊಟ್ಟ ಭರವಸೆ ಈಡೇರಿಸುವ ಆಶ್ವಾಸನೆ ಕೊಟ್ಟ ಸಚಿವರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ 2023ರ ಮೇ 10ರಂದು ನಡೆದ ವಿಧಾನಸಭೆ ಚುನಾವಣೆ ವೇಳೆ ಸಾರಿಗೆ ನೌಕರರಿಗೆ ಪ್ರಣಾಳಿಕೆ ಮೂಲಕ ಕೊಟ್ಟಿರುವ ಮಾತನ್ನು ಕಾಂಗ್ರೆಸ್‌ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿ ಹಾಗೂ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ಟಿವಿ9 ಕನ್ನಡ ಈ ಹಿಂದೆ ಹಮ್ಮಿಕೊಂಡಿದ್ದ ಕನಸಿನ ಕರುನಾಡು ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರು, ಕಾನೂನಾತ್ಮಕವಾಗಿಯೇ ಸಿಗಬೇಕಿರುವ ಸೌಲಭ್ಯದಿಂದ ಸಾರಿಗೆ ನೌಕರರು ವಂಚಿತರಾಗಿದ್ದಾರೆ. ನಮ್ಮಲ್ಲಿ ಇರುವ ವೇತನ ತಾರತಮ್ಯತೆಯನ್ನು ಸರಿಪಡಿಸಬೇಕು ಎಂದರು.

ನಮಗೂ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು. ಸಾರಿಗೆ ನೌಕರರಿಗೆ ಕಳೆದ ಬಾರಿ ಆಗಿರುವ ಶೇ.15ರಷ್ಟು ವೇತನ ಹೆಚ್ಚಳವನ್ನು ಸೇರಿಸಿಕೊಂಡರೂ 19,935 ರೂಪಾಯಿ ಬೇಸಿಕ್‌ ಇದ್ದರೆ ಇದೇ ಸರಿಸಮಾನ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ 25,038 ರೂ.ಗಳು ಬೇಸಿಕ್‌ ಇದೆ. ಈ ವ್ಯತ್ಯಾಸವನ್ನು ಸರಿಪಡಿಸಬೇಕಾದರೆ ನಮಗೂ ವೇತನ ಆಯೋಗ ಮಾದರಿಯಲ್ಲೇ ವೇತನ ಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಟಿವಿ9  ಮುಖ್ಯ ನಿರ್ಮಾಪಕ (Chief producer) ರಂಗನಾಥ್ ಭಾರದ್ವಾಜ್ ಅವರು ಹೌದು ಸಾರಿಗೆ ನೌಕರರು ಶ್ರಮ ಜೀವಿಗಳಾದರೂ ಅವರು ಪ್ರತಿನಿತ್ಯ ಸಾಯಬೇಕು ಅಂತ ಪರಿಸ್ಥಿತಿ  ಇದೆ. ಇದನ್ನು ನೀವು ಒಪ್ಪುತ್ತೀರ ಎಂದು ಸಾರಿಗೆ ಸಚಿವರನ್ನು ಪ್ರಶ್ನಿಸಿದರು.

ಸಾರಿಗೆ ಸಚಿವರು ಅದನ್ನು ಒಪ್ಪಿಕೊಂಡರು. ಜತೆಗೆ ಸಾರಿಗೆ ನಿಗಮಗಳಿಗೆ ಸರ್ಕಾರಗಳು ಸಪೋರ್ಟ್‌ ಮಾಡಬೇಕು. ಕಾರಣ ಈ ನಿಗಮಗಳು ಸೇವೆಗಾಗಿ ಇರುವುದು ಲಾಭದ ದೃಷ್ಟಿಯಲ್ಲಿ ನೋಡಬಾರದು ಎಂದು ತಮ್ಮದೇ ಸರ್ಕಾರ ಸೇರಿದಂತೆ ಎಲ್ಲ ಸರ್ಕಾರಗಳು ಸಾರಿಗೆ ನಿಗಮಗಳನ್ನು ಲಾಭದ ದೃಷ್ಟಿಯಿಂದ ನೋಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು 2015ರಲ್ಲಿ ಪ್ರಯಾಣದ ಟಿಕೆಟ್‌ ದರವನ್ನು ಹೆಚ್ಚಿಸಿದ್ದು ಬಿಟ್ಟರೆ ಈವರೆಗೂ ಹೆಚ್ಚಳವಾಗಿಲ್ಲ. ಆದರೆ ಅಂದು ಡೀಸೆಲ್‌ ದರ ಎಷ್ಟಿತ್ತು ಇಂದು ಎಷ್ಟಿದೆ. ಹೀಗಾಗಿ ಸರ್ಕಾರಗಳು ಸಾರಿಗೆ ನಿಗಮಗಳನ್ನು ಸಪೋರ್ಟ್‌ ಮಾಡಬೇಕು ಎಂದು ಸಚಿವರೇ ಮನವಿ ಮಾಡಿದರು.

ಇನ್ನು ಇದಕ್ಕೂ ಮೊದಲು ಮಾತನಾಡಿದ ಸಚಿವರು ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ಸಾರಿಗೆ ನೌಕರರು ವೇತನ ಪಡೆಯುತ್ತಿದ್ದಾರೆ. ಆದರೆ ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ಕಡಿಮೆ ಇರುತ್ತದೆ ಎಂದು  ಹೇಳಿದರು.

ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿದ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿ ಚಂದ್ರು ಇಲ್ಲ ಸಾರ್‌ ಇದು ಕೆಲವರು ನಿಮ್ಮನ್ನು ಯಾರೋ ದಾರಿ ತಪ್ಪಿಸಿದ್ದಾರೆ ಎಂದ ಅವರು, ನಾವು 15-20 ವರ್ಷ ಸೇವೆ ಮಾಡಿದರೂ ನಮಗೆ 20-30 ಸಾವಿರ ರೂಪಾಯಿ ವೇತನವಿದೆ. ಅದೇ ಸರ್ಕಾರಿ ನೌಕರರಿಗೆ 40-50 ಸಾವಿರ ರೂಪಾಯಿ ಇದೆ. ಅಂದರೆ ಈ ಅಜಗಜಾಂತರ ವ್ಯತ್ಯಾಸವನ್ನು ತಾವು ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಇನ್ನು ಮನಗೆ ಮುಷ್ಕರ ಮಾಡಿ ನೌಕರರ ಮನೆಹಾಳು ಆಗುತ್ತಿರುವುದನ್ನು ತಪ್ಪಿಸಲು  ತಾವು ಈಗಲೇ 7ನೇ ವೇತನ ಆಯೋಗ ಅಳವಡಿಸಿ  ನಾಲ್ಕು ವರ್ಷಕ್ಕೊಮೆ ಹಲವು ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬರುತ್ತಿರುವುದನ್ನು ತಪ್ಪಿಸಬೇಕು. ನೀವೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟ ಸರಿ ಸಮಾನ ವೇತನ  ಭರವಸೆಯನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿದರು.

ಇನ್ನು 2021ರ ಮುಷ್ಕರದ ವೇಳೆ 2500 ನೌಕರರನ್ನು ವಜಾ ಮಾಡಲಾಗಿತ್ತು. ಆ ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಎಫ್‌ಐಆರ್‌ ಆಗಿದೆ  ಎಂಬ ಕಾರಣಕ್ಕೆ ಇನ್ನೂ 64 ಮಂದಿಯನ್ನು ಈವರೆಗೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಅವರನ್ನು ತೆಗೆದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.

ಅದಕ್ಕೆ ಟಿವಿ9ನ ರಂಗನಾಥ್ ಭಾರದ್ವಾಜ್ ಅವರು ಧ್ವನಿಗೂಡಿಸಿ 64 ಮಂದಿಯನ್ನು ತೆಗೆದುಕೊಳ್ಳುತ್ತೀರಾ ಎಂದರು. ಈಗಾಗಲೇ ಕೋರ್ಟ್‌ನಲ್ಲಿ ಪ್ರಕರಣ ಮುಗಿಯುತ್ತಾ ಬಂದಿದೆ ನಾವು ಆ 64 ಮಂದಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಒಟ್ಟಾರೆ ಟಿವಿ9 ಕನ್ನಡ ವಾಹಿನಿ ನಡೆಸಿದ ಕನಸಿನ ಕರುನಾಡು ಕಾರ್ಯಕ್ರಮ ನೇರಪ್ರಸಾರದ ಮೂಲಕ  ಸಾರಿಗೆ ನೌಕರರು ಪಡೆಯುತ್ತಿರುವ ವೇತನ ವ್ಯತ್ಯಾಸದ ಬಗ್ಗೆ ಸಾರಿಗೆ ಸಚಿವರಿಗೆ ಸ್ಪಷ್ಟವಾಗಿಯಿತು.  ಕೆಲವರು ಸಚಿವರು ಮತ್ತು ಸರ್ಕಾರದ ದಾರಿ ತಪ್ಪಿಸಿ ನೌಕರರಿಗೆ ಸಿಗಬೇಕಿರುವ ಸೌಲಭ್ಯದಿಂದ ವಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುವುದು ಸಚಿವರ ಹೇಳಿಕೆಯಿಂದಲೇ ಸ್ಪಷ್ಟವಾಯಿತು.

ಹೌದು! ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ಸಾರಿಗೆ ನೌಕರರು ವೇತನ ಪಡೆಯುತ್ತಿದ್ದಾರೆ ಎಂದು ಹಸಿಸುಳ್ಳು ಹೇಳಿ ಸಾರಿಗೆ ಸಚಿವರ ದಿಕ್ಕು ತಪ್ಪಿಸಿರುವುದು ಬಹಳ ಸ್ಪಷ್ಟವಾಗಿ ತಿಳಿಯಿತು. ಇನ್ನು ಇಂಥವರು ಇರುವುದೇ ನೌಕರರ ಮನೆಹಾಳು ಮಾಡುವುದಕ್ಕೇ  ಎಂಬುವುದು ಸಚಿವರಿಗೆ ಈ ಮೂಲಕವಾದರೂ ಅರ್ಥವಾದರೆ ಸಾಕು.

ನೌಕರರು ಕೂಡ ಈ ಬಗ್ಗೆ ಎಚ್ಚೆತ್ತು ಇಂಥ ಮನೆ ಹಾಳುಮಾಡುವ ಐಡಿಯಾವನ್ನು ಸರ್ಕಾರ, ಸಾರಿಗೆ ಸಚಿವರು ಮತ್ತು ಅಧಿಕಾರಿಗಳಿಗೆ ಕೊಡುತ್ತಿರುವವರನ್ನು ದೂರವಿಟ್ಟರೆ ಮುಂದಿನ ದಿನಗಳಲ್ಲಾದರೂ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಪಡೆದು ಇರುವ ಕಷ್ಟದ ಜೀವನವನ್ನು ಸುಧಾರಿಸಿಕೊಳ್ಳಬಹುದು.

ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿ ಕೆಬಿಎನ್‌ಎನ್‌  ನಾಗರಾಜ್‌ ಸೇರಿದಂತೆ ಹಲವರು ಇದ್ದರು.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...