NEWSಸಂಸ್ಕೃತಿಸಿನಿಪಥ

ಮರಂಕಿ ಸಾಲುಂಡಿ ಎಂಬ ಪುಟ್ಟ ಹಳ್ಳಿಗೆ ಆಧುನಿಕತೆ ಸ್ಪರ್ಶ ನೀಡಿದ ಮಾಯಾ ಜಿಂಕೆ

ಪರಸಂಗದ ಗೆಂಡೆತಿಮ್ಮ: ಕೃತಿ ಬಿಡುಗಡೆ, ಪ್ರದರ್ಶನ

ವಿಜಯಪಥ ಸಮಗ್ರ ಸುದ್ದಿ

ನ್ನಡದ ಸೃಜನಶೀಲ ಲೇಖಕ ಕೃಷ್ಣ ಆಲನಹಳ್ಳಿ ಅವರ ಅನನ್ಯ ಕಾದಂಬರಿ ಪರಸಂಗದ ಗೆಂಡೆತಿಮ್ಮ ಕಥಾವಸ್ತು 60 ರ ದಶಕದ್ದು. ಜೀವನೋಪಾಯಕ್ಕೆ ಮೈಸೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ದಿನಬಳಕೆಯ ವಸ್ತುಗಳನ್ನು ಬುಟ್ಟಿಯಲ್ಲಿ ಹೊತ್ತು ವ್ಯಾಪಾರ ಮಾಡುತ್ತಿದ್ದ ಗೆಂಡೆತಿಮ್ಮ. ಈತನ ಸಂಗಾತಿಯಾಗಿ ಬಂದ ಮರಂಕಿ ಪ್ಯಾಟೆ ಹೆಣ್ಣು. ಮರಂಕಿ ಸಾಲುಂಡಿ ಎಂಬ ಪುಟ್ಟ ಹಳ್ಳಿಗೆ ಆಧುನಿಕತೆಯ ಸ್ಪರ್ಶ ನೀಡಿದ ಮಾಯಾ ಜಿಂಕೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಸಾಲುಂಡಿ, ಪ್ಯಾಟೆ ಸೋಕಿಗೆ ಮನಸೋತ ಗೌವಳ್ಳಿ ಹೆಣ್ಣುಮಕ್ಕಳ ಕಂಡ ವ್ಯಾದಿಗ್ರಸ್ತ ಮನಸುಗಳು ಉಂಟುಮಾಡಿದ ತಲ್ಲಣ, ಅಸಹನೆ, ವಿಪ್ಲವ ಇಡೀ ಹಳ್ಳಿಯ ನೆಮ್ಮದಿಗೆ ಭಂಗ ಉಂಟು ಮಾಡಿ ಮರಂಕಿ – ಗೆಂಡೆತಿಮ್ಮನ ಬದುಕಿಗೆ ಕೊಳ್ಳಿ ಇಟ್ಟವು. ಮರಂಕಿಯ ಮೂಲಕ ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟ ಆಧುನಿಕತೆ ಇಂದು ವಿಶ್ವದಾದ್ಯಂತ ವ್ಯಾಪಿಸಿ ನೆಲಮೂಲ ಸಂಸ್ಕೃತಿಯನ್ನೇ ಅಲುಗಾಡಿಸುತ್ತಿರುವುದು ವಿಪರ್ಯಾಸ.

ಪರಸಂಗದ ಗೆಂಡೆತಿಮ್ಮ ಕಥಾವಸ್ತುವಿನ ಕಾಲಘಟ್ಟ, ಜೀವನಕ್ರಮ ಇಂದಿನ ಪೀಳಿಗೆಗೆ ತಿಳಿಸುವುದೇ ಈ ರಂಗಕೃತಿ ಮತ್ತು ರಂಗಪ್ರಯೋಗದ ಉದ್ದೇಶ. ಈ ರಂಗರೂಪವನ್ನು ಸಿದ್ಧಗೊಳಿಸಿರುವ ಡಾ. ಎಂ.ಬೈರೇಗೌಡ ಗ್ರಾಮೀಣ ಹಿನ್ನೆಲೆಯಿಂದ ಬಂದ ದೇಸಿ ಪ್ರತಿಭೆ. ಜಾನಪದ ತಜ್ಞ, ಅಧ್ಯಾಪಕ, ನಾಟಕಕಾರ, ಕವಿ, ನಟ, ನಿರ್ದೇಶಕ, ಪ್ರಕಾಶಕ ಹೀಗೆ ಬಹುಮುಖ ಪ್ರತಿಭೆಯ ಡಾ ಎಂ.ಬೈರೇಗೌಡರು ಕಾದಂಬರಿಯನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸಿದ್ದಾರೆ.

ಈಗಾಗಲೇ ಮೂರು ಯಶಸ್ವೀ ಪ್ರದರ್ಶನಗಳನ್ನು ಕಂಡ ಪರಸಂಗದ ಗೆಂಡೆತಿಮ್ಮ ನಾಟಕದ ನಾಲ್ಕನೇ ಪ್ರದರ್ಶನ ಇದೇ ಜುಲೈ ತಿಂಗಳ 4ನೇ ತಾರೀಖು ಸಂಜೆ 6 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮರುಪ್ರದರ್ಶನ ಆಗುತ್ತಿದೆ. ಜೊತೆಗೆ ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ಡಾ. ಎಂ. ಬೈರೇಗೌಡರ ರಂಗರೂಪದ ಪರಸಂಗದ ಗೆಂಡೆತಿಮ್ಮ ಕೃತಿ ಬಿಡುಗಡೆ ಕಾರ್ಯಕ್ರಮ ಕೂಡ ನೆರವೇರಲಿದೆ.

ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಕೃಷ್ಣ ಆಲನಹಳ್ಳಿ ಅವರ ಮಗ ಪ್ರಧ್ಯುಮ್ನ, ನಾಟಕಕಾರ ಡಾ. ಎಂ. ಬೈರೇಗೌಡ, ಕತೆಗಾರ-ಚಲನಚಿತ್ರ ನಿರ್ದೇಶಕ ಕೃಷ್ಣ ಮಾಸಡಿ, ರೂಪಾಂತರದ ವಿ. ಗಂಗಾಧರ್, ಕೆ. ಕನಕರಾಜ್ ಉಪಸ್ಥಿತರಿರುವರು ಎಂದು ರಂಗನಿರ್ದೇಶಕ ಹಾಗೂ ರೂಪಾಂತರದ ಕೆ.ಎಸ್.ಡಿ.ಎಲ್. ಚಂದ್ರು ತಿಳಿಸಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ